ಮದ್ವೆ ಮಂಟಪದಲ್ಲೇ 10ಲಕ್ಷ ವರದಕ್ಷಿಣೆ ಕೇಳಿದ ವರ ಜೈಲು,ಪಾಲು
![ಗ್](https://powerfullkarunadu.tech/static/c1e/client/98456/uploaded/0d49d332060225c32f6ddb70e572af96.jpg?width=981&height=515&resizemode=4)
ಮೊದಲೆಲ್ಲ ವರದಕ್ಷಿಣೆಯ ಭೂತ ಎಲ್ಲರನ್ನೂ ಕಾಡಿತ್ತು. ಕಾಲ ಸರಿದಂತೆ ಇನ್ನಿಲ್ಲವಾಗಿತ್ತು. ಆದರೆ ಇದೀಗ ಮತ್ತೆ ಶುರುವಾಗಿದೆ ಹೌದು ಕೆಲವು ಘಟನೆಗಳು ಬೆಳಕಿಗೆ ಬಂದರೆ ಇನ್ನು ಕೆಲವು ಘಟನೆಗಳು ಅಲ್ಲಿಯೇ ಮುಚ್ಚಿ ಹೋಗುತ್ತದೆ.ಸರ್ಕಾರಿ ನೌಕರನೋರ್ವ ತಾಳಿ ಕಟ್ಟುವ ಸಮಯದಲ್ಲಿ ವರದಕ್ಷಿಣೆ ಡಿಮ್ಯಾಂಡ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ವರನ ವರದಕ್ಷಿಣೆ ಆಸೆಗೆ ಮದುವೆ ಮುರಿದು ಬಿದ್ದಿದ್ದು, ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ್ ಎಂಬಾತ ಸರ್ಕಾರಿ ನೌಕರನಾಗಿದ್ದು, ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ್.ಡಿ.ಎ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಆದರೆ ಮದುವೆ ದಿನ 100 ಗ್ರಾಂ ಚಿನ್ನ, 10 ಲಕ್ಷ ವರದಕ್ಷಿಣೆಗೆ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಈತನ ಬೇಡಿಕೆಯಿಂದಾಗಿ ಮದುವೆ ನಿಂತಿದೆ.
ವರ ಸಚಿನ್ ಪಾಟೀಲ್ ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗ್ರಾಂ ಬಂಗಾರ, ಒಂದು ಲಕ್ಷ ವರೋಪಚಾರ ನೀಡುವ ಮಾತುಕತೆ ನಡೆದಿತ್ತು. 30-12-2023ರ ಮದುವೆ ದಿನದಂದು 100 ಗ್ರಾಂ ಚಿನ್ನ, 10 ಲಕ್ಷ ವರದಕ್ಷಿಣೆ ನೀಡಲು ಬೇಡಿಕೆ ಇಟ್ಟಿದ್ದಾನೆ. ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ಮದುವೆ ಆಗಲ್ಲ ಎಂದು ವರ ಹೇಳಿದ್ದಾನೆ.
ಆಗಲೇ ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ ಎಂದಿದ್ದರೂ ಕೇಳದೆ ಬಲವಂತ ಮಾಡಿದ್ದ ವರ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ವಧುವಿನಿಂದ ವರನ ವಿರುದ್ಧ ದೂರು ದಾಖಲಾಗಿದೆ. ವಧುವಿನ ದೂರಿನ ಅನ್ವಯ ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ್ನನ್ನು ಪೊಲೀಸರು ಬಂಧಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.