ಗುರುಕಿರಣ್ ಪತ್ನಿ ಪಲ್ಲವಿ ಶೆಟ್ಟಿಗೂ ಕನ್ನಡದ ನಟ ಸುನೀಲ್ ಗೂ ಯಾವ ಸಂಬಂಧ ಇತ್ತು ಗೊ.ತ್ತಾ

 | 
J

ಕನ್ನಡ ಚಿತ್ರರಂಗದ ಅತ್ಯಂತ ಸ್ಪುರದ್ರೂಪಿ ನಟ ಎಂದೇ ಖ್ಯಾತಿ ಪಡೆದಿದ್ದರು ನಟ ಸುನೀಲ್. ಶ್ರುತಿ ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದ ಸುನಿಲ್ ಬಳಿಕ ಹೆಚ್ಚಾಗಿ ಅಂದಿನ ಕಾಲದ ಮಹಾನ್ ನಾಯಕಿ ನಟಿ ಮಾಲಾಶ್ರೀ ಜತೆಗೇ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಸುನಿಲ್-ಮಾಲಾಶ್ರೀ ಜೋಡಿಯ 'ಬೆಳ್ಳಿ ಕಾಲುಂಗುರ' ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಸಿಂಧೂರ ತಿಲಕ, ಹಳ್ಳಿ ರಂಭೆ ಬೆಳ್ಳಿ ಬೊಂಬೆ, ಮಾಲಾಶ್ರೀ ಮಾಮಾಶ್ರೀ ಹಾಗೂ ಮರಣ ಮೃದಂಗ ಚಿತ್ರಗಳಲ್ಲಿ ಕೂಡ ಮಾಲಾಶ್ರೀ-ಸುನಿಲ್ ಜತೆಯಾಗಿ ನಟಿಸಿದ್ದರು.  ​ 

ಸ್ಯಾಂಡಲ್‌ವುಡ್‌ನಲ್ಲಿ 5 ವರ್ಷಗಳಲ್ಲಿ 20 ಚಿತ್ರಗಳಲ್ಲಿ ನಟಿಸಿದ್ದ ಸುನಿಲ್(Sunil), ಯಾವುದೇ ಕಾಂಟ್ರೋವರ್ಸಿಗೆ ಒಳಗಾಗಿರಲಿಲ್ಲ ಎಂಬುದು ವಿಶೇ‍ಷ. ಮಾಲಾಶ್ರೀ-ಸುನಿಲ್ ಲವ್ ಮಾಡುತ್ತಿದ್ದರು ಎಂಬ ಸುದ್ದಿಯಿತ್ತಾದರೂ ಅದೇನೂ ಅನೈತಿಕ ಆಗಿರಲಿಲ್ಲ. ಏಕೆಂದರೆ, ಅಂದು ಮಾಲಾಶ್ರೀ (Malashri) ಹಾಗೂ ಸುನಿಲ್ ಇಬ್ಬರಿಗೂ ಮದುವೆ ಆಗಿರಲಿಲ್ಲ. ಬಹಳಷ್ಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿರುವ ಅವರಿಬ್ಬರೂ ಲವ್ ಮಾಡುತ್ತಾರೆ, ಮದುವೆಯಾಗುತ್ತಾರೆ ಎಂದರೆ ಅದರಲ್ಲಿ ಯಾರೂ ತಪ್ಪು ಹುಡುಕಲು ಸಾಧ್ಯವೂ ಇರಲಿಲ್ಲ. 

ಆದರೆ ಹ್ಯಾಂಡ್‌ಸಮ್ ಹುಡುಗ, ನಟ ಸುನಿಲ್ 24 ಜೂನ್ 1994ರಂದು ಕಾರು ಅಪಘಾತದಲ್ಲಿ ನಿಧನರಾದರು. ಜತೆಯಲ್ಲಿ ನಟಿ ಮಾಲಾಶ್ರೀ ಕೂಡ ಇದ್ದರು. ಡ್ರೈವರ್ ಸೇರಿದಂತೆ ನಾಲ್ಕು ಜನರಿದ್ದ ಆ ಕಾರಿನಲ್ಲಿ ನಟ ಸುನಿಲ್, ನಟಿ ಮಾಲಾಶ್ರೀ ಜತೆ ಸುನಿಲ್ ಚಿಕ್ಕಮ್ಮನ ಮಗ ಸಚಿನ್ ಕೂಡ ಇದ್ದರು. ಅಂದು ಏನಾಯಿತು ಎಂದು ಹೇಳಿದ್ದು ಇದೇ ಸಚಿನ್, ಆದರೆ, ಅವರು ಹೇಳಿದ್ದು ಅಪಘಾತಕ್ಕೆ ಮೊದಲು ಮತ್ತು ಬಳಿಕ ಏನಾಯಿತು ಎಂಬುದನ್ನು ಮಾತ್ರ. ಏಕೆಂದರೆ, ಆಕ್ಸಿಡೆಂಟ್ ಆದಾಗ ಅವರು ನಿದ್ದೆ ಮಾಡುತ್ತಿದ್ದರಂತೆ, ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದರಂತೆ. 

ಸಚಿನ್ ಹೇಳಿರುವಂತೆ 'ಒಂದು ಕಾರ್ಯಕ್ರಮವನ್ನು ಹೈದಾರಾಬಾದ್‌ನಲ್ಲಿ ಮುಗಿಸಿ ರಾತ್ರಿ 11.30ರ ಬಳಿಕ ಇನ್ನೊಂದು ಕಾರ್ಯಕ್ರಮದ ಸಲುವಾಗಿ ಹೈದರಾಬಾದ್​ನಿಂದ ಕರ್ನಾಟಕಕ್ಕೆ ಬರುತ್ತಿದ್ದೆವು. ನಮ್ಮ ಡ್ರೈವರ್​ ಬೆಂಗಳೂರಿನಿಂದ ಹೈದರಾಬಾದ್​ಗೆ ಬಂದು ಅಲ್ಲಿಂದ ಸುನೀಲ್ ಹಾಗು ನಮ್ಮನ್ನೆಲ್ಲ ಕರೆದುಕೊಂಡು ಹೊರಟಿದ್ದರು. ಒಂದು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿಯೇ ಇನ್ನೊಂದು ಜಾಗಕ್ಕೆ ಹೊರಟೆವು. ಡ್ರೈವರ್​ಗೆ ಸರಿಯಾಗಿ ನಿದ್ರೆ ಆಗಿರಲಿಲ್ಲ ಎನಿಸುತ್ತದೆ. ಅದೇ ಸಮಸ್ಯೆ ಆಯ್ತು ಎಂದುಕೊಳ್ಳಬೇಕು. 

ನಾವೆಲ್ಲ ಕಾಂಟೆಸಾ ಕಾರಿನಲ್ಲಿ ಚಲಿಸುತ್ತಿದ್ದಾಗ ಸುನಲ್ ಡ್ರೈವರ್‌ಗೆ ನಿನಗೆ ಏನಾದರೂ ನಿದ್ರೆ ಬಂದರೆ ಹೇಳು, ನಾವ್ಯಾರಾದರೂ ಆ ಸಿಟಿಗೆ ಬರುತ್ತೇವೆ ಎಂದು ಹೇಳಿದ್ದರು. ಅಷ್ಟೇ ನನಗೆ ನೆನಪಿರುವುದು. ಎಕೆಂದರೆ ಬಳಿಕ ನಾನು ನಿದ್ದೆಗೆ ಜಾರಿದ್ದೆ. ಅಪಘಾತವಾಗಿದ್ದು ನನಗೆ ಗೊತ್ತೇ ಆಗಲಿಲ್ಲ. ಆಮೇಲೆ ಎಚ್ಚರ ಆದಾಗ ಆಸ್ಪತ್ರೆಯಲ್ಲಿ ಇದ್ದೆ ಎಂದು ಅಂದಿನ ಅಪಘಾತದ ಬಗ್ಗೆ ಹೇಳಿದರು. ಇನ್ನು ಪ್ರಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಪತ್ನಿ ಪಲ್ಲವಿ ಶೆಟ್ಟಿಯವರ ಕಸಿನ್ ಬ್ರದರ್ “ಬೆಳ್ಳಿ ಕಾಲುಂಗುರ” ಚಿತ್ರ ನಟ ಸುನೀಲ್ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. 

ಪಲ್ಲವಿ, ನಟ ಸುನೀಲ್​​ ಒಟ್ಟಿಗೆ ಆಡಿ ಬೆಳದವರಾಗಿದ್ದಾರೆ. ಇಬ್ಬರು ವರಸೆಯಲ್ಲಿ ಅಣ್ಣ- ತಂಗಿ ಆಗುತ್ತಾರೆ. ಹೀಗಾಗಿ ನಟ ಸುನೀಲ್ ಹಾಗೂ  ಗುರುಕಿರಣ್ ಅವರ ಪತ್ನಿ ಪಲ್ಲವಿ ಶೆಟ್ಟಿ ಅವರ ಮಧ್ಯೆ ರಕ್ತ ಸಂಬಂಧವಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

ಕನ್ನಡ ಚಿತ್ರರಂಗದ ಅತ್ಯಂತ ಸ್ಪುರದ್ರೂಪಿ ನಟ ಎಂದೇ ಖ್ಯಾತಿ ಪಡೆದಿದ್ದರು ನಟ ಸುನೀಲ್. ಶ್ರುತಿ ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದ ಸುನಿಲ್ ಬಳಿಕ ಹೆಚ್ಚಾಗಿ ಅಂದಿನ ಕಾಲದ ಮಹಾನ್ ನಾಯಕಿ ನಟಿ ಮಾಲಾಶ್ರೀ ಜತೆಗೇ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಸುನಿಲ್-ಮಾಲಾಶ್ರೀ ಜೋಡಿಯ 'ಬೆಳ್ಳಿ ಕಾಲುಂಗುರ' ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಸಿಂಧೂರ ತಿಲಕ, ಹಳ್ಳಿ ರಂಭೆ ಬೆಳ್ಳಿ ಬೊಂಬೆ, ಮಾಲಾಶ್ರೀ ಮಾಮಾಶ್ರೀ ಹಾಗೂ ಮರಣ ಮೃದಂಗ ಚಿತ್ರಗಳಲ್ಲಿ ಕೂಡ ಮಾಲಾಶ್ರೀ-ಸುನಿಲ್ ಜತೆಯಾಗಿ ನಟಿಸಿದ್ದರು.  ​ 

ಸ್ಯಾಂಡಲ್‌ವುಡ್‌ನಲ್ಲಿ 5 ವರ್ಷಗಳಲ್ಲಿ 20 ಚಿತ್ರಗಳಲ್ಲಿ ನಟಿಸಿದ್ದ ಸುನಿಲ್(Sunil), ಯಾವುದೇ ಕಾಂಟ್ರೋವರ್ಸಿಗೆ ಒಳಗಾಗಿರಲಿಲ್ಲ ಎಂಬುದು ವಿಶೇ‍ಷ. ಮಾಲಾಶ್ರೀ-ಸುನಿಲ್ ಲವ್ ಮಾಡುತ್ತಿದ್ದರು ಎಂಬ ಸುದ್ದಿಯಿತ್ತಾದರೂ ಅದೇನೂ ಅನೈತಿಕ ಆಗಿರಲಿಲ್ಲ. ಏಕೆಂದರೆ, ಅಂದು ಮಾಲಾಶ್ರೀ (Malashri) ಹಾಗೂ ಸುನಿಲ್ ಇಬ್ಬರಿಗೂ ಮದುವೆ ಆಗಿರಲಿಲ್ಲ. ಬಹಳಷ್ಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿರುವ ಅವರಿಬ್ಬರೂ ಲವ್ ಮಾಡುತ್ತಾರೆ, ಮದುವೆಯಾಗುತ್ತಾರೆ ಎಂದರೆ ಅದರಲ್ಲಿ ಯಾರೂ ತಪ್ಪು ಹುಡುಕಲು ಸಾಧ್ಯವೂ ಇರಲಿಲ್ಲ. 

ಆದರೆ ಹ್ಯಾಂಡ್‌ಸಮ್ ಹುಡುಗ, ನಟ ಸುನಿಲ್ 24 ಜೂನ್ 1994ರಂದು ಕಾರು ಅಪಘಾತದಲ್ಲಿ ನಿಧನರಾದರು. ಜತೆಯಲ್ಲಿ ನಟಿ ಮಾಲಾಶ್ರೀ ಕೂಡ ಇದ್ದರು. ಡ್ರೈವರ್ ಸೇರಿದಂತೆ ನಾಲ್ಕು ಜನರಿದ್ದ ಆ ಕಾರಿನಲ್ಲಿ ನಟ ಸುನಿಲ್, ನಟಿ ಮಾಲಾಶ್ರೀ ಜತೆ ಸುನಿಲ್ ಚಿಕ್ಕಮ್ಮನ ಮಗ ಸಚಿನ್ ಕೂಡ ಇದ್ದರು. ಅಂದು ಏನಾಯಿತು ಎಂದು ಹೇಳಿದ್ದು ಇದೇ ಸಚಿನ್, ಆದರೆ, ಅವರು ಹೇಳಿದ್ದು ಅಪಘಾತಕ್ಕೆ ಮೊದಲು ಮತ್ತು ಬಳಿಕ ಏನಾಯಿತು ಎಂಬುದನ್ನು ಮಾತ್ರ. ಏಕೆಂದರೆ, ಆಕ್ಸಿಡೆಂಟ್ ಆದಾಗ ಅವರು ನಿದ್ದೆ ಮಾಡುತ್ತಿದ್ದರಂತೆ, ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದರಂತೆ. 

ಸಚಿನ್ ಹೇಳಿರುವಂತೆ 'ಒಂದು ಕಾರ್ಯಕ್ರಮವನ್ನು ಹೈದಾರಾಬಾದ್‌ನಲ್ಲಿ ಮುಗಿಸಿ ರಾತ್ರಿ 11.30ರ ಬಳಿಕ ಇನ್ನೊಂದು ಕಾರ್ಯಕ್ರಮದ ಸಲುವಾಗಿ ಹೈದರಾಬಾದ್​ನಿಂದ ಕರ್ನಾಟಕಕ್ಕೆ ಬರುತ್ತಿದ್ದೆವು. ನಮ್ಮ ಡ್ರೈವರ್​ ಬೆಂಗಳೂರಿನಿಂದ ಹೈದರಾಬಾದ್​ಗೆ ಬಂದು ಅಲ್ಲಿಂದ ಸುನೀಲ್ ಹಾಗು ನಮ್ಮನ್ನೆಲ್ಲ ಕರೆದುಕೊಂಡು ಹೊರಟಿದ್ದರು. ಒಂದು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿಯೇ ಇನ್ನೊಂದು ಜಾಗಕ್ಕೆ ಹೊರಟೆವು. ಡ್ರೈವರ್​ಗೆ ಸರಿಯಾಗಿ ನಿದ್ರೆ ಆಗಿರಲಿಲ್ಲ ಎನಿಸುತ್ತದೆ. ಅದೇ ಸಮಸ್ಯೆ ಆಯ್ತು ಎಂದುಕೊಳ್ಳಬೇಕು. 

ನಾವೆಲ್ಲ ಕಾಂಟೆಸಾ ಕಾರಿನಲ್ಲಿ ಚಲಿಸುತ್ತಿದ್ದಾಗ ಸುನಲ್ ಡ್ರೈವರ್‌ಗೆ ನಿನಗೆ ಏನಾದರೂ ನಿದ್ರೆ ಬಂದರೆ ಹೇಳು, ನಾವ್ಯಾರಾದರೂ ಆ ಸಿಟಿಗೆ ಬರುತ್ತೇವೆ ಎಂದು ಹೇಳಿದ್ದರು. ಅಷ್ಟೇ ನನಗೆ ನೆನಪಿರುವುದು. ಎಕೆಂದರೆ ಬಳಿಕ ನಾನು ನಿದ್ದೆಗೆ ಜಾರಿದ್ದೆ. ಅಪಘಾತವಾಗಿದ್ದು ನನಗೆ ಗೊತ್ತೇ ಆಗಲಿಲ್ಲ. ಆಮೇಲೆ ಎಚ್ಚರ ಆದಾಗ ಆಸ್ಪತ್ರೆಯಲ್ಲಿ ಇದ್ದೆ ಎಂದು ಅಂದಿನ ಅಪಘಾತದ ಬಗ್ಗೆ ಹೇಳಿದರು. ಇನ್ನು ಪ್ರಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಪತ್ನಿ ಪಲ್ಲವಿ ಶೆಟ್ಟಿಯವರ ಕಸಿನ್ ಬ್ರದರ್ “ಬೆಳ್ಳಿ ಕಾಲುಂಗುರ” ಚಿತ್ರ ನಟ ಸುನೀಲ್ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. 

ಪಲ್ಲವಿ, ನಟ ಸುನೀಲ್​​ ಒಟ್ಟಿಗೆ ಆಡಿ ಬೆಳದವರಾಗಿದ್ದಾರೆ. ಇಬ್ಬರು ವರಸೆಯಲ್ಲಿ ಅಣ್ಣ- ತಂಗಿ ಆಗುತ್ತಾರೆ. ಹೀಗಾಗಿ ನಟ ಸುನೀಲ್ ಹಾಗೂ  ಗುರುಕಿರಣ್ ಅವರ ಪತ್ನಿ ಪಲ್ಲವಿ ಶೆಟ್ಟಿ ಅವರ ಮಧ್ಯೆ ರಕ್ತ ಸಂಬಂಧವಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.