ವಿಪರೀತ ಬೆನ್ನುನೋವು ಹಿನ್ನೆಲೆ ದಾಸನಿಗೆ ಇನ್ನುಮುಂದೆ ಆ ಕೆಲಸ ಅಸಾಧ್ಯ ಎಂದ ಡಾಕ್ಟರ್

 | 
Hj

ಚಾಲೆಂಜಿಂಗ್ ಸ್ಟಾರ್‌ ದರ್ಶನ್​​ ಫ್ಯಾನ್ಸ್​ ಇಂಥದ್ದೊಂದು ಸೀನ್​​ಗೆ ಕಾದು ಕುಳಿತಿದ್ರು. ರೇಣುಕಾಸ್ವಾಮಿ ಕೇಸ್​​ನಲ್ಲಿ ದರ್ಶನ್​ ಜೈಲು ಸೇರಿದ್ರು. 131 ದಿನಗಳೇ ಉರುಳಿದ್ರೂ ಬೇಲ್ ಅನ್ನೋ ರಿಲೀಫ್​​ ಸಿಕ್ಕಿರ್ಲಿಲ್ಲ. ದರ್ಶನ್​ ಫ್ಯಾನ್ಸ್​ ಅಂತೂ ಬಾಸ್​ಗೆ ಯಾವಾಗ ಬೇಲ್ ಸಿಗುತ್ತೆ? ಅದ್ಯಾವಾಗ ರಿಲೀಸ್​​ ಆಗ್ತಾರೆ ಅಂತ ಬಕಪಕ್ಷಿಗಳಂತೆ ಕಾದಿದ್ರು. ಡಿ ಫ್ಯಾನ್ಸ್​ ನಿರೀಕ್ಷೆ, ದರ್ಶನ್ ಪತ್ನಿ ಹರಕೆ ಕೊನೆಗೂ ಫಲಿಸಿದೆ.


 ಬೆನ್ನು ನೋವಿನ ಸಮಸ್ಯೆ ಹೇಳಿಕೊಂಡು ದರ್ಶನ್ ಹೈಕೋರ್ಟ್​ ಮೆಟ್ಟಿಲೇರಿದ್ದು, ಕೋರ್ಟ್​ 131 ದಿನಗಳ ಜೈಲುವಾಸದ ಬಳಿಕ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಹೈಕೋರ್ಟ್​ ನೀಡಿದ ತೀರ್ಪಿನ ಬಳಿಕವೂ ಒಂದಷ್ಟು ಪ್ರಕ್ರಿಯೆ ಪಾಲಿಸಬೇಕಿತ್ತು. ಹೈಕೋರ್ಟ್​ ನೀಡಿದ ಬೇಲ್ ಮಂಜೂರಾತಿ ಪ್ರತಿಯನ್ನು 57ನೇ ಸಿಸಿಹೆಚ್​​ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲಿಂದ ಮತ್ತೆ ರಿಲೀಸ್​ ಆರ್ಡರ್​ ಪಡೆಯಬೇಕು. 


ಆ ಆರ್ಡರ್​ ಕಾಪಿಯನ್ನು ಬಳ್ಳಾರಿ ಜೈಲಿಗೆ ಸಲ್ಲಿಸಬೇಕು. ಆ ಬಳಿಕವೇ ದರ್ಶನ್​​ ರಿಲೀಸ್​ ಪ್ರಕ್ರಿಯೆ ಮುಗಿಯುತ್ತದೆ. ಹಾಗಾಗಿಯೇ ದರ್ಶನ್ ಸೋದರ ದಿನಕರ್​ ಬೆಂಗಳೂರಿನಲ್ಲಿದ್ರೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಯಲ್ಲಿದ್ದರು.ಹೈಕೋರ್ಟ್​ ಜಾಮೀನು ಮಂಜೂರಾತಿಗೆ ಇಬ್ಬರ ಶ್ಯೂರಿಟಿ ಕೇಳಿತ್ತು. ಹಾಗಾಗಿಯೇ ನಟ ಧನ್ವೀರ್ ಹಾಗೂ ಸೋದರ ದಿನಕರ್​ ಶ್ಯೂರಿಟಿ ನೀಡಿದ್ದಾರೆ. 

ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿ ಇಂದಿಗೆ 63 ದಿನ. ಆಗಸ್ಟ್ 29ರಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ವಿಜಯಲಕ್ಷ್ಮಿ 10 ಬಾರಿ ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್​​ರನ್ನು ಭೇಟಿ ಮಾಡಿದ್ದರು. ಇದೀಗ ಅಮ್ಮನ ಮಡಿಲು ಸೇರುವ ತವಕದಲ್ಲಿದ್ದಾರೆ. ಅಲ್ಲೇ ದೀಪಾವಳಿ ಆಚರಿಸುವ ಸಾಧ್ಯತೆ ಇದೆ.ಹೈಕೋರ್ಟ್​ ವಿಧಿಸಿರೋ ಒಂದೊಂದು ಕಂಡೀಷನ್ ನೋಡಿದ್ರೂ, ಕಾಟೇರ ಕೆಮ್ಮಂಗೂ ಇಲ್ಲ. ಬೇಕಾದ ಜಾಗಕ್ಕೆ ಹೋಗುವಂತೆಯೂ ಇಲ್ಲ. ಎಲ್ಲಕ್ಕಿಂತಲೂ ಮೊದಲು ಡಿ ಫ್ಯಾನ್ಸ್​ ದರ್ಶನ್​​ಗಾಗಿ ಆದ್ರೂ ಸೈಲೆಂಟಾಗಿ ಇರೋದು ತುಂಬಾ ಒಳ್ಳೆಯದು ಅನ್ನಬಹುದು. 

ಈ ರೀತಿಯ ಪ್ರಕರಣದಲ್ಲಿ ಹೊರ ಬಂದ ಬಳಿಕ ಆರೋಪಿಗಳು ವಿದೇಶಕ್ಕೆ ಹಾರುವ ಸಾಧ್ಯತೆ ಇರುತ್ತದೆ. ಹಾಗಾದಲ್ಲಿ ಅವರನ್ನು ಮರಳಿ ತರೋದು ಕಷ್ಟ. ಹೀಗಾಗಿ ಪಾಸ್​​ಪೋರ್ಟ್​ನ ಕೋರ್ಟ್​ಗೆ ಸರೆಂಡರ್ ಮಾಡಬೇಕು ಎಂದು ಕೋರ್ಟ್ ದರ್ಶನ್​ಗೆ ಸೂಚನೆ ನೀಡಿದೆ. ಫ್ಲೈಟ್ ರಿಸ್ಕ್ ಇದೆಯಾ ಎಂದು ಜಡ್ಜ್ ಪ್ರಶ್ನೆ ಮಾಡಿದ್ದರು. ಪಾಸ್​ಪೋರ್ಟ್ ವಶಕ್ಕೆ ಪಡೆಯುವ ಷರತ್ತು ವಿಧಿಸಲು ಸರ್ಕಾರಿ ಪರ ವಕೀಲರು ಮನವಿ ಮಾಡಿದ್ದರು.

ಈ ಮನವಿ ಹಿನ್ನೆಲೆಯಲ್ಲಿ ಪಾಸ್​ಪೋರ್ಟ್ ಸರೆಂಡರ್ ಮಾಡಲು ಆದೇಶ ನೀಡಲಾಗಿದೆ. ಮಾಧ್ಯಮಕ್ಕೂ ಕಾಣಿಸಿ ಕೊಳ್ಳುವ ಹಾಗಿಲ್ಲ. ತಿರುಗಿ ಮಾತನಾಡುವ ಹಾಗಿಲ್ಲ.ಬೆಂಗಳೂರಿನಲ್ಲಿ ತಮ್ಮ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಆದೇಶ ಹೊರಡಿಸಲಾಗಿದೆ. ಹಾಗಾಗಿಯೇ ದರ್ಶನ್​​​ ಬೆನ್ನು ನೋವಿಗೆ ಬೆಂಗಳೂರಿನಲ್ಲಷ್ಟೇ ಚಿಕಿತ್ಸೆ ಪಡೆಯೋದಕ್ಕೆ ಅವಕಾಶವಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.