ಮುಸ್ಲಿಮರು ನಿಮ್ಮ ಜೊತೆ ಇರಲ್ಲ, ಬಿಜೆಪಿ ಬಿಟ್ಟು ಬನ್ನಿ ಎಂದ ಯುವಕ ಬೆಂಕಿ ಮಾತಿಗೆ ಸಿಡಿದೆದ್ದ ನಿಖಿಲ್

 

ಜನತಾದಳದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ಬಿಜೆಪಿ ಮೈತ್ರಿಯ ವಿಚಾರದಲ್ಲಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ನೀವು ಬಿಜೆಪಿ ಜೊತೆ ಸೇರಿದ್ದೀರಾ, ಹಾಗಾದರೆ ನಿಮಗೆ ಮುಸ್ಲಿಂ ಮತದಾರರ ಬೆಂಬಲ ಬೇಡವಾ?” ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ನಿಖಿಲ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ, “ನಾನು ಯಾವುದೇ ಧರ್ಮದ ವಿರುದ್ಧ ಅಲ್ಲ. ಎಲ್ಲರೂ ನನ್ನ ತಮ್ಮರು. ಆದರೆ ರಾಜ್ಯದ ಹಿತಕ್ಕಾಗಿ ರಾಜಕೀಯ ಮೈತ್ರಿ ಅಗತ್ಯವಿದೆ” ಎಂದು ಸ್ಪಷ್ಟನೆ ನೀಡಿದ್ರು. ಅವರ ಈ ಹೇಳಿಕೆ ಕೆಲವರಲ್ಲಿ ಮೆಚ್ಚುಗೆಗೂ, ಕೆಲವರಲ್ಲಿ ಅಸಮಾಧಾನಕ್ಕೂ ಕಾರಣವಾಯಿತು.ಜಿಡಿಎಸ್ ಪಕ್ಷದ ಪರಂಪರೆಯ ಮತದಾರರಲ್ಲಿ ಮುಸ್ಲಿಂ ಸಮುದಾಯದ ಬೆಂಬಲ ಪ್ರಮುಖವಾಗಿದೆ. ಆದರೆ ಬಿಜೆಪಿ ಜೊತೆ ಮೈತ್ರಿ ಮಾಡಿದ ನಂತರ ಈ ವೋಟ್‌ಬ್ಯಾಂಕ್ ಎಷ್ಟು ಉಳಿಯುತ್ತದೆ ಎಂಬ ಪ್ರಶ್ನೆ ಪಕ್ಷದೊಳಗೂ ಚರ್ಚೆಯಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ನಿಖಿಲ್ ಕುಮಾರಸ್ವಾಮಿ ತಮ್ಮ ತಂದೆ ಎಚ್.ಡಿ. ಕುಮಾರಸ್ವಾಮಿ ಅವರ ರೀತಿಯೇ ರಾಜಕೀಯ ಸಮತೋಲನ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಯುವ ಮುಖವಾಗಿ ತಮ್ಮದೇ ಇಮೇಜ್ ನಿರ್ಮಾಣ ಮಾಡುವ ಹಂತದಲ್ಲಿರುವ ನಿಖಿಲ್, ಮುಂಬರುವ ಚುನಾವಣೆಗಳಲ್ಲಿ ತಾನು ಪ್ರಬಲ ನಾಯಕನಾಗಿ ತೋರಿಸಿಕೊಳ್ಳಬೇಕಾದ ಸವಾಲಿನ ಹಂತದಲ್ಲಿದ್ದಾರೆ. <a style="border: 0px; overflow: hidden" href=https://youtube.com/embed/kHrGpgGGgJw?autoplay=1&mute=1><img src=https://img.youtube.com/vi/kHrGpgGGgJw/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಮುಂದಿನ ಚುನಾವಣೆಯಲ್ಲಿ ಜಿಡಿಎಸ್-ಬಿಜೆಪಿ ಮೈತ್ರಿಯ ಫಲಿತಾಂಶ ಮತ್ತು ಮುಸ್ಲಿಂ ಮತದಾರರ ಪ್ರತಿಕ್ರಿಯೆ – ನಿಖಿಲ್ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಲಿದೆ. ಒಟ್ಟಿನಲ್ಲಿ ಕುಮಾರಸ್ವಾಮಿ ಅವರ ಹೆಸರಿನಿಂದಲೇ ನೀವು ರಾಜಕೀಯದಲ್ಲಿ ಇದ್ದೀರಿ ಇಲ್ಲವಾದರೆ 3 ಸಲ ಸೋತರೆ ಯಾವುದೇ ಪಕ್ಷದಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಟಿವಿ ಪರದೆಯ ಮೇಲೆ ನಡೆದ ಒಂದು ಚರ್ಚೆಯಲ್ಲಿ ಮಾತುಗಳು ಕೇಳಿಬಂದಿವೆ.