ಆ ಮೂರನೇ ವ್ಯಕ್ತಿ ಹೆಸರು ಬಾಯಿ ಬಿಟ್ಟ ಚಂದನ್; ಸಿ ಡಿದೆದ್ದ ಲೊಕೇಶ್

 | 
Hd

ಚಂದನ್ ಶೆಟ್ಟಿ & ನಿವೇದಿತಾ ಗೌಡ ಡಿವೋರ್ಸ್ ಸುದ್ದಿ ಎಲ್ಲರಿಗೂ ಶಾಕ್ ಕೊಟ್ಟಿದೆ. ರಿಯಾಲಿಟಿ ಶೋಗಳಲ್ಲಿ ಮಿಂಚ್ತಾ, ಸೋಷಿಯಲ್ ಮಿಡಿಯಾದಲ್ಲಿ ಕ್ಯೂಟ್ ಆಗಿ ರೀಲ್ಸ್ ಮಾಡ್ತಾ ಎಲ್ಲರನ್ನ ರಂಜಿಸ್ತಾ ಇದ್ದ ಈ ತಾರಾಜೋಡಿ ಏಕಾಏಕಿ ಸಂಬಂಧವನ್ನ ಮುರಿದುಕೊಂಡಿದ್ದು ಯಾಕೆ ಅಂತ ಎಲ್ರೂ ತಲೆ ಕೆಡಿಸಿಕೊಂಡಿದ್ದಾರೆ.

ಅಸಲಿಗೆ ಈ ಇಬ್ಬರಿಗೂ ವಿಚ್ಛೇದನ ಕೊಡಿಸಿರೋ ವಕೀಲೆ ಹೇಳುವ ಪ್ರಕಾರ ಕಳೆದ ಒಂದು ವರ್ಷದ ಹಿಂದೆಯೇ ಈ ಜೋಡಿ ಹೊಂದಾಣಿಕೆಯ ಕೊರತೆಯಿಂದ ಡಿವೋರ್ಸ್ ಪಡೆಯೋದಕ್ಕೆ ತೀರ್ಮಾನ ಮಾಡಿತ್ತಂತೆ. ತಮ್ಮ ಸಂಬಂಧ ಹದಗೆಟ್ಟು ಡಿವೋರ್ಸ್ ಹಂತಕ್ಕೆ ಬಂದಿದ್ರೂ ಅದನ್ನ ಎಲ್ಲಿಯೂ ತೊರಗೊಡದೇ ಅನ್ಯೋನ್ಯವಾಗಿದ್ದಂತೆ ಇಬ್ಬರು ನಟನೆ ಮಾಡ್ತಾನೇ ಬಂದಿದ್ರು. ಅಷ್ಟರ ಮಟ್ಟಿಗೆ ಈ ಇಬ್ಬರು ಅತ್ಯುತ್ತುಮ ನಟ-ನಟಿಯರು.

ಆದ್ರೆ ಇವ್ರು ಅದೆಷ್ಟೇ ನಟನೆ ಮಾಡ್ತಾ ಇದ್ರೂ ತೀರಾ ಹತ್ತಿರದಿಂದ ಇವರನ್ನ ನೋಡ್ತಾ ಇದ್ದವರಿಗೆ ಏನ್ ನಡೀತಾ ಇದೆ ಅನ್ನೋ ಅಸಲಿಯತ್ತು ಗೊತ್ತಿತ್ತು. ಅದ್ರಲ್ಲೂ ರಾಜಾ ರಾಣಿ  ಅನ್ನೋ ರಿಯಾಲಿಟಿ ಶೋ ಮತ್ತದರ ನಿರ್ಮಾಪಕ ಕಂ ಜಡ್ಜ್ ಸೃಜನ್ ಲೋಕೇಶ್ ಹೆಸರು ಈ ವಿಚಾರದಲ್ಲಿ ಕೇಳಿ ಬರ್ತಾ ಇದೆ.ಹಾಗಾದ್ರೆ ರಾಜಾ ರಾಣಿ ಬೇರೆ ಆಗೋದಕ್ಕೆ ಸೃಜನ್ ಕಾರಣನಾ..? ಗಂಡ ಹೆಂಡತಿ ನಡುವೆ ಬಂದ ಆಗುಂತಕ ಅವನೇನಾ..? ಹಾಲು ಜೇನಿನಂತೆ ಇದ್ದ ಚಂದನ್ – ನಿವಿ ದಾಂಪತ್ಯಕ್ಕೆ ಸೃಜನ್ ಲೋಕೇಶ್ ಹುಳಿ ಹಿಂಡಿದ್ನಾ..? ಅಸಲಿ ವಿಚಾರ ಈ ಮೂವರಿಗೇ ಗೊತ್ತು. ಆದ್ರೆ ಈ ತರಹದ ಗಾಸಿಪ್ ಬಣ್ಣದ ಲೋಕದಲ್ಲಿ ಹರಿದಾಡ್ತಾ ಇರೋದಂತೂ ನಿಜ.

ರಾಜಾ-ರಾಣಿ ಶೋನಲ್ಲಿ ಚಂದನ್ ಆ್ಯಂಡ್​ ನಿವೇದಿತಾ ಭಾಗಿಯಾಗಿ ವಿನ್ನರ್ ಆಗಿದ್ರು. ಈ ಶೋ ನಂತರ ಚಂದನ್ ಸಿನಿಮಾ ಸಂಗೀತ, ಮ್ಯೂಸಿಕ್ ಶೋಗಳು, ನಟನೆ ಅಂತ ಬ್ಯುಸಿಯಾದ್ರು. ಆದ್ರೆ ನಿವೇದಿತಾ ಗಿಚ್ಚಿ ಗಿಲಿಗಿಲಿ ಅನ್ನೋ ಶೋನಲ್ಲಿ ನಟಿಸೋದಕ್ಕೆ ಶುರುಮಾಡಿದ್ರು. ಅಲ್ಲಿಂದಲೇ ಎಲ್ಲವೂ ಹಳಿತಪ್ತು ಅಂತ ಸ್ಮಾಲ್ ಸ್ಕ್ರೀನ್​ ಸೆಟ್​​ಗಳಲ್ಲಿ ಸುದ್ದಿಯಾಗಿತ್ತು.

ಯೆಸ್, ನಿವೇದಿತಾ ಬರ್ತ್​​ಡೇಗೆ ಸೃಜನ್ ಲೋಕೇಶ್ ಭರ್ಜರಿ ಗಿಫ್ಟ್ ಕೊಟ್ಟಿದ್ರು. ತಮ್ಮ ನಿರ್ಮಾಣದ ಶೋಗಳಲ್ಲಿ ನಿವೇದಿತಾಗೆ ಅವಕಾಶದ ಮೇಲೆ ಅವಕಾಶ ಕೊಟ್ರು. ಅಷ್ಟೆಲ್ಲಾ ಯಾಕೆ ತಮ್ಮ ನಿರ್ಮಾಣದ ಜಿಎಸ್​​ಟಿ ಅನ್ನೋ ಸಿನಿಮಾದಲ್ಲೂ ನಟನೆಯ ಚಾನ್ಸ್ ಕೊಟ್ರು.ನಿವಿಯ ಬರ್ತ್​​ಡೇಗೆ ಸೃಜಾ ಹಾಕಿರೋ ಪೋಸ್ಟ್ ನೋಡಿದ್ರೆ ಇವ್ರ ಆತ್ಮೀಯತೆ ಅದ್ಯಾಪರಿ ಇದೆ ಅನ್ನೋದು ಗೊತ್ತಾಗುತ್ತೆ. 

ಸೃಜನ್ ಮತ್ತು ನಿವಿಯ ಈ ಅಸಹಜ ಸಲುಗೆಯನ್ನ ನೋಡಿ ಅನೇಕರು ಚಂದನ್​ಗೆ ಎಚ್ಚರಿಸಿದ್ರಂತೆ. ಮ್ಯೂಸಿಕ್ ಕಾಂಸೆರ್ಟ್​ ಅಂತ ಊರೂರು ತಿರುಗುವ ಚಂದನ್​ಗೆ ನಿನ್ನ ಹೆಂಡತಿ ಬಗ್ಗೆ ಗಮನ ಹರಿಸು ಅಂತ ಸೂಚಿಸಿದ್ರಂತೆ
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.