FactChcek:ಕುಮಾರಸ್ವಾಮಿ ಮಗನಿಗೆ ಜಬರ್ದಸ್ತ್ ಪ್ರಶ್ನೆ ಕೇಳಿದ ಯುವಕ, ತಕ್ಷಣ ತಿರುಗೇಟು ಕೊಟ್ಟ ನಿಖಿಲ್

 | 
Js
ಯುವ ನೇತಾರ ಜಾತಿಗಣತಿ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ನಾಯಕ ನಿಖಿಲ್‌ ಕುಮಾರ್‌ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಕುರ್ಚಿಯಲ್ಲಿ ಉಳಿದುಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ ಹೈಕಮಾಂಡ್‌ ಅನ್ನು ಡಮ್ಮಿ ಹೈಕಮಾಂಡ್‌ ಎಂದು ನಿಖಿಲ್‌ ಕುಮಾರಸ್ವಾಮಿ ಕಡೆದಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ಜಾತಿಗಣತಿ ಮುನ್ನೆಲೆ ತಂದಿದ್ದಾರೆ ಎಂದು ಆರೋಪಿಸಿದರು. ಇನ್ನು ಪತ್ರಿಕೆಗಳ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ತಮ್ಮ ತಂದೆಯ ಆಡಳಿತವನ್ನು ಹಾಡಿ ಹೊಗಳಿದ್ದಾರೆ. ಇನ್ನು. ರಾಧಿಕಾ ಕುಮಾರಸ್ವಾಮಿ ಅವರ ಕುರಿತು ಕೇಳಿದಾಗ ಮೆಲ್ಲನೆ ವಿಷಯ ಬದಲಿಸಿದ್ದಾರೆ.
ರಾಜ್ಯ ಸರ್ಕಾರದ ಆಡಳಿತದಲ್ಲಿ ಲೋಪ ದೋಷಗಳು, ವೈಫಲ್ಯತೆಗಳು ಕಂಡುಬಂದಿರುವುದನ್ನು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನೋಡುತ್ತಲೇ ಬಂದಿದ್ದೇವೆ. ಯಾವುದಾದರೂ ಒಂದು ರೀತಿ ಅನಾವಶ್ಯಕ ವಿಷಯಗಳನ್ನು ಮುಂದಿಟ್ಟು ಚರ್ಚೆಯ ವಿಷಯವಾಗಿ ಮಾಡಲಾಗುತ್ತಿದೆ. ಜಾತಿಗಣತಿ ವಿಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ನವದೆಹಲಿಗೆ ಪ್ರವಾಸ ಮಾಡಿದ್ದರು. ಹೈಕಮಾಂಡ್ ಜೊತೆ ಕುಳಿತು ಚರ್ಚೆ ಮಾಡಿದ ಬಳಿಕ ಜಾತಿ ಗಣತಿ ವಿಚಾರ ಮಾಧ್ಯಮಗಳಲ್ಲಿ ಬಹಳ ಗಂಭೀರವಾದ ಸ್ವರೂಪ ಪಡೆದುಕೊಂಡಿತು.
ನಾವು ಜಾತಿ ಗಣತಿ ವರದಿಯನ್ನು ಸ್ವಾಗತ ಮಾಡಿದ್ದೇವೆ. ನಾವು ವಿರೋಧ ಮಾಡಿಲ್ಲ. ಜಾತಿಗಣತಿ ಅಂದರೆ ಯಾವ ಯಾವ ಸಮಾಜ, ಯಾವ ಜಾತಿ, ಅದರ ಕೆಳಗೆ ಬರುವ ಉಪಜಾತಿಗಳು ಇವೆ. ಉದಾಹರಣೆಗೆ ಮುಸ್ಲಿಂ ಸಮುದಾಯದಲ್ಲೇ ಶಿಯಾ ಮತ್ತು ಸುನ್ನಿ ಸಮುದಾಯಗಳಿದ್ದು, ಅದರಲ್ಲಿ ಸುಮಾರು 60 ಉಪ ಜಾತಿಗಳು ಇವೆ ಎಂಬ ಮಾತುಗಳು ಕೇಳಿಬಂದಿವೆ. ಜಾತಿ ಆಧಾರದ ಮೇಲೆ ಉಪಜಾತಿಗಳು, ಒಳಪಂಗಡಗಳ ಬಗ್ಗೆ ಗಣತಿ ಮಾಡಿದ್ದೀರಾ ಎಂಬುದು ಗೊತ್ತಿಲ್ಲ. ಸಂವಿಧಾನದಲ್ಲಿ ಜಾತಿಗಣತಿ ಬಿಡುಗಡೆ, ಸರ್ವೇ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆ. ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ತಿಳಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.