Pahalgam ಉ ಗ್ರರ ದಾ.ಳಿ ನಡೆದಾಗ ಹಿಂದೂ ದೇವಾಲಯದ ಒಳಗೆ ಹೋಗಿ‌ ಜೀವ ಉಳಿಸಿಕೊಂಡ ಕುಟುಂಬ

 | 
Bs
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸದಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಿಂದಾಗಿ 26 ಮಂದಿ ಸಾವನ್ನಪ್ಪಿದರು. ಪ್ರವಾಸಕ್ಕೆಂದು ಖುಷಿಖುಷಿಯಾಗಿ ಹೋಗಿದ್ದ ಅದೆಷ್ಟೋ ಕುಟುಂಬಗಳು ಈ ರಕ್ತಪಿಪಾಸುಗಳಿಂದ ಕಣ್ಣೀರಲ್ಲಿ ಕೈತೊಳೆಯುವಂತಾಯಿತು. ಆದರೆ ಇಲ್ಲೊಂದು ಕುಟುಂಬ ಇದೆ ನೋಡಿ. ಅವರೂ ಕೂಡ ಆ ದಿನ ಇದೇ ಪಹಲ್ಗಾಮ್‌ಗೆ ಹೋಗಬೇಕಿತ್ತು. 
ಇನ್ನು ಕುದುರೆ ಏರಿ ಘಟನೆ ನಡೆದ ಬೈಸರನ್ ವಾಲಿಯತ್ತ ತೆರಳುತ್ತಿದ್ದು 500 ಮೀಟರ್ ಅಂತರದಲ್ಲಿ ಇರುವಾಗ ಸಾಕಷ್ಟು ಜನ ಗಾಬರಿಗೊಂಡು ಹಿಂದಿರುಗುತ್ತಿರುವುದು ಕಂಡುಬಂದಿದೆ. ತಕ್ಷಣ ಚಂದ್ರಶೇಖರ್ ಸ್ಥಳೀಯರಲ್ಲಿ ವಿಚಾರಿಸಿದಾಗ ಅವರು ಕಾಶ್ಮೀರಿ ಭಾಷೆಯಲ್ಲಿ ಉತ್ತರಿಸಿ ಮರ ಒಂದು ಬಿದ್ದಿದೆ, ಹೀಗಾಗಿ ನಾವು ಹಿಂದಿರುಗುತ್ತಿದ್ದೇವೆ ಗಾಬರಿ ಪಡಬೇಕಾದ ಅಗತ್ಯವಿಲ್ಲ ಎಂದು ಉತ್ತರಿಸಿದರು ಎನ್ನಲಾಗಿದೆ.
ಕೆಲವೇ ಕ್ಷಣಗಳಲ್ಲಿ ಭಯೋತ್ಪಾದರ ದಾಳಿ ನಡೆದಿರುವ ಸಂಗತಿ ಇವರಿಗೆ ತಿಳಿದು ಬಂದು ತಕ್ಷಣ ವಾಸ್ತವ್ಯ ಸ್ಥಳಕ್ಕೆ ಹಿಂದಿರುಗಿದ್ದಾರೆ. ಚಂದ್ರಶೇಖರ್ ಕುಟುಂಬ ಐದು ದಿನಗಳ ಪ್ರವಾಸ ಹಮ್ಮಿಕೊಂಡಿದ್ದು ತಾಯಿ ಇಂದಿರಮ್ಮ, ಪತ್ನಿ ಲೀಲಾ, ಮಕ್ಕಳಾದ ನಕ್ಷತ್, ಸ್ನೇಹ ಇವರೊಂದಿಗಿದ್ದಾರೆ. ಎಲ್ಲರೂ ಸುರಕ್ಷಿತವಾಗಿ ಊರು ಸೇರಿದ್ದಾರೆ. ಅಲ್ಲದೇ ದೇವರ ದರ್ಶನ ಮಾಡಲು ದೇವಸ್ಥಾನಕ್ಕೆ ಹೋಗಿದ್ದರಿಂದ ಬಚಾವ್ ಆಗಿದ್ದೇವೆ ಎಂದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಬಾಗಲಕೋಟೆಯ 13 ಜನ ಸೇಫ್ ಆಗಿದ್ದಾರೆ. ನಾಲ್ಕು ಜನ ದಂಪತಿ ಹಾಗೂ ಐದು ಜನ ಮಕ್ಕಳು ಸುರಕ್ಷಿತವಾಗಿದ್ದಾರೆ. ಮೂರು ದಂಪತಿ ಒಂದೇ ಕುಟುಂಬದವರು. ಒಬ್ಬರು ಅವರ ಆಪ್ತವಲಯದ ಬೇರೆ ದಂಪತಿ. ಬಾಗಲಕೋಟೆಯ ಮಾರವಾಡಿ ಗಲ್ಲಿಯ ನಿವಾಸಿಗಳು. ಕಿಶೋರ್ ಕಾಸಟ್,ಸೂರಜ್ ಕಾಸಟ್, ಗಿರೀಶ್ ಕಾಸಟ್, ನಿತೀಶ್ ಬಂಗ್ ನಾಲ್ವರು ದಂಪತಿ ಹಾಗೂ ಮಕ್ಕಳು ಕೂಡಾ ಬಚಾವ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.