ಪವಿತ್ರ ಗೌಡಗೆ ಜಾಮೀನು ಕೊಟ್ಟ ಕೋರ್ಟ್, ಮೊದಲು ಮಗಳನ್ನು ನೋಡಬೇಕು ಎಂದ ದರ್ಶನ್ ಪತ್ನಿ
Dec 13, 2024, 20:28 IST
|
ದರ್ಶನ್ ಜೊತೆ ಕೊ ಲೆ ಕೇಸ್ ನಲ್ಲಿ ಅಂದರ್ ಆಗಿದ್ದ ಪವಿತ್ರ ಗೌಡ ಅವರಿಗೆ ಇದೀಗ ಬೇಲ್ ಸಿಕ್ಕಿದೆ ಎನ್ನಲಾಗಿದೆ. ಜೈಲಿನಿಂದ ಹೊರಬಂದ ಪವಿತ್ರ ಗೌಡ ನೇರ ತನ್ನ ಮಗಳ ಮುಖ ನೋಡಲು ದರ್ಶನ್ ಕೊಟ್ಟ ಐಷಾರಾಮಿ ಮನೆಯತ್ತ ತೆರಳಿದ್ದಾರೆ. ಇನ್ನು ಈ ಕಡೆ ಆಸ್ಪತ್ರೆಯಲ್ಲಿರುವ ದರ್ಶನ್ ಅವರಿಗೂ ಜಾಮೀನು ನೀಡಿದ ಕೋರ್ಟ್.
ಇನ್ನು ದರ್ಶನ್ ಅವರಿಗೆ ತನ್ನ ಮುಂದಿನ ಸಿನಿಮಾದ ಚಿತ್ರೀಕರಣಕ್ಕೆ ಹೋಗಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. ಇನ್ನು ಪವಿತ್ರ ಗೌಡ ಅವರು ಮತ್ತೆ ದರ್ಶನ್ ವಿಚಾರಕ್ಕೆ ಬರುತ್ತಾರಾ ಎಂಬ ಅನುಮಾನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಾಡುತ್ತಿದೆ.
ಪವಿತ್ರ ಗೌಡ ಜೈಲಿನಿಂದ ಬಂದ ಬಳಿಕ ಮತ್ತೆ ದರ್ಶನ್ ಸಹವಾಸ ಮಾಡದೆ, ಒಂದು ಒಳ್ಳೆ ಜೀವನ ನಡೆಸಬೇಕು ಎಂಬ ಬಗ್ಗೆಯೂ ಪವಿತ್ರ ಅವರಿಗೆ ಪವಿತ್ರ ತಾಯಿ ಹೇಳಿದ್ದಾರಂತೆ.