ದರ್ಶನ್ ನಿನ್ನ ಪತಿಯಾ? ಪವಿತ್ರ ಬಳಿ ಜಡ್ಜ್ ಹೇಳಿ ಪಶ್ನೆಗೆ ಪವಿತ್ರ ಕೊಟ್ಟ ಉತ್ತರ ಕೇಳಿ ವಿಜಯಲಕ್ಷ್ಮಿ ತತ್ತರ
Apr 26, 2025, 18:37 IST
|

ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯನ್ನೇ ದರ್ಶನ್ ಆ್ಯಂಡ್ ಗ್ಯಾಂಗ್ ಕೊಲೆ ಮಾಡಿದ್ದಾರೆ ಎನ್ನುವುದ ಪೊಲೀಸರ ತನಿಖೆಯಿಂದ ತಿಳಿದಿದೆ. ಪವಿತ್ರಾ ಗೌಡಗೂ, ನಟ ದರ್ಶನ್ ಅವರಿಗೂ ಇರುವ ಸಂಬಂಧ ಎಂಥದ್ದು, ಇವರು ಪ್ರೇಮಿಗಳ ಅಥವಾ ಗಂಡ-ಹೆಂಡತಿನಾ ಎನ್ನುವ ಪ್ರಶ್ನೆ ಜನರನ್ನು ಕಾಡಿತ್ತು. ಇದೀಗ ಉತ್ತರ ಸಿಕ್ಕಿದೆ.
ನಟ ದರ್ಶನ್ ಜೊತೆ ನಟಿ ಪವಿತ್ರಾ ಗೌಡ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವೇಳೆ ಜನರು ಇಬ್ಬರು ಮದುವೆ ಆಗಿರಬಹುದು ಎಂದು ಊಹೆ ಮಾಡಿದ್ರು. ಆದ್ರೆ ಇವರಿಬ್ಬರ ಗೆಳೆತನದ ಅಸಲಿ ಕಥೆ ಏನು ಅನ್ನೋದು ಪೊಲೀಸರು ಸಲ್ಲಿದ ಚಾರ್ಜ್ಶೀಟ್ನಲ್ಲಿ ಬಯಲಾಗಿದೆ.ದರ್ಶನ್ ಹಾಗೂ ಪವಿತ್ರ ಸಂಬಂಧದ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ರೇಣುಕಾಸ್ವಾಮಿ ಕೇಸ್ ನ ಎ-1 ಪವಿತ್ರಾ ಗೌಡ, ಎ2 ದರ್ಶನ್ ಸುಮಾರು ವರ್ಷಗಳಿಂದ ಒಡನಾಟ ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಕೆಲ ವರ್ಷಗಳಿಂದ ಇಬ್ಬರು ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು ಎಂಬ ವಿಚಾರ ಇದೀಗ ಬಯಲಾಗಿದೆ.ಪವಿತ್ರಾ ಗೌಡ ಹಾಗೂ ದರ್ಶನ್ ಕೆಲ ವರ್ಷಗಳಿಂದ ಒಟ್ಟಿಗೆ ಓಡಾಡಿಕೊಂಡಿದ್ರು. ದರ್ಶನ್ ಜೊತೆಗಿನ ಫೋಟೋಗಳನ್ನು ಕೂಡ ಪವಿತ್ರಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ರು. ಇದೇ ವಿಚಾರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಪವಿತ್ರಾ ಮೇಲೆ ಸಿಟ್ಟಾಗಿದ್ರು. ಇಬ್ಬರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವಾರ್ ಕೂಡ ನಡೆದಿತ್ತು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರನ್ನು ಬಂಧಿಸಿದ ವೇಳೆ ಸುದ್ದಿಗೋಷ್ಠಿ ನಡೆಸಿದ್ದ ಪೊಲೀಸರು ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಎಂದು ಬಾಯ್ತಪ್ಪಿ ಹೇಳಿದ್ರು. ಇದಕ್ಕೆ ವಿಜಯಲಕ್ಷ್ಮಿ ಬೇಸರ ಹೊರಹಾಕಿ ಪೊಲೀಸರಿಗೆ ಪತ್ರ ಬರೆದಿದ್ರು. ಪವಿತ್ರಾ ಗೌಡ, ದರ್ಶನ್ ಪತ್ನಿ ಅಲ್ಲ ಪೊಲೀಸರ ವರದಿಗಳಲ್ಲಿ ಆಕೆಯನ್ನು ದರ್ಶನ್ ಪತ್ನಿ ಎಂದು ಉಲ್ಲೇಖಿಸಬೇಡಿ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ರು. ಕಾನೂನಿನ ಪ್ರಕಾರ ನಾನು ದರ್ಶನ್ ಪತ್ನಿ ಎಂದು ಪತ್ರದಲ್ಲಿ ವಿಜಯಲಕ್ಷ್ಮಿ ವಿವರಣೆ ನೀಡಿದ್ರು. ಒಟ್ಟಿನಲ್ಲಿ ಹೇಳುವುದಾದರೆ ಪವಿತ್ರಾ ಗೌಡ ದರ್ಶನ್ ಕೇವಲ ಫ್ರೆಂಡ್ಸ್ ಎಂದು ಹೇಳಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.