ಮತಗಟ್ಟೆಯಲ್ಲಿ EVM ಮೆಷಿನ್ ಪುಡಿಪುಡಿ; ಸಿಡಿದೆದ್ದ ಮಹಿಳೆಯರು

 | 
Hj

ಗಡಿ ಜಿಲ್ಲೆಯ ಕುಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ ಅನ್ನೋ ಕಾರಣಕ್ಕೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು. ತಾವು ಮತದಾನ ಮಾಡುತ್ತಿಲ್ಲ ಎಂದು ಪೊಲೀಸರಿಗೂ ಮಾಹಿತಿ ನೀಡಿದ್ದರು. ಇಷ್ಟಾದರೂ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಮನವೊಲಿಕೆಗೆ ಮುಂದಾದಾಗ ರೊಚ್ಚಿಗೆದ್ದ ಸ್ಥಳೀಯರು ಮತಗಟ್ಟೆಗೆ ನುಗ್ಗಿ ಮತ ಯಂತ್ರವನ್ನು ಪುಡಿಗಟ್ಟಿದ್ದಾರೆ.

ಈ ವೇಳೆ ಘರ್ಷಣೆ ಸಂಭವಿಸಿ ಪೊಲೀಸರು ಲಾಠಿ ಪ್ರಹಾರ ಕೂಡಾ ನಡೆಸಿದ್ದಾರೆ. ಕಲ್ಲು ತೂರಾಟವೂ ನಡೆದಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗ ನತ್ತ ಗ್ರಾಮದಲ್ಲಿ ಮೂಲ ಸೌಕರ್ಯ ಇಲ್ಲದಿರುವ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಇಲ್ಲಿಯ ಜನತೆ ಮುಂದಾಗಿದ್ದರು.

ಇದನ್ನು ಅರಿತ ತಹಸೀಲ್ದಾರ್ ಗುರು ಪ್ರಸಾದ್, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಅವರು ಮತದಾರರನ್ನು ಮನವೊಲಿಸಲು ಮುಂದಾದರುಈ ವೇಳೆ ಅಧಿಕಾರಿಗಳ ಒತ್ತಾಯ ಮೇರೆಗೆ ಮತ ಚಲಾವಣೆ ಮಾಡಲು ಕೆಲವು ಮತದಾರರು ಮುಂದೆ ಬಂದರು. 

ಈ ಸಂದರ್ಭದಲ್ಲಿ ಮತ್ತೊಂದು ಗುಂಪಿನವರು ಮತದಾನ ಬಹಿಷ್ಕಾರ ಮಾಡಿರುವ ಕುರಿತು ಪೋಲಿಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇಷ್ಟಾದರೂ ಏಕೆ ನಮಗೆ ಇಷ್ಟೊಂದು ಒತ್ತಾಯ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ಮಾತಿನ‌ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕೆಲ ಮಂದಿ ಮತಗಟ್ಟೆಗೆ ನುಗ್ಗಿ ಪೀಠೋಪಕರಣ ಹಾಗೂ ವಿದ್ಯುನ್ಮಾನ ಮತ ಯಂತ್ರ ನಾಶ ಪಡಿಸಿ ಮತಗಟ್ಟೆ ಧ್ವಂಸ ಮಾಡಿದರು. ಈ ವೇಳೆ ಪೋಲಿಸರು‌ ಮತ್ತು ಸ್ಥಳೀಯ ವಾಸಿಗಳ ನಡುವೆ ನಡೆದ ಗದ್ದಲದಲ್ಲಿ ಹಲವು‌ ಮಂದಿ ಮಹಿಳೆಯರ ತಲೆಗೆ ಪೆಟ್ಟಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.