ಸಾಲ ಕಟ್ಟಲಾಗದೆ ಮನೆ ಮಾರಾಟ ಮಾಡಲು ಮುಂದಾದ ಹನುಮಂತನ‌ ತಂದೆ? ಕುರಿಗಾಯಿ ಹನುಮಂತನಿಗೆ ಸಾಲ‌‌ಬಾದೆ

 | 
Vh
ಬದುಕು ಬದಲಾಗಬಹುದು ಜಿ ಕನ್ನಡ ವಾಹಿನಿʼಯ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಸರಿಗಮಪ ಶೋ ಮೂಲಕ ಜನಮನ್ನಣೆ ಗಳಿಸಿದ ಕುರಿಗಾಹಿ ಹನುಮಂತ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದ. ಬಿಗ್ ಬಾಸ್ ಹೊಸ ಅಧ್ಯಾಯದಲ್ಲಿ ‌ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿಯೇ ಹನುಮಂತ ಡ್ಯಾನ್ಸ್ ಮಾಡುತ್ತಲೇ ದೊಡ್ಮನೆಗೆ ಬಂದಿದ್ದ. 
ಈತ ಬಂದ ಮೇಲೆ ಬಿಗ್‌ ಬಾಸ್‌ ನೋಡುವವರ ಸಂಖ್ಯೆಯೂ ದುಪ್ಪಟ್ಟಾಯಿತು. ಈ ಬಾರಿ ಅಷ್ಟೇನೂ ಹೇಳಿಕೊಳ್ಳುವಂತಹ ಸ್ಪರ್ಧಿಗಳು ಇಲ್ಲವೆಂದು ಫ್ಯಾನ್ಸ್‌ ಸಪ್ಪೆಮೋರೆ ಹಾಕಿದ್ದರು. ಆದರೆ ಹನುಮಂತ ಬಂದ ಮೇಲೆ ದೊಡ್ಮನೆ ಕಳೆಯೇ ಬದಲಾಯಿತು. ಹನುಮಂತ ಬರ್ತಿದ್ದಂತೆಯೇ ಸ್ವತಃ ಬಿಗ್‌ ಬಾಸ್‌ಗೆ ಕ್ವಾಟ್ಲೆ ಕೊಟ್ಟಿದ್ದ. ದೊಡ್ಮನೆಯಲ್ಲಿ ಹನುಮಂತ ತನ್ನ ಮುಗ್ಧತನದಿಂದಲೇ ಗೇಮ್‌ ಚೇಂಜರ್‌ ಆಗಿ ಆಟವಾಡುತ್ತಾ ನೂರಕ್ಕೂ ಹೆಚ್ಚು ದಿನ ಪೂರೈಸಿದ್ದಾನೆ. 
ತನ್ನ ಗುಣ, ನಡತೆ ಮತ್ತು ಒಳ್ಳೆಯತನದಿಂದಲೇ ದೊಡ್ಮನೆಯಲ್ಲಿ ಹನುಮಂತ ಸ್ಟ್ರಾಂಗ್‌ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಹೀಗಾಗಿಯೇ ಆತ ಗ್ರ್ಯಾಂಡ್‌ ಫಿನಾಲೆ ತಲುಪುವವರೆಗೂ ಇರ್ತಾರೆ ಅಂತಾ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿಯಿಂದ ದೊಡ್ಮನೆಗೆ ಕಾಲಿಟ್ಟ ಹನುಮಂತ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ವಿನ್ನರ್‌ ಆಗ್ತಾರಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.  
ಮೂಲಗಳ ಪ್ರಕಾರ, ಹನುಮಂತ ವೋಟ್ಸ್‌ ಪಡೆಯುವುದರಲ್ಲಿ ರೆಕಾರ್ಡ್‌ ಧೂಳಿಪಟ ಮಾಡಿದ್ದಾನಂತೆ. ರೆಕಾರ್ಡ್ ಬ್ರೇಕ್ ಮಾಡಿರುವ ಹನುಮಂತನ ಬಗ್ಗೆ ಬಿಗ್ ಬಾಸ್ ಮನೆಯಲ್ಲೂ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ತಂಡವೇ ಖುಷಿ ವ್ಯಕ್ತಪಡಿಸಿದೆಯಂತೆ. ಗ್ರ್ಯಾಂಡ್‌ ಫಿನಾಲೆ ಇನ್ನೇನು ಹತ್ತಿರ ಬರುತ್ತಿದೆ. ಹೀಗಾಗಿ ಈ ಬಾರಿಯ ಬಿಗ್‌ ಬಾಸ್‌ ವಿನ್ನರ್‌ ಹನುಮಂತನೇ ಆಗುತ್ತಾನೆ ಅಂತಾ ಹೇಳಲಾಗುತ್ತಿದೆ. 
ಈ ಹಿಂದೆ ಅವರ ತಾಯಿ ಶೀಲವ್ವ ಖರ್ಚಿಗೆ ಹಣ ಇಲ್ಲ ಎಂದಾಗ ಗೆದ್ದು ಬರುತ್ತೇನೆ ಎಂದಿದ್ದಾನೆ.ವೀಕ್ಷಕರು ಸಹ ಹನುಮಂತನೇ ಟ್ರೋಫಿ ಎತ್ತಿ ಹಿಡಿಯಬೇಕು ಅಂತಾ ಆಶಿಸುತ್ತಿದ್ದಾರೆ. ʼಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ' ಅನ್ನೋವಂತೆ ಈ ಬಾರಿಯ ಬಿಗ್‌ ಬಾಸ್‌ ವಿನ್ನರ್‌ ಹನುಮಂತ ಆಗ್ತಾನಾ ಕಾದುನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.