ಹುಬ್ಬಳ್ಳಿ; ಮೃತ ಶವವನ್ನು ಆಸ್ಪತ್ರೆಯಿಂದ ಮನೆಗೆ ತಲುಸಿದ ವೈದ್ಯರು, ತಾಯಿ ಮಾತಿನ ಸದ್ದಿಗೆ ಎದ್ದು ಕೂತ ಮಗ
Feb 11, 2025, 12:45 IST
|

ಪ್ರತಿದಿನ ಜಗತ್ತಲ್ಲಿ ಒಂದಲ್ಲ ಒಂದು ಹೊಸ ಘಟನೆಗಳು ಸಂಭವಿಸುತ್ತಲೇ ಇರುತ್ತದೆ. ಹೌದು ಡಾಬಾ ಬಂತು ಊಟಾ ಮಾಡ ಏಳ್ರಿ...' ಅಂತ ಗೋಳಾಡಿದ್ದೇ ತಡ, ಸತ್ತ ವ್ಯಕ್ತಿಯು ದೊಡ್ಡ ಉಸಿರು ಬಿಟ್ಟು ಮತ್ತೆ ಬದುಕಿ ಬಂದಿದ್ದಾರೆ. ಆಸ್ಪತ್ರೆಯಲ್ಲಿ ವ್ಯಕ್ತಿಯು ಮೃತಪಟ್ಟಿದ್ದಾರೆಂದು, ಅವರನ್ನು ಊರಿಗೆ ಕರೆ ತರುವಾಗ ಕುಟುಂಬಸ್ಥರು ಗೋಳಾಡುತ್ತ ಅಳುತ್ತಿರುವಾಗ ಒಂದೇ ಒಂದು ಮಾತಿಗೆ ಆ ವ್ಯಕ್ತಿ ಬದುಕಿದ ಸಂಗತಿಯು ಅಚ್ಚರಿ ಮೂಡಿಸಿದೆ.
ರೀ ಡಾಬಾ ಬಂತು ಊಟಾ ಮಾಡ ಏಳ್ರಿ ಎಂದಿದ್ದೇ ತಡಾ, ಸತ್ತ ಮನುಷ್ಯ ಬದುಕುಳಿದ ವಿಸ್ಮಯ ಘಟನೆಯೊಂದು ನಡೆದಿದೆ. ಹಾವೇರಿ ಜಿಲ್ಲೆಯ ಬಂಕಾಪುರದ 45 ವರ್ಷದ ಮಂಜುನಾಥ ಗುಡಿಮನಿ ಉರ್ಫ ಮಾಸ್ತರ್ ಎಂಬುವರು ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ 3-4 ಗಂಟೆ ಉಸಿರು ಇಲ್ಲದಿದ್ದಾಗ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ನಂತರ ಮಂಜುನಾಥ ಗುಡಿಮನಿ ಅವರ ಪತ್ನಿ ಶೀಲಾ, ಸಂಬಂಧಿಕರ ಜೊತೆಗೆ ಆಂಬ್ಯುಲೆನ್ಸ್ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಊರು ಹತ್ತಿರ ಬರುತ್ತಿದ್ದಂತೆ ಪತ್ನಿ 'ಡಾಬಾ ಬಂತು ನೋಡು ಊಟ ಮಾಡುತ್ತೀಯಾ?' ಎಂದು ಗೋಳಾಡಿ ಕಣ್ಣೀರಿಟ್ಟಾಗ ಮೃತವ್ಯಕ್ತಿ ಉಸಿರು ಬಿಟ್ಟಿದ್ದಾನೆ. ಆಗ ಕುಟುಂಬಸ್ಥರು ಗಾಬರಿಯಾಗಿ ಶಿಗ್ಗಾಂವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಬದುಕಿರುವುದನ್ನು ದೃಢಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಅದೇ ವಾಹನದಲ್ಲಿ ಹುಬ್ಬಳ್ಳಿ ಬಂದಿದ್ದು, ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಎಫ್ ಎಸ್ ಕಮ್ಮಾರ ಮಾಹಿತಿ ಕೊಟ್ಟಿದ್ದು, ರೆಡ್ ಝೋನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆಮಂಜುನಾಥ ಅವರ ಊರಿನಲ್ಲಿ, ಆತ ತೀರಿ ಹೋಗಿದ್ದಾನೆಂದು ಬ್ಯಾನರ್, ಓಂ ಶಾಂತಿ ಎಂದು ವಾಟ್ಸ್ ಆ್ಯಪ್ದಲ್ಲಿ ಮೇಸೆಜ್ಗಳು ಓಡಾಡಿದ್ದರು. ಈಗ ಜೀವ ಉಳಿದ ಸುದ್ದಿ ಕೇಳಿ ಆಯುಷ್ಯ ಕೊಟ್ಟು ದೇವರು ಕಾಪಾಡಲಿ ಎಂಬ ಹಾರೈಕೆಗಳನ್ನು ಹರಿಬಿಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.