ಸ್ವರ್ಣ ನದಿಯಲ್ಲಿ ಚಿನ್ನದ ಸರ ಕಳೆದುಕೊಂಡಿದ್ದ ಯುವಕ, ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಹರಕೆ ಹೊತ್ತ ತಕ್ಷಣ ಚಿನ್ನ ಪ್ರತ್ಯಕ್ಷ

 | 
Bs

ದೇವರಿಲ್ಲ, ಕಲ್ಲು ಮೂರ್ತಿ ಅದಕ್ಕೆ ವಿಶೇಷ ಶಕ್ತಿಯಿಲ್ಲ ಎನ್ನುವುದು ಕೆಲವರ ಮಾತಾದರೆ ಇನ್ನು ಕೆಲವರು ದೃಢವಾಗಿ ದೇವರನ್ನು ನಂಬುವ ಹಾಗೂ ದೇವರಿಗೆ ತಲೆ ಬಾಗುವ ಜನರನ್ನು ನಾವು ಕಾಣ ಬಹುದಾಗಿದೆ. ಇದೀಗ ಮತ್ತೊಮ್ಮೆ ದೇವರೆನ್ನುವ ಶಕ್ತಿ ಇದೆ ಎಂದು ಈ ಘಟನೆಯಿಂದ ಸಾಬೀತಾಗಿದೆ. 

ಹೌದು ನದಿಯಲ್ಲಿ ಈಜಲು ಹೋಗಿ ಚಿನ್ನದ ಸರ ಕಳೆದುಕೊಂಡು ದಿಕ್ಕೇ ತೋಚದಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇವಿಯನ್ನು ಪ್ರಾರ್ಥಿಸಿದ ಅರ್ಧ ಗಂಟೆಯಲ್ಲೇ ಚಿನ್ನದ ಸರ ಸಿಕ್ಕಿರುವ ಘಟನೆ ಪರ್ಕಳದ ಹೆರ್ಗ ಗ್ರಾಮದಲ್ಲಿ ನಡೆದಿದೆ. ಮಲ್ಪೆ ಮೂಲದ ಕಿಶನ್ ಕೋಟ್ಯಾನ್ ಮಣಿಪಾಲ ಎಂಐಟಿಯಲ್ಲಿ ವಿದ್ಯಾರ್ಥಿ ಈತ. 

ಸ್ನೇಹಿತರೊಂದಿಗೆ ಸ್ವರ್ಣ ನದಿಯಲ್ಲಿ  ಈಜಲು ಹೋಗಿದ್ದ ವೇಳೆ ಮೂರು ಲಕ್ಷ ಮೌಲ್ಯದ ಚಿನ್ನದ ಸರ ಕಳೆದುಕೊಂಡಿದ್ದ. ಎರಡು‌ ದಿನ ಎಷ್ಟೇ ಹುಡುಕಾಡಿದ್ರೂ ಸಿಕ್ಕಿರಲಿಲ್ಲ.ಕೊನೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಸಹಾಯಕ್ಕೆ ಧಾವಿಸಿ ಹುಡುಕಾಡಿದ್ರು ಆಗಲೂ ಸಿಗದಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇವಿಯನ್ನು  ಸ್ಮರಿಸಿ ಬೇಡಿಕೊಂಡಿದ್ದಾನೆ. 

ಹೀಗೆ ಬೇಡಿಕೊಂಡ ಅರ್ಧ ಗಂಟೆಯಲ್ಲಿ 30 ಅಡಿ ನೀರಿನಲ್ಲಿ ಬಿದ್ದಿದ್ದ ಚಿನ್ನದ ಸರವು ಈಶ್ವರ್ ಮಲ್ಪೆ ಅವರಿಗೆ ಸಿಕ್ಕಿದೆ. ಹೀಗೆ ಸಿಕ್ಕಿರುವ ಚಿನ್ನದ ಸರವನ್ನ ಮಾಲೀಕ ಕಿಶನ್ ಅವರಿಗೆ ಹಸ್ತಾಂತರಿಸಿದ್ದಾರೆ. ಇದು ಪವಾಡವೋ, ಆಕಸ್ಮಿಕವೋ ಒಟ್ಟಾರೆ ಕಳೆದುಕೊಂಡಿದ್ದ ಚಿನ್ನದ ಸರ ಮತ್ತೆ ಪಡೆದ ಕಿಶನ್ ಫುಲ್ ಖುಷ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.