ಬಿಗ್ ಬಾಸ್ ವಿನ್ನರ್ ಶಶಿ‌ ಜೀವನದಲ್ಲಿ ಬಿ.ರುಗಾಳಿ, ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ರೈತ

 | 
Ddd

ಬಿಗ್ ಬಾಸ್‌' ಕನ್ನಡ ಸೀಸನ್ 6ರ ವಿನ್ನರ್ ಶಶಿ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೆದುರು ಗಳಗಳನೇ ಅತ್ತಿದ್ದಾರೆ. ಅಧುನಿಕ ರೈತ ಎಂದೇ ಫೇಮಸ್ ಆಗಿದ್ದ ಶಶಿ, ಕೃಷಿ ಕೆಲಸಗಳ ಮೂಲಕ ಜನಪ್ರಿಯರಾಗಿದ್ದರು. ಶಶಿ ಓರ್ವ ಕಾಮನ್‌ ಮ್ಯಾನ್ ಆಗಿ ಬಿಗ್ ಬಾಸ್‌ ಪಟ್ಟ ಪಡೆದುಕೊಂಡವರು. ಇದೀಗ ಅವರು ಹೀಗೆ ದಿಢೀರ್ ಅಂತ ಬಿಕ್ಕಿ ಬಿಕ್ಕಿ ಅಳುವಂತಹದ್ದು ಏನಾಯ್ತು? ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಶಶಿ ಮೆಹಬೂಬಾ ಅನ್ನೋ ಸಿನಿಮಾಗೆ ಹೀರೋ ಆಗಿದ್ದಾರೆ. ಆರಂಭದಲ್ಲಿ ಈ ಸಿನಿಮಾಗೆ ಬರೀ ಹೀರೋ ಮಾತ್ರ ಆಗಿದ್ದ ಅವರು, ಈಗ ನಿರ್ಮಾಪಕ ಕೂಡ. ಮಾ.15ಕ್ಕೆ ಈ ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ ಈ ಚಿತ್ರದ ನಿರ್ಮಾಣದ ಕಷ್ಟಗಳನ್ನು ನೆನೆದು ಶಶಿ ಕಣ್ಣೀರಿಟ್ಟಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟ್ ಅಲ್ಲ. ನನಗೆ ಈ ಸಿನಿಮಾದ ಬಗ್ಗೆ ಮಾತಾನಾಡಬೇಕು ಅಂದಾಗೆಲ್ಲ ನೋವಾಗುತ್ತದೆ. ನಾನು ಶೋಕಿಗಾಗಿ ನಿರ್ಮಾಪಕ ಆದವನಲ್ಲ. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ನಾನು ನಿದ್ದೆ ಮಾಡುತ್ತಿಲ್ಲ ಎಂದಿದ್ದಾರೆ. ನಮ್ಮ ತಂಡದ ಜೊತೆಗೇ ಜಗಳ ಮಾಡಿದ್ದೇನೆ ಎಂದು ಶಶಿ ಹೇಳಿದ್ದಾರೆ.

ಬಿಗ್ ಬಾಸ್ ಶೋನಿಂದ ಆಚೆ ಬಂದಾಗ, ಎಲ್ಲರೂ ನನ್ನನ್ನು ನೀನು ಯಾವ ಸೀಮೆ ರೈತ ಅಂತ ಕೇಳುತ್ತಿದ್ದರು. ನಾನು ಯಾವತ್ತು ಸೋಲನ್ನು ಒಪ್ಪಿಕೊಂಡವನಲ್ಲ. ನಾನು ರೈತನ ಮಗ ಅಲ್ಲ, ನಮ್ಮಪ್ಪ ರೈರ ಅಲ್ಲ. ನಾನೇ ರೈತ ಎಂದು ಶಶಿ ಹೇಳಿದ್ದಾರೆ. ಇನ್ನು, ಈ ಸಿನಿಮಾಗೆ ನಾಯಕಿಯಾಗಿ ನಟಿ ಪಾವನಾ ಗೌಡ ಕಾಣಿಸಿಕೊಂಡಿದ್ದಾರೆ,ನಮ್ಮ ಸಿನಿಮಾಗೆ ಸಾಕಷ್ಟು ಶಕ್ತಿಗಳು ಕೆಲಸ ಮಾಡಿವೆ. ನನಗೆ ನನ್ನ ತಂಡದ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ.

ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ಶಾಸ್ತ್ರೀ ಅವರೇ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.