ತಂದೆಯ ಮೇಲೆ ಅಟ್ಯಾಕ್ ಆದಾಗ ಉ ಗ್ರನೊಬ್ಬನಿಗೆ ಕುತ್ತೆ ಎಂದು ಉಗಿದ ಭಾರತದ ಹಿಂದೂ ಹುಡುಗ, ಇದಲ್ಲವೇ ಎಂಟೆದೆ ಗುಂಡಿಗೆ ಅಂದರೆ
Apr 25, 2025, 15:20 IST
|

ಸಂತೋಷದಿಂದ ಇದ್ದು ಬರಬೇಕು ಎಂದು ಕಾಶ್ಮೀರಕ್ಕೆ ಹೋದ ಜೋಡಿಗಳು ನೋವಿನಲ್ಲಿ ವಾಪಸ್ ಬರುವಂತಾಗಿದೆ.ನಮ್ಮನ್ನು ಶೂಟ್ ಮಾಡಿ ಎಂದು ಹೇಳಿದಾಗ ಅವರು ಮೋದಿ ಕೊ ಬೊಲ್ ಎಂದು ಹೇಳಿ ಹೋದ್ರು ಎಂದು ಉಗ್ರವಾದಿಗಳ ಗುಂಡಿಗೆ ಬಲಿಯಾದ ಮಂಜುನಾಥ ರಾವ್ ಪತ್ನಿ ಪಲ್ಲವಿ ತಿಳಿಸಿದ್ದಾರೆ.ಮಂಜುನಾಥ ರಾವ್ ಅವರ ಅಂತ್ಯ ಸಂಸ್ಕಾರ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಏಪ್ರಿಲ್ 19 ರಿಂದ ಏಪ್ರಿಲ್ 24 ರ ತನಕ ಕಾಶ್ಮೀರದ ಪ್ರವಾಸ ಪ್ಲಾನ್ ಮಾಡಿ ಹೋಗಿದ್ದೆವು. ಏಪ್ರಿಲ್ 22 ರಂದು ಮಧ್ಯಾಹ್ನ 12:30 ಕ್ಕೆ ನಾವು ಪೆಹಲ್ಗಾವ್ ತಲುಪಿದೆವು ಎಂದರು.
ಅಲ್ಲಿ ಗುಡ್ಡದ ಮೇಲೆ ತೆರಳಲು ಕುದುರೆ ಮೂಲಕವೇ ಹೋಗಬೇಕಾಗುತ್ತೆ, ಹೀಗಾಗಿ ನಾವು ಮೂರು ಕುದುರೆ ಬಾಡಿಗೆ ಪಡೆದು ನಾನು, ನನ್ನ ಮಗ ಹಾಗೂ ಮಂಜುನಾಥ್ ಹೋದೆವು. ಎಲ್ಲಿ ಅಟ್ಯಾಕ್ ಆಗಿದೆಯೋ ಅಲ್ಲಿಗೆ ಹೋದ ಕೆಲವೇ ಕ್ಷಣಗಳಲ್ಲಿ ಪಟಾಕಿ ಹೊಡೆದ ಶಬ್ದ ಬಂತು. ನಾವು ಪ್ರಾಣಿಗಳನ್ನು ಓಡಿಸಲು ಬಳಸಿರಬಹುದೆನೋ ಅಂದುಕೊಂಡಿದ್ಧೆವು. ಮತ್ತೆ ಮೂರು ನಿಮಿಷದ ನಂತರ ಮತ್ತೆ ಅದೇ ತರ ಸೌಂಡ್ ಬಂತು. ಆಗ ಅದು ಆರ್ಮಿ ಅವರ ಟ್ರೈನಿಂಗ್ ಅಂದುಕೊಂಡು ಸುಮ್ಮನಾದೆವು ಎಂದು ಹೇಳಿದರು.
ಇದೇ ವೇಳೆ, ನನ್ನ ಮಗನಿಗೆ ಸ್ನ್ಯಾಕ್ಸ್ ಕೊಡಿಸಲು ನಾನು ನಮ್ಮ ಮನೆಯವರು ಅಲ್ಲೆ ಇದ್ದ ಟೆಂಟ್ ಬಳಿ ಹೋಗ್ತಾ ಇದ್ವಿ. ನನ್ನ ಮಗ ಒಂದು ಕಡೆ ಕುಳಿತುಕೊಂಡಿದ್ದ. ನಮ್ಮ ಮನೆಯವರು ಮಗನನ್ನು ಕರೆದುಕೊಂಡು ಬರಲು ಹೇಳಿದ್ರು. ಅದರಂತೆ ನಾನು ಮಗನನ್ನು ಕರೆದುಕೊಂಡು ಬರಲು ನಾಲ್ಕು ಹೆಜ್ಜೆ ಇಟ್ಟಿಲ್ಲ ಆಗ ಜನ ಕೂಗಿಕೊಂಡು ಓಡಿ ಬಂದರು. ಆಗ ಫುಲ್ ಫೈರಿಂಗ್ ಆಗುತ್ತಿತ್ತು ಎಂದು ವಿವರಿಸಿದರು.
ನಾನು ತಿರುಗಿ ನೋಡುವಷ್ಟರಲ್ಲಿ ನನ್ನ ಮನೆಯವರ ಮೇಲೆ ಫೈರಿಂಗ್ ಆಗಿತ್ತು. ಆಗ್ಲೆ ನೆಲದ ಮೇಲೆ ಬಿದ್ದಿದ್ದರು. ಆಗ್ಲೆ ಅವರು ಇರಲಿಲ್ಲ. ನಮ್ಮ ಮನೆಯವರ ಕುತ್ತಿಗೆಗೆ ಒಂದು ಬುಲೆಟ್ ಬಿದ್ದಿತ್ತು. ಅವರು ತೀರಿ ಹೋಗಿದ್ದರು. ಅವರ ಬಳಿ ಓಡಿ ಹೋದ್ವಿ. ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ರು. ಈ ತರ ಯಾರಿಗೂ ಆಗುವುದು ಬೇಡ ಅಂತ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಗದ್ಗದಿತರಾದರು.
ಆಗ ಎಲ್ಲರೂ ಕಿರುಚುತ್ತಿದ್ದರು. ಇಬ್ಬರು ಗನ್ ಹಿಡಿದುಕೊಂಡು ಹೋಗ್ತಾ ಇದ್ದರು. ಆಗ ನಾವು ನನ್ನ ಗಂಡನಿಗೆ ಹೊಡೆದಿದ್ದಿಯಾ ನನಗೂ ಹೊಡೆಯೊ ಅಂದ್ವಿ. ಆಗ ನನ್ನ ಮಗ ಸಿಟ್ಟಿನಿಂದ ಕುತ್ತೆ ಮುಜೇಬಿ ಮಾರೋ ಅಂದ. ಆಗ ಉಗ್ರವಾದಿ ಒಬ್ಬ ಆರಾಮವಾಗಿ ತಿರುಗಿ ಮೋದಿ ಕೊ ಬೋಲ್ ಅಂತ ಹೇಳಿ ಮುಂದೆ ಹೋದ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.