ಮಂಜುಗೆ ಹಿಗ್ಗಾಮುಗ್ಗಾ ಬಾರಿಸಿದ ತ್ರಿವಿಕ್ರಮ್, ಮನೆಯಿಂದ ಹೊರಹೋಗುವಂತೆ ಬಿಗ್ ಬಾಸ್ ಆದೇಶ

 | 
Hd
ಈಗಾಗಲೇ ಕೊನೆಯ ಹಂತ ತಲುಪಿರುವ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ, ಮಂಜು, ಧನರಾಜ್ ಟಿಕೆಟ್ ಟು ಫಿನಾಲೆ ರೇಸ್​ನಲ್ಲಿ ಇದ್ದಾರೆ. ಭವ್ಯಾ, ಹನುಮಂತ, ಗೌತಮಿ, ಮೋಕ್ಷಿತಾ, ಚೈತ್ರಾ ಟಿಕೆಟ್​ ಟು ಹೋಮ್ ಗುಂಪಿನಲ್ಲಿ ಇದ್ದಾರೆ. ಈ ಐವರ ಪೈಕಿ ಗೇಮ್ ಆಡಿ ಒಬ್ಬರು ಗೆಲ್ಲಬೇಕು. ಆ ಬಳಿಕ ‘ಟಿಕೆಟ್ ಟು ಫಿನಾಲೆ’ ಗ್ರೂಪ್ ಸೇರಿಕೊಳ್ಳಬೇಕು. 
ಇದಕ್ಕೆ ಪ್ರತಿಯಾಗಿ, ಟಿಕೆಟ್​ ಟು ಫಿನಾಲೆ ಗ್ರೂಪ್’ನಿಂದ ಒಬ್ಬರು ‘ಟಿಕೆಟ್​ ಟು ಹೋಂ ಗುಂಪನ್ನು ಸೇರಬೇಕು. ಮಂಜು ಅವರು ಮೊದಲು ‘ಟಿಕೆಟ್ ಟು ಫಿನಾಲೆ’ ಗ್ರೂಪ್​ನಲ್ಲಿ ಇದ್ದರು. ಆ ಬಳಿಕ ಭವ್ಯಾ ಅವರು ಗೆದ್ದು, ಮಂಜುನ ಅಲ್ಲಿಗೆ ಕಳುಹಿಸಲಾಯಿತು. ಮುಂದಿನ ಸುತ್ತಿನಲ್ಲಿ ಮಂಜು ಅವರು ಗೆದ್ದರು. ಆ ವೇಳೆ ‘ಟಿಕೆಟ್ ಟು ಫಿನಾಲೆ’ ಗುಂಪಿನಲ್ಲಿದ್ದ ಒಬ್ಬರನ್ನು ಎದುರಾಳಿ ಗುಂಪಿಗೆ ಕಳುಹಿಸಬೇಕಾಗಿತ್ತು. ಆಗ ಒಬ್ಬರು ಒಂದೊಂದು ಹೆಸರನ್ನು ತೆಗೆದುಕೊಂಡರು.
ಭವ್ಯಾ ಅವರು ಧನರಾಜ್ ಹೆಸರು ತೆಗೆದುಕೊಂಡರೆ, ತ್ರಿವಿಕ್ರಂ ಹಾಗೂ ಧನರಾಜ್ ಭವ್ಯಾ ಹೆಸರನ್ನು ತೆಗೆದುಕೊಂಡರು. ಭವ್ಯಾ ಮನರಂಜನೆ ನೀಡಿದ್ದು ಕಡಿಮೆ ಎಂದರು ತ್ರಿವಿಕ್ರಂ. ನನಗೆ ಹೋಲಿಸಿದರೆ ನೀವು ಯಾವುದೇ ಮನರಂಜನೆ ನೀಡೇ ಇಲ್ಲ ಎಂದರು ಭವ್ಯಾ. ‘ಆದರೆ, ನೀನು ನನ್ನ ಹೆಸರು ತೆಗೆದುಕೊಂಡಿಲ್ಲ ಎಂದರು ತ್ರಿವಿಕ್ರಂ. ಈ ವೇಳೆ ಭವ್ಯಾಗೆ ಮುಖಕ್ಕೆ ಹೊಡೆದಂತೆ ಆಗಿ ಕಣ್ಣೀರು ಬಂತು. 
ಇರಲಿ ನಾನು ಹೋಗಿ ಬರುತ್ತೇನೆ. ನನಗೂ ಅವಕಾಶ ಸಿಗುತ್ತದೆ ಎಂದು ಚಾಲೆಂಜ್ ಮಾಡಿ ಹೋದರು ಭವ್ಯಾ. ಸದ್ಯ ಇಬ್ಬರ ಮಧ್ಯೆ ನಡೆದ ಕಿತ್ತಾಟ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿರುವ ಬಿಗ್ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಮಂಜು ಅವರ ಕಾದಾಟ ಕೂಡ ಜೋರಾಗಿದೆ. ಅಲ್ಲದೆ ಮಾತು ಮಾತಿಗೆ ಕಿಡಿ ಕಾರಿ ಜಗಳಕಿಳಿದಿದ್ದು ನೋಡಿದ್ರೆ ಗೆಲ್ಲಲು ಮಾಡಿದ ತಂತ್ರದಂತೆ ಕಾಣುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.