ಹೆಂಡತಿ ಕೈಕೊಟ್ಟ ಬಳಿಕ ಆತ್ಮಹ ತ್ಯೆ ದಾರಿ ಹಿಡಿದ ಖ್ಯಾತ ರ್ಯಾಪರ್
Feb 13, 2025, 09:08 IST
|

ಅದ್ಯಾಕೋ ಪುರುಷರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಬೆಂಗಳೂರಿನ ಕಾಡುಬೀಸನಹಳ್ಳಿಯ ಅಪಾರ್ಟ್ಮೆಂಟ್ವೊಂದರ ಫ್ಲ್ಯಾಟ್ನಲ್ಲಿ ಮೂರು ದಿನಗಳ ಹಿಂದೆ ಒಡಿಶಾ ಮೂಲದ ಜನಪ್ರಿಯ ರ್ಯಾಪರ್ ಅಭಿನವ್ ಸಿಂಗ್ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಮಾರತ್ಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಿಟೆಕ್ ಪದವೀಧರನಾಗಿದ್ದ ಅಭಿನವ್, ಹತ್ತು ದಿನಗಳ ಹಿಂದೆ ನಗರಕ್ಕೆ ಆಗಮಿಸಿ ಎಂಬೆಸಿ ವಿಲೇಜ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕಾಡುಬೀಸನಹಳ್ಳಿಯ ಯಟೋಪಿಯಾ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗೆ ಫೆ.9ರಂದು ಶಿಫ್ಟ್ ಆಗಿ ಸ್ನೇಹಿತ ರಜತ್ ಜತೆ ನೆಲೆಸಿದ್ದರು. ಅದೇ ದಿನ ಮತ್ತೊಬ್ಬ ಸ್ನೇಹಿತ ತನ್ಮಯ್ ಫ್ಲ್ಯಾಟ್ಗೆ ಬಂದಿದ್ದು, ಮೂವರೂ ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಕ್ರಿಕೆಟ್ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸಿದ್ದರು. ಪಂದ್ಯ ಮುಗಿದ ಬಳಿಕ ತನ್ಮಯ್ ತನ್ನ ಮನೆಗೆ ಹೋಗಿದ್ದರು.
ರಜತ್ ಪ್ರತ್ಯೇಕ ಕೊಠಡಿಯಲ್ಲಿ ಮಲಗಲು ಹೋಗಿದ್ದಾರೆ. ಫೆ.10ರಂದು ಬೆಳಗ್ಗೆ ರಜತ್ ಕೆಲಸಕ್ಕೆ ಹೋಗಿದ್ದಾರೆ. ಈ ನಡುವೆ ಅಭಿನವ್ ತಂದೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸದ ಕಾರಣಕ್ಕೆ ನಗರದಲ್ಲಿ ನೆಲೆಸಿರುವ ಸಂಬಂಧಿ ಅಮಿತ್ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ನಿಟ್ಟಿನಲ್ಲಿ ಅಮಿತ್, ಕಚೇರಿಗೆ ಹೋಗಿದ್ದ ರಜತ್ಗೆ ಕರೆ ಮಾಡಿ ವಿಷಯ ತಿಳಿಸಿ ಇಬ್ಬರೂ ಫ್ಲ್ಯಾಟ್ ಬಳಿ ತೆರಳಿದ್ದಾರೆ. ಫ್ಲ್ಯಾಟ್ ಬಾಗಿಲು ತೆರೆದು ನೋಡಿದಾಗ ಅಭಿನವ್ ಮಲಗಿದ್ದ ಸ್ಥಳದಲ್ಲಿಯೇ ಮೃತಪಟ್ಟಿರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
32 ವರ್ಷದ ಅಭಿನವ್ ಮೃತದೇಹದ ಸಮೀಪವೇ ಪೊಟ್ಯಾಶಿಯಂ ಥಯೋನೈಟ್ ಪೊಟ್ಟಣ ಪತ್ತೆಯಾಗಿದೆ. ಇದನ್ನು ಆನ್ಲೈನ್ ಮುಖಾಂತರ ಮನೆಗೆ ತರಿಸಿಕೊಂಡಿರುವುದು ಗೊತ್ತಾಗಿದೆ.ಅಭಿನವ್ ಅವರ ಪತ್ನಿ ಉತ್ಕಲ್ ದೀಪಿಕಾ ಜತೆ ಕೌಟುಂಬಿಕ ಕಲಹವಿತ್ತು. ಈ ಕಾರಣಕ್ಕೆ ಒಂದು ವರ್ಷದ ಹಿಂದೆ ದಂಪತಿ ಪ್ರತ್ಯೇಕವಾಗಿದ್ದರು.
ಹಾಗಾಗಿ ಮ್ಯಾಚ್ ಮುಗಿದ ಬಳಿಕ ಅಭಿನವ್ ಮದ್ಯ ಇಲ್ಲವೇ ಬೇರೆ ದ್ರಾವಣಕ್ಕೆ ಮಿಶ್ರಣ ಮಾಡಿಕೊಂಡು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅಭಿನವ್ ಸಾವು ಹೇಗೆ ಸಂಭವಿಸಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.