ಮದುವೆ ಮಂಟಪದಲ್ಲಿ ಮೂಡ್ ಬಂದಿಲ್ಲ‌ ಅಂತ ಮದುವೆ ಬೇಡ ಎಂದ ವಧು, ಅಸಲಿಯತ್ತು ಬಿಚ್ಚಿಟ್ಟ ಮದುಮಗಳ ದೊಡ್ಡಪ್ಪ

 | 
ಕಾ
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎನ್ನುವ ಮಾತಿದೆ. ಎಷ್ಟೊ ಮದುವೆಗಳು ಮಾತುಕತೆ ವೇಳ, ನಿಶ್ಚಿತಾರ್ಥದ ಬಳಿಕ ಮುರಿದು ಬಿದ್ದಿವೆ. ಇನ್ನು ಕೆಲ ಮದುವೆಗಳು ಮಂಟಪದವರೆಗೂ ಬಂದು ಕ್ಯಾನ್ಸಲ್ ಆಗಿದ್ದು ಉಂಟು. ಇಂಥಹದ್ದೇ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಬಾಲೇಪುರ ಗ್ರಾಮದಲ್ಲಿ ನಡೆದಿದೆ. ತಾಳಿ ಕಟ್ಟೋಕೆ ಕೆಲವೇ ನಿಮಿಷಗಳಿರುವ ವೇಳೆ ಮದುವೆ ಮುರಿದುಬಿದ್ದಿದೆ. 
ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಾಲೇಪುರ ಗ್ರಾಮದಲ್ಲಿ ಮದುವೆ ನಡೆಯುತ್ತಿತ್ತು. ಮದುವೆ ಮುಹೂರ್ತಕ್ಕೆ ಕೆಲ ನಿಮಿಷಗಳಿತ್ತು ಅಷ್ಟೇ, ಇನ್ನೇನು ತಾಳಿ ಕಟ್ಬೇಕು ಎನ್ನುವಾಗಲೇ ಮದುವೆ ಮುರಿದು ಬಿದ್ದಿದೆ. ರಾತ್ರಿ ಆರತಕ್ಷತೆಯಲ್ಲಿ ನಗು-ನಗುತ್ತಾ ನಿಂತಿದ್ದ ಜೋಡಿಯ ಮದುವೆ ಬೆಳಗ್ಗೆ ತಾಳಿ ಕಟ್ಟುವ ಮುನ್ನ ಕ್ಯಾನ್ಸಲ್​ ಆಗಿದ್ದು ಯಾಕೆ ಎನ್ನುವ ಪ್ರಶ್ನೆ ಮೂಡಿದೆ.
ಗಂಡು-ಹೆಣ್ಣು ಹಸೆಮಣೆ ಏರಿದ್ರು. ತಾಳಿ ಕಟ್ಟಿಸಿಕೊಳ್ಳಲು ವಧು ಇನ್ನೇನು ಕೊರಳು ಕೊಡ್ಬೇಕು ಎನ್ನುವಷ್ಟರಲ್ಲಿ ಹುಡುಗ ಕ್ಯಾತೆ ತೆಗೆದಿದ್ದಾನೆ. ಮಂಟಪದಲ್ಲಿ ಕೂತಿದ್ದವನು ಹಾರವನ್ನೇ ಬಿಸಾಡಿ, ತಾಳಿ ಕಟ್ಟದೆ ಮದುವೆ ಹಾಲ್​​ನಿಂದ ಹೊರಗೆ ಹೋಗಿದ್ದಾನೆ.ಮದುವೆ ಆಗ್ತಿರುವ ಈ ಹೆಣ್ಣಿನ ಮೇಲೆಯೇ ನನಗೆ ಅನುಮಾನವಿದೆ ಎಂದು ಆತ ಹೇಳಿ ಕಿರಿಕ್ ತೆಗೆದಿದ್ದಾನೆ. ಕೊನೇ ಕ್ಷಣದಲ್ಲಿ ಮದುವೆಯನ್ನು ನಿರಾಕರಿಸಿದ ವರ. ಈ ಹಿಂದೆ ಯುವತಿ ಬೇರೆಯವರನ್ನು ಪ್ರೀತಿಸಿದ್ದಳು ಎಂಬ ಕಾರಣದಿಂದಾಗಿ ವೇಣು ಕಿರಿಕ್ ಮಾಡಿದ್ದಾನೆ.
ಮದುವೆಗೆ ಮುಂಚೆಯೇ ತಾನು ಬೇರೊಬ್ಬರು ಪ್ರೀತಿ ಮಾಡ್ತಿದ್ದೆ ಎನ್ನುವ ವಿಚಾರವನ್ನು ಯುವತಿ, ವೇಣು ಜೊತೆ ಹೇಳಿಕೊಂಡಿದ್ದಳು.  ಆಗ ಆತ ಇದೆಲ್ಲವೂ ಮುಗಿದು ಹೋದ ಅಧ್ಯಾಯ ಎಂದು ಹೇಳಿ, ಮದುವೆಗೆ ಓಕೆ ಎಂದಿದ್ದನಂತೆ. ಬಳಿಕ ನಗು ನಗುತ್ತಾ ಆರತಕ್ಷತೆ ಮುಗಿಸಿದ್ದ. ಬೆಳಿಗ್ಗೆ ಕೊನೆ ಕ್ಷಣದಲ್ಲಿ ಈ ಹುಡುಗಿ ಜೊತೆ ಮದುವೆನೇ ಬೇಡ ಎಂದು ಹೈಡ್ರಾಮ ಮಾಡಿದ್ದಾನೆ. ಮದುವೆ ಮಂಟಪದಿಂದಲೇ ಹೊರಟು ಹೋಗಿದ್ದಾನೆ.ಈ ಘಟನೆ ನಂತರ, ವಧು ಮತ್ತು ವರನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಧು ಕುಟುಂಬಸ್ಥರು ಮದುವೆ ಮುರಿದ ವಿಚಾರಕ್ಕೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.