ದ.ರ್ಶನ್ ಪವಿತ್ರ ಬಗ್ಗೆ ಭ ಯಾನಕ ಭವಿಷ್ಯ ನುಡಿದ ಕೋಡಿಶ್ರೀ;

 

ದರ್ಶನ್ & ಉಮಾಪತಿ ನಡುವೆ 2 ವರ್ಷಗಳ ಹಿಂದೆ ದೊಡ್ಡ ಜಗಳ ಆಗಿತ್ತು. ಆಗ ನಿರ್ಮಾಪಕ ಉಮಾಪತಿಗೆ ನಟ ದರ್ಶನ್ & ಗ್ಯಾಂಗ್ ಬೆದರಿಕೆ ಹಾಕಿತ್ತು ಎಂಬ ಆರೋಪ ಕೇಳಿಬಂದಿತ್ತು. ಆದ್ರೆ ಈ ಕುರಿತು ಉಮಾಪತಿ ಯಾವುದೇ ಗುಟ್ಟು ಬಿಟ್ಟುಕೊಡದೆ ಸೈಲೆಂಟ್ ಆಗಿದ್ದರು. ಈಗ ಆ ದಿನ, ಮೈಸೂರಿನ ಕ್ಲಬ್ ಒಂದರಲ್ಲಿ ತಮ್ಮ ಮೇಲೆ ದರ್ಶನ್ & ಗ್ಯಾಂಗ್ ಹೇಗೆಲ್ಲಾ ದೌರ್ಜನ್ಯ ಮಾಡಿತ್ತು? ಎಂಬ ಭಯಾನಕ ಸತ್ಯವನ್ನು ಹೊರ ಹಾಕಿದ್ದಾರೆ ಕನ್ನಡದ ನಿರ್ಮಾಪಕ ಉಮಾಪತಿ.

ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದ ಮಾತ್ರಕ್ಕೆ ದರ್ಶನ್ ಏನು ಮಾಡಿದರೂ ನಡೆಯುತ್ತೆ, ನನ್ನ ಯಾರು ಪ್ರಶ್ನೆ ಮಾಡೋದು? ಅಂತಾ ತಲೆಯಲ್ಲಿ ತುಂಬಿಕೊಂಡಿದ್ದ ಅಂತಾ ಕಾಣುತ್ತದೆ. ಇದೇ ಕಾರಣಕ್ಕೆ ಆತನ ವಿರುದ್ಧ ಹತ್ತಾರು ಕೇಸ್ ದಾಖಲಾಗಿವೆ. ಅದರಲ್ಲೂ, ದರ್ಶನ್ ವಿರುದ್ಧ ಹಲ್ಲೆ ಆರೋಪದ ಕೇಸ್ ಜಾಸ್ತಿ ಇದೆ. ಅದೇ ರೀತಿ ಕನ್ನಡದ ನಿರ್ಮಾಪಕ ಉಮಾಪತಿಗೆ ಕೂಡ, ನಟ ದರ್ಶನ್ ತೂಗುದೀಪ್ & ಗ್ಯಾಂಗ್ ಗನ್ ತೋರಿಸಿ ಬೆದರಿಕೆ ಹಾಕಿತ್ತು ಎಂಬ ಸ್ಫೋಟಕ ವಿಚಾರ ಈಗ ಬಯಲಾಗಿದೆ. 

https://www.youtube.com/live/5ix0eI6vwac?si=oCb3EscZ0PX34FQd

ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ. ಅದು ಏನು ಅಂದ್ರೆ, ಉಮಾಪತಿ ಶ್ರೀನಿವಾಸ್ ವಿರುದ್ಧ 'ರಾಬರ್ಟ್' ಸಿನಿಮಾ ಬಿಡುಗಡೆ ನಂತರ ಇದೇ ದರ್ಶನ್ & ಗ್ಯಾಂಗ್ ರೊಚ್ಚಿಗೆದ್ದಿತ್ತು. ಅಲ್ಲದೆ ಉಮಾಪತಿಗೆ ಎಚ್ಚರಿಕೆ ಕೂಡ ನೀಡಿತ್ತು ಎನ್ನುವ ಆರೋಪ ಕೇಳಿಬಂದಿದೆ. ಮೈಸೂರಿನ ಖಾಸಗಿ ಕ್ಲಬ್‌ಗೆ ಉಮಾಪತಿಯನ್ನ ಕರೆಸಿಕೊಂಡಿದ್ದ ಇದೇ ದರ್ಶನ್ & ಗ್ಯಾಂಗ್ ಸದಸ್ಯರು, ನಿರ್ಮಾಪಕ ಉಮಾಪತಿ ಎದುರಲ್ಲಿ ಇದ್ದ ಟೇಬಲ್ ಮೇಲೆಯೇ ಗನ್ ಇಟ್ಟು ಬೆದರಿಕೆ ಕೂಡ ಹಾಕಿತ್ತು ಎಂಬ ಆರೋಪ ಕೇಳಿಬಂದಿದೆ. ಆದರೆ ಆ ಸಮಯದಲ್ಲಿ ನಾನು ಬದುಕಿ ಬರ್ತೀನಿ ಎಂಬ ನಂಬಿಕೆಯೇ ಇರಲಿಲ್ಲ ಎಂದು ಉಮಾಪತಿ ಈಗ ಹೇಳಿದ್ದಾರೆ. ಪವಿತ್ರಾಗೆ ಬಾಯಿಗೆ ಬಂದಂತೆ ಬಯ್ಯುತ್ತಾರೆ ದರ್ಶನ್ ಎಂದಿದ್ದಾರೆ .

ಕರ್ನಾಟಕದಲ್ಲಿ ದರ್ಶನ್ ದೊಡ್ಡ ಹೆಸರು ಮಾಡಿದ್ದಾನೆ. ನಟನೆ ಮೂಲಕ ಕೋಟ್ಯಂತರ ಫ್ಯಾನ್ಸ್ ಸಂಪಾದನೆ ಮಾಡಿದ್ದಾನೆ. ಇದೇ ಕಾರಣಕ್ಕೆ ದರ್ಶನ್‌ಗೆ ದೊಡ್ಡ ಜವಾಬ್ದಾರಿ ಇತ್ತು. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇದ್ದು, ಸರಿಯಾಗಿ ನಡೆದುಕೊಳ್ಳಬೇಕಿದ್ದ ಈತ ಕೆಟ್ಟದಾಗಿ ನಡೆದುಕೊಂಡು ಈಗ ಕಂಬಿ ಎಣಿಸುತ್ತಿದ್ದಾನೆ. ಅದರಲ್ಲೂ ನಟ ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗುವ ಮೊದಲು, ಆತ ಮಾಡಿದ ಕೃತ್ಯದ ವಿಡಿಯೋಗಳನ್ನ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವೀಕ್ಷಣೆ ಮಾಡಿದ್ದರಂತೆ. ಖುದ್ದು ಬೆಂಗಳೂರು ಕಮೀಷನರ್ ದರ್ಶನ್ ಅಟ್ಟಹಾಸದ ವಿಡಿಯೋ ತೋರಿಸಿ, ಸಿಎಂ ಬಳಿ ಅನುಮತಿ ಪಡೆದು ಕೊಲೆ ಆರೋಪಿ ದರ್ಶನ್ ಬಂಧಿಸಿದ್ದರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.