FactCheck:ಕಿರುತೆರೆ ನಟ ಶ್ರೀಧರ್ ಜೀವನ ಅಂತ್ಯದ ಹಾದಿ, ಮುದ್ದಾದ‌ ನಟನ ಬಾಳಲ್ಲಿ‌ ಬಿರುಗಾಳಿ

 | 
Hhh
ಅನಾರೋಗ್ಯ ಯಾವಾಗ, ಹೇಗೆ ಬಾಧಿಸುತ್ತದೆ ಅಂತ ಹೇಳೋಕೆ ಅಸಾಧ್ಯ. ಮೊನ್ನೆ ಮೊನ್ನೆಯವರೆಗೂ ಕಿರುತೆರೆ ನಟ ಶ್ರೀಧರ್ ಚೆನ್ನಾಗಿಯೇ ಇದ್ದರು. ‘ವಧು’ ಸೀರಿಯಲ್‌ನಲ್ಲಿ ನಾಯಕಿ ಡಿವೋರ್ಸ್ ಲಾಯರ್‌ ವಧು ಚಿಕ್ಕಪ್ಪನ ಪಾತ್ರದಲ್ಲಿ ನಟ ಶ್ರೀಧರ್‌ ಅಭಿನಯಿಸುತ್ತಿದ್ದರು. ಆದರೆ, ದಿಢೀರ್‌ ಅಂತ ‘ವಧು’ ಧಾರಾವಾಹಿಯಲ್ಲಿ ಶ್ರೀಧರ್ ನಾಪತ್ತೆಯಾದರು. ಶ್ರೀಧರ್‌ ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬೇರೆ ನಟ ರೀಪ್ಲೇಸ್‌ ಆದರು. ಹೀಗಾಗೋದಕ್ಕೆ ಕಾರಣ ನಟ ಶ್ರೀಧರ್‌ ಅವರಿಗೆ ಏಕಾಏಕಿ ಕಾಡಿದ ಅನಾರೋಗ್ಯ.
ಹೌದು.. ನಟ ಶ್ರೀಧರ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇನ್‌ಫೆಕ್ಷನ್‌ನಿಂದಾಗಿ ನಟ ಶ್ರೀಧರ್‌ ತೀವ್ರ ಅಸ್ವಸ್ಥರಾಗಿದ್ದಾರೆ. ಅನಾರೋಗ್ಯದಿಂದಾಗಿಯೇ ವಧು ಸೀರಿಯಲ್‌ ಶೂಟಿಂಗ್‌ಗೆ ಹಾಜರಾಗಲು ಶ್ರೀಧರ್‌ ಅವರಿಂದ ಸಾಧ್ಯವಾಗಿಲ್ಲ. ಸದ್ಯ ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ನಟ ಶ್ರೀಧರ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ನಟ ಶ್ರೀಧರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಧರ್ ಅವರನ್ನ ನೋಡಿಕೊಳ್ಳಲು ತಾಯಿ ಮಾತ್ರ ಇದ್ದು, ಚಿಕಿತ್ಸೆಗಾಗಿ ಪ್ರತಿದಿನ 10 - 15 ಸಾವಿರ ರೂಪಾಯಿ ಖರ್ಚಾಗುತ್ತಿದೆಯಂತೆ. ಇಲ್ಲಿಯವರೆಗೂ ತಮ್ಮ ಬಳಿ ಇದ್ದ ಹಣವನ್ನೆಲ್ಲಾ ಚಿಕಿತ್ಸೆಗಾಗಿ ಶ್ರೀಧರ್‌ ಮತ್ತು ತಾಯಿ ನೀಡಿದ್ದಾರೆ. ಇದೀಗ ಹೆಚ್ಚಿನ ಚಿಕಿತ್ಸೆಯ ಸಹಾಯಕ್ಕಾಗಿ ನಟ ಶ್ರೀಧರ್‌ ಅಂಗಲಾಚುತ್ತಿದ್ದಾರೆ.
ಪಾರು ,ವಧು ಮುಂತಾದ ಹಲವು ಸೀರಿಯಲ್‌ಗಳಲ್ಲಿ ನಟ ಶ್ರೀಧರ್‌ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್‌ ನಟನೆಯ ಕೆಲವೇ ತಿಂಗಳ ಹಿಂದೆಯಷ್ಟೇ ರಿಲೀಸ್ ಆದ ಮ್ಯಾಕ್ಸ್ ಸಿನಿಮಾದಲ್ಲೂ ಶ್ರೀಧರ್‌ ನಟಿಸಿದ್ದರು. ಇಂತಿಪ್ಪ ಕಲಾವಿದ ಶ್ರೀಧರ್‌ ಇದೀಗ ತಮ್ಮ ಚಿಕಿತ್ಸೆಗಾಗಿ ಜನರಲ್ಲಿ ಸಹಾಯ ಕೋರಿದ್ದಾರೆ.ನನ್ನನ್ನು ಬದುಕಿಸಲು ಪ್ರಯತ್ನಿಸಿ.. ಕೈಲಾದಷ್ಟು ಹಣದ ಸಹಾಯ ಮಾಡಿ ಎಂದು ಶ್ರೀಧರ್‌ ಹೇಳಿರುವುದನ್ನ ನಟಿ ಸಪ್ನಾ ದೀಕ್ಷಿತ್‌ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಹಾಗೇ, ಶ್ರೀಧರ್‌ ಅವರ ಗೂಗಲ್‌ ಪೇ ನಂಬರ್‌ ಅನ್ನೂ ಸಪ್ನಾ ದೀಕ್ಷಿತ್ ಹಂಚಿಕೊಂಡಿದ್ದಾರೆ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.