ಕಿಚ್ಚ ಸುದೀಪ್ ಗೆ ಕೆಟ್ಟದಾಗಿ ಬೈದ ಚೈತ್ರಾ ಕುಂದಾಪುರ, ಆಚೆ ಬರೋದು ಫಿಕ್ಸ್ ಎಂದ ಜನ

 | 
ರಗ

 ಅವಾಚ್ಯ ಶಬ್ಧಗಳ ಬಳಕೆ ಹಿನ್ನೆಲೆ ಲಾಯರ್‌ ಜದೀಶ್‌ ಅವರು ಬಿಗ್‌ ಬಾಸ್‌ ಕನ್ನಡ 11 ಸೀಸನ್‌ನಿಂದ ಹೊರಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ಜಗದೀಶ್‌ಗೆ ತಳ್ಳಿದ್ದಾರೆ ಎಂಬ ಆರೋಪದ ಮೇಲೆ ರಂಜಿತ್‌ನನ್ನು ಸಹ ಹೊರಹಾಕಿದ್ದಾರೆ. ಮತ್ತೊಂದೆಡೆ ತಮ್ಮ ಮಾತುಗಳಿಂದಲೇ ಪ್ರಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ್‌ಗೆ ಇದೀಗ ದೊಡ್ಮನೆಯಲ್ಲಿ ಅದೇ ಮಾತುಗಳೇ ಮುಳುವಾಗಿವೆ.

ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ವೇಳೆ ಕಿಚ್ಚ ಸುದೀಪ್‌ ಅವರು ಬಿಗ್ ಬಾಸ್ ಮನೆಯಲ್ಲಾದ ಮಾತುಕತೆಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಚೈತ್ರಾ ಕುಂದಾಪುರ್ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಜಗದೀಶ್‌ ಅವರು ಅವಾಚ್ಯ ಪದಗಳಿಂದ ಮಾತನಾಡಿದ್ದರು ಎಂದು ಚೈತ್ರಾ ಕುಂದಾಪುರ್‌ ಅವರು ಆರೋಪ ಮಾಡಿದ್ದರು. ಆಗ ಚೈತ್ರಾ ಅವರು ಮಾತಾನಾಡಿದ ಮಾತುಗಳನ್ನೆಲ್ಲ ಅವರಿಗೆ ನೆನಪಿಸುವ ಮೂಲಕ ಕ್ಲಾಸ್‌ ತೆಗೆದುಕೊಂಡಿದ್ದರು.

ಆಗ ಕಿಚ್ಚ ಸುದೀಪ್‌ ಅವರು ಚೈತ್ರಾ ಅವರೇ.. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಹೇಳುವುದು ನೀವೆ. ಆದರೆ, ಒಬ್ಬ ಅಪ್ಪನಿಗೆ ಹುಟ್ಟಿದ್ರಿ ಅಂದ್ರೆ, ಯಾವ ನನ್‌ ಮಗನೂ ಅಪ್ಪನಿಗೆ ಬಯ್ಯುತ್ತಿರೋದಲ್ಲ ಮೇಡಂ.. ನೀವು ತಾಯಿಗೆ ಬಯುತ್ತಿರೋದು,ಎಂದು ಚೈತ್ರಾ ಕುಂದಾಪುರ್ ಅವರಿಗೆ ಖಡಕ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದರು. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ನನ್ನ ಮುಂದೆ ಬಂದ್‌ ಮಾತನಾಡಲಿ ಎಂದು ಚೈತ್ರಾ ಕುಂದಾಪುರ್ ಜಗದೀಶ್‌ ಅವರಿಗೆ ಹೇಳಿದ ಮಾತಿಗೆ ಕಿಚ್ಚನ ಖಡಕ್‌ ತಿರುಗೇಟು ಇದು.

ಇನ್ನೂ ಚೈತ್ರಾ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೆ ಮತ್ತೆ ನಾಲಿಗೆ ಹರಿಬಿಡುತ್ತಿದ್ದಾರೆ. ಒಳ್ಳೆ ಮಾತುಗಳನ್ನು ಮಾತನಾಡಬೇಕು ಎಂದು ವೇದಿಕೆಗಳ ಮೇಲೆ ಪುಂಗುತ್ತಿದ್ದವರೇ ಇದೀಗ ಬಿಗ್ ಬಾಸ್‌ ಮೆನಯಲ್ಲಿ ಅವಾಚ್ಯ ಪದಗಳನ್ನು ಬಳಸುತ್ತಿದ್ದಾರೆ. ಹಿಂಗೆ  ಮಾತಾಡ್ತಾ ಇದ್ರೆ ನೀವು ಹೊರ ಹೋಗೋದು ಗ್ಯಾರಂಟಿ ಅಂತಿದ್ದಾರೆ.


ಅಷ್ಟಕ್ಕೂ ಅವರ ಬಾಯಿಂದ ಇಂತಹ ಕೊಳಕು ಮಾತುಗಳು ಬರುತ್ತವೆ ಅಂತಲೂ ನಾವು ಊಹಿಸಿಯೂ ಇರಲಿಲ್ಲ. ಇನ್ನಾದರೂ ತಿದ್ದಿಕೊಂಡು ಉತ್ತಮವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಆಟ ಆಡಿದರೆ ಉತ್ತಮ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.