ಲೆಜೆಂಡ್ ಕಾಶಿನಾಥ್ ಅವರ ಮಗ ಚಿತ್ರರಂಗದಲ್ಲಿ ಉಳಿಯಲಿಲ್ಲ ಯಾಕೆ, ಇವರನ್ನು ತುಳಿದಿದ್ದು ಯಾರು ಗೊತ್ತಾ
Oct 20, 2024, 13:05 IST
|
ಕನ್ನಡ ಚಿತ್ರರಂಗದ ದಂತಕಥೆ ಕಾಶೀನಾಥ್ ಸುಪುತ್ರ ಅಭಿಮನ್ಯು ಕಾಶೀನಾಥ್ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಮನ್ಯು ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೌದು ಕೆಲ ಕಾಲಗಳಿಂದ ಚಿತ್ರರಂಗದಿಂದ ದೂರವಿದ್ದ ನಟ ಇದೀಗ ಮತ್ತೆ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಸಹ ನೆರವೇರಿತು.ಬೆಂಗಳೂರಿನ ಸಹಕಾರ ನಗರದ ಛೇರ್ಮನ್ ಕ್ಲಬ್ನಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ನಟ ಕೋಮಲ್ ಕುಮಾರ್ ಆಗಮಿಸಿದ್ದರು. ಅಭಿಮನ್ಯು ನಟನೆಯ ಹೊಸ ಚಿತ್ರಕ್ಕೆ ಕೋಮಲ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.
ಅಪ್ಪ ಹೋದ ಮೇಲೆ ಏನೂ ಮಾಡಬೇಕು ಅಂತಲೂ ಗೊಂದಲದಲ್ಲಿದ್ದೆ. ಎರಡು ವರ್ಷ ಚಿತ್ರರಂಗದಿಂದ ದೂರವಾದೆ. ಅದಕ್ಕೂ ಮೊದಲು ಯಾವ ರೀತಿಯ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೆ, ಚಿತ್ರರಂಗದಲ್ಲಿ ನಾನು ಇದ್ದು ಇಲ್ಲದಂತೆ ಅನಿಸುತ್ತಿತ್ತು. ಆದರೆ, ಕಿರಣ್ ಎಸ್ ಸೂರ್ಯ ನಿರ್ದೇಶನದ ಎಲ್ಲಿಗೆ ಪಯಣ, ಯಾವುದೋ ದಾರಿ ಚಿತ್ರದಲ್ಲಿ ನಟಿಸಿದ ಮೇಲೆ ನನ್ನ ಆಯ್ಕೆಗಳಿಗೆ ಒಂದು ಸ್ಪಷ್ಟತೆ ಸಿಕ್ಕಿತು.
ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ನಮ್ಮ ತಂದೆಯವರ ಸಿನಿಮಾಗಳನ್ನು ನೋಡಿದಂತೆ ಇರುತ್ತದೆ. ಅಂದರೆ ಅವರು ಒಂದು ವಿಷಯವನ್ನು ಇಟ್ಟು, ಅದರಿಂದ ಏನೆಲ್ಲಾ ಕ್ರಿಯೇಟ್ ಆಗುತ್ತದೆ ಎಂಬುದನ್ನು ಕುತೂಹಲಭರಿತವಾಗಿ ಹೇಳುತ್ತಾ ಹೋಗುತ್ತಾರಲ್ಲ, ಆ ರೀತಿಯ ಸಿನಿಮಾ ಇದು. ಜನರಿಗೆ ಕನೆಕ್ಟ್ ಆಗುವ ಕತೆ. ನನಗೆ ತುಂಬಾ ಮಹತ್ವದ ಚಿತ್ರವಿದು.ಇಗ ಅಪ್ಪ ಇಲ್ಲ ಅನ್ನೋ ನೋವು ಇದೆ. ಆದರೆ, ಜೀವನಕ್ಕೆ ತೊಂದರೆ ಆಗದಂತೆ ಅಪ್ಪ ವ್ಯವಸ್ಥೆ ಮಾಡಿದ್ದಾರೆ. ಆದರೆ, ನಟನಾಗಿ ನಾನು ಏನಾದರೂ ಸಾಬೀತು ಮಾಡಬೇಕು ಅನ್ನೋ ಹಠ, ಕನಸು, ಗುರಿ ಇದೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.