ಬಹುದಿನಗಳ ಬಳಿಕ ಓಮ್ಮೆಲೆ ಸಿಡಿದೆದ್ದು ನಿಂತ ಅಜ್ಜಿ; ಪ್ರದೀಪ್ ಈಶ್ವರ್ ತಬ್ಬಿಬ್ಬು

 | 
Uu

ಕೆಲ ದಿನಗಳ ಹಿಂದಷ್ಟೇ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದ್ದು, ಯಾವುದೇ ಕಾರ್ಯಕ್ರಮಗಳಿಗೆ ಹಣ ಇಲ್ಲದೇ ಸರ್ಕಾರ ದಿವಾಳಿಯಾಗಿದೆ. ಭೀಕರ ಬರದಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಪರಿಹಾರ ನೀಡುವ ಯೋಗ್ಯತೆಯೂ ಇಲ್ಲದಂತಾಗಿದೆ ಈ ಕಾಂಗ್ರೆಸ್ ಸರ್ಕಾರಕ್ಕೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದರು.

ಅದರ ಬೆನ್ನಲ್ಲೇ ಇದೀಗ ವಯಸ್ಸಾದ ಮಹಿಳೆಯೊಬ್ಬಳು ಗ್ಯಾರಂಟಿ ಯೋಜನೆಗಳ ಪ್ರಯೋಜನ ನಿಜವಾಗಿ ಸಿಗಬೇಕಾದವರಿಗೆ ಸಿಗುತ್ತಿಲ್ಲ. ಯಾರಿಗೆ ಬೇಕಿತ್ತು ಬಿಟ್ಟಿ ಭಾಗ್ಯಗಳು. ಜನ ದುಡ್ಡು ಬಂದರೆ ಖುಷಿ ಪಡ್ತಾರೆ ಹೋದ್ರೆ ದುಃಖ ಪಡ್ತಾರೆ ಇದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.

ಜನ ತೆರಿಗೆಯ ಹಣ ಕಟ್ಟುತ್ತಾರೆ ಅದನ್ನ ಒಳ್ಳೆಯ ಕಾರ್ಯಕ್ಕೆ. ಬಳಸಿದರೆ ಸೈ ಇಲ್ಲವಾದರೆ ಎಲ್ಲವೂ ವೇಸ್ಟ್ ಎಂದು ಹೇಳಿ ಚಿಕ್ಕಬಳ್ಳಪುರದ ಎಂ ಎಲ್ಎ ಪ್ರದೀಪ್ ಈಶ್ವರ್ ಅವರನ್ನು ಕೊಂದಾಡಿದ್ದಾಳೆ. ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದರೂ ಜನರ ಮನದಲ್ಲಿ ಅಚ್ಹೊತ್ತಾಗಿದ್ದಾರೆ. ಕೇಳದೇ ಬಹಳಷ್ಟು ಸೌಕರ್ಯ ಅಭಿವೃದ್ಧಿ ಮಾಡಿದ್ದಾರೆ.

 ಅತಿಯಾದ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬುದನ್ನು ಬಿಟ್ಟರೆ ಮತ್ತೆಲ್ಲ ಒಳ್ಳೆಯದೇ ಎಂದು ಹೇಳಿದ್ದಾರೆ. ಇನ್ನು  ಇದು ಕೇವಲ ಇವರ ಅಭಿಪ್ರಾಯ ಮಾತ್ರವಲ್ಲ ಜನರ ಅಭಿಪ್ರಾಯ ಕೂಡಾ ಹೌದು ಎಂದು ತಿಳಿದುಬಂದಿದೆ.