ಬಿಗ್ ಬಾಸ್ ವಿನ್ನರ್ ಬಗ್ಗೆ ಭವಿಷ್ಯ ನುಡಿದ ಅಮ್ಮನವರು, ವಿನಯ್ ಗೌಡ ಕೈಯಲ್ಲಿ ಟ್ರೋಫಿ

ಹಿಂದಿನ ವಾರಾಂತ್ಯದಲ್ಲಿ ನಮ್ರತಾ ಒಬ್ಬರು ಸದಸ್ಯರನ್ನು ಕಳೆದುಕೊಂಡ ಬಿಗ್ಬಾಸ್ ಮನೆ ಇನ್ನಷ್ಟು ಖಾಲಿಯಾಗಿದೆ. ಆದರೆ ಇರುವ ಆರು ಜನ ಸದಸ್ಯರ ನಡುವಿನ ತುರುಸಿನ ಸ್ಪರ್ಧೆಗೆ ಕಿಡಿ ಮತ್ತಷ್ಟು ಜೋರಾಗಿ ಉರಿಯುತ್ತಿದೆ. ಬಿಗ್ಬಾಸ್ ಮನೆಯಲ್ಲಿ ಈ ಸೀಸನ್ ಕೊನೆಯ ವಾರ ಹೇಗಿರುತ್ತದೆ? ಯಾರು ವಿನ್ ಆಗ್ತಾರೆ?ಈ ಪ್ರಶ್ನೆ ಅಸಂಖ್ಯಾತ ಪ್ರೇಕ್ಷಕರ ಮನದಲ್ಲಿ ಕುತೂಹಲ ಹುಟ್ಟಿಸಿದೆ.
ಈ ಮೊದಲು ಹೇಳಿದಂತೆ, ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಒಟ್ಟು ಐವರು ಇರಲಿದ್ದಾರೆ ಎನ್ನಲಾಗಿತ್ತು. ಆದರೆ, ಭಾನುವಾರದ ಏಪಿಸೋಡ್ನಲ್ಲಿ ಐವರ ಬದಲು ಆರು ಜನ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿರಲಿದ್ದಾರೆ ಎಂಬ ವಿಚಾರವನ್ನು ತಿಳಿಸಿದ ಸುದೀಪ್, ಆರನೇ ಸ್ಪರ್ಧಿಯಾಗಿ ಕಾರ್ತಿಕ್ ಅವರನ್ನು ಉಳಿಸಿಕೊಂಡು, ನಮ್ರತಾ ಎಲಿಮಿನೇಟ್ ಆದರು. ಸದ್ಯ ಆ ಆರು ಜನ ಯಾರೆಂದರೆ, ಈಗಾಗಲೇ ಸಂಗೀತಾ ಫಿನಾಲೆ ತಲುಪಿದ ಮೊದಲ ಸ್ಪರ್ಧಿ. ನಾಮಿನೇಷನ್ ಆಗದೇ ಉಳಿದಿದ್ದ ತುಕಾಲಿ ಸಂತೋಷ್ ಸಹ ಫಿನಾಲೆ ತಲುಪಿದ್ದರು.
ಇತ್ತ ವರ್ತೂರು ಸಂತೋಷ್ ಮೂರನೇ ಸ್ಪರ್ಧಿಯಾಗಿ ಫಿನಾಲೆ ತಲುಪಿದರೆ, ವಿನಯ್ ಗೌಡ, ಡ್ರೋಣ್ ಪ್ರತಾಪ್ ಸಹ ಫಿನಾಲೆ ವೇದಿಕೆ ಹತ್ತಲು ವೋಟಿಂಗ್ ಆಧಾರದ ಮೇಲೆ ಸೇಫ್ ಆದರು. ಜಗತ್ತಿನೆದುರು ಎಷ್ಟಾದರೂ ಸುಳ್ಳು ಹೇಳಬಹುದು, ತಮ್ಮನ್ನು ತಾವು ಬೇರೆ ಏನೋ ಆಗಿ ಪ್ರೊಜಕ್ಟ್ ಮಾಡಿಕೊಳ್ಳಬಹುದು. ಆಕ್ಟ್ ಮಾಡಬಹುದು, ಯಾಮಾರಿಸಬಹುದು. ಆದರೆ ಆತ್ಮಸಾಕ್ಷಿಯ ಕನ್ನಡಿಯ ಎದುರು ನಿಂತಾಗ ನಮಗೆ ಎದುರಾಗುವುದು ಸುತ್ತಲಿನ ಜಗತ್ತಲ್ಲ. ಅಲ್ಲಿನ ಜೈಕಾರ, ಹೀಗಳಿಕೆಗಳಲ್ಲ. ಹೊಗಳಿಕೆ ತೆಗಳಿಕೆಗಳಲ್ಲ… ಬದಲಾಗಿ ಆತ್ಮಸಾಕ್ಷಿಯ ಕನ್ನಡಿಯ ಎದುರು ಕಾಣಿಸುವುದು ನಮ್ಮ ಚಿತ್ರವೇ.
ಅದು ನಮ್ಮೊಳಗಿನ ನಿಜದ ಚಿತ್ರ. ಅಲ್ಲಿ ನಮ್ಮ ಚಿತ್ರದ ಜೊತೆಗೆ ಕಾಣಿಸುವುದು ಹೊರಜಗತ್ತಿನೆದುರು ನಾವು ನಡೆದುಕೊಂಡ ರೀತಿ. ಅದು ಪ್ರಾಮಾಣಿಕವಾಗಿದ್ದರೆ ಹೂವಂತೆ ನೇವರಿಸುತ್ತದೆ. ಅಪ್ರಾಮಾಣಿಕವಾಗಿದ್ದರೆ ಮುಳ್ಳಂತೆ ಚುಚ್ಚುತ್ತದೆ. ಇಂಥದ್ದೊಂದು ಆತ್ಮಸಾಕ್ಷಿಯ ಕನ್ನಡಿ ಈಗ ಬಿಗ್ಬಾಸ್ ಮನೆಯ ಫಿನಾಲೆ ವಾರದ ಆರು ಸ್ಪರ್ಧಿಗಳ ಎದುರಿಗೆ ಇಡಲಾಗಿದೆ. ಅದರಂತೇ ದೇವಿಗೆ ಈಗ ಹೂವನ್ನು ಮೂಡಿಸಿ ಯಾರು ವಿನ್ ಆಗ್ತಾರೆ ಹೂವಿನ ಪ್ರಸಾದ ನೀಡು ಎಂದು ಬೇಡಲಾಗಿದ್ದು.
ವಿನಯ್, ಸಂಗೀತಾ, ತುಕಾಲಿ ಸಂತೋಷ, ಪ್ರತಾಪ್ ಅವರ ಹೆಸರು ಹೇಳುತ್ತಿದ್ದ ಹಾಗೆ ಹೂವನ್ನು ಪ್ರಸಾದದ ರೂಪದಲ್ಲಿ ಕೆಳಗೆ ಬೇಳಿಸಬೇಕು ಎಂದು ಬೇಡಿಕೊಳ್ಳಲಾಗಿತ್ತು. ಆದರೆ ದೇವಿ ಯಾರೊಬ್ಬರ ಹೆಸರು ಹೇಳಿದಾಗಲೂ ಹೂವನ್ನು ಬೇಳಿಸದಿರುವ ಕಾರಣ ವಿಜೇತರ ಹೆಸರನ್ನು ದೇವಿಯೂ ಕೂಡ ಗುಟ್ಟಾಗಿ ಇಟ್ಟಿದ್ದಾಳೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.