ಅನುಶ್ರೀಯನ್ನು ನಾನು ಮದುವೆ ಆಗುತ್ತೀನಿ ಎನ್ನುತ್ತಿರುವ ಜಗ್ಗೇಶ್ ಅವರ ಕೊನೆಯ ತಮ್ಮ; ಕನ್ನಡಿಗರಿಗೆ ಹಬ್ಬ

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋ ವೇದಿಕೆ ಮೇಲೆ ದಿಢೀರನೇ ಕಾಣಿಸಿಕೊಂಡ ನಟ ಜಗ್ಗೇಶ್ ಅವರ ಎರಡನೇ ಸಹೋದರ ರಾಮಚಂದ್ರ, ನಾನು ಅನುಶ್ರೀ ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ನಟಿ ಹಾಗೂ ನಿರೂಪಕಿ ಅನುಶ್ರೀ ಅವರನ್ನು ನೋಡಿದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.
ಹರಳು ಹುರಿದಂತೆ ಮಾತನಾಡುವ ಅನುಶ್ರೀ ಹಾವ, ಭಾವ ಹಾಗೂ ಮಾತನಾಡುವ ವೇಳೆ ಧ್ವನಿಯ ಏರಿಳಿತಕ್ಕೆ ತಕ್ಕಂತೆ ಅವರ ದೇಹದಲ್ಲಿ ಉಂಟಾಗುತ್ತಿದ್ದ ಭಂಗಿಯನ್ನು ನೋಡಿದರೆ ಮುಗ್ದ ಮನಸ್ಸುಗಳೂ ಕೂಡ ಸಂತಸದಿಂದ ಅವರೊಂದಿಗೆ ಕುಣಿದು ಕುಪ್ಪಳಿಸಬೇಕು ಎನಿಸುವುದು ಸಹಜ.
ಆದರೆ, ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋ ವೇದಿಕೆ ಮೇಲೆ ದಿಢೀರನೇ ಕಾಣಿಸಿಕೊಂಡ ನಟ ಜಗ್ಗೇಶ್ ಅವರ ಎರಡನೇ ಸಹೋದರ ರಾಮಚಂದ್ರ, ನಾನು ಅನುಶ್ರೀ ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಜಗ್ಗೇಶ್ ಹಾಗೂ ಅನುಶ್ರೀ ಇಬ್ಬರೂ ಗಾಬರಿಯಾಗಿದ್ದಾರೆ.
ಗ್ರಾಮೀಣ ಭಾಗದಿಂದ ಕಷ್ಟಪಟ್ಟು ಬೆಳೆದು ಬಂದ ನಟ ಜಗ್ಗೇಶ್ ಅವರು ನವರಸಗಳನ್ನೂ ಅರೆದು ಕುಡಿದಿದ್ದಾರೆ. ನಟನಾ ಕ್ಷೇತ್ರವಾದ ಸಿನಿಮಾರಂಗ ಮಾತ್ರವಲ್ಲದೇ ರಾಜಕೀಯದಲ್ಲಿಯೂ ಯಶಸ್ಸು ಗಳಿಸಿರುವ ಅವರು ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ಈಗ ಬಿಡುವಿನ ಸಮಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಜಡ್ಜ್ ಆಗಿಯೂ ಕಾರ್ಯ ನಿರ್ಹಿಸುತ್ತಿದ್ದಾರೆ.
ಕಾಮಿಡಿ ಕಿಲಾಡಿಗಳು ಶೋನಲ್ಲಿ ಒಂದು ತಂಡ ಮಾಲೀಕರಾಗಿರುವ ಆಂಕರ್ ಅನುಶ್ರೀ ಮೇಲೆ ನನಗೆ ಲವ್ವಾಗಿದೆ ಎಂದು ನಟ ಜಗ್ಗೇಶ್ ಅವರ ಸಹೋದರ ರಾಮಚಂದ್ರ ಹೇಳಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಶೋನಲ್ಲಿ ಫ್ಯಾಮಿಲಿ ರೌಂಡ್ ವೇಳೆ ಕೆಂಟೆಸ್ಟೆಂಟ್ಗಳು ತಮ್ಮ ಶೋ ಪ್ರದರ್ಶನದ ನಂತರ ಮಾತನಾಡುವಾಗ ನಟ ಜಗ್ಗೇಶ್ ಸಹೋದರ ರಾಮಚಂದ್ರನ ಬಗ್ಗೆ ಮಾತನಾಡಿದ್ದಾರೆ. ಈ ವೇಳೆಯೇ ರಾಮಚಂದ್ರ ಅವರು ವೇದಿಕೆ ಮೇಲೆ ಬಂದಿದ್ದಾರೆ.
ಇದನ್ನು ನೋಡಿ ಗಾಬರಿಯಾದ ನಟ ಜಗ್ಗೇಶ್ ಲೇ.., ನೀನೆಲ್ಲಿಂದ ಬಂದ್ಲಾ..? ಎಂದು ಕೇಳುತ್ತಾರೆ. ಆಗ ನಾನು ವೇದಿಕೆ ಹಿಂದೆಯೇ ಇದ್ದೆ, ನೀನು ಮಾತನಾಡುವುದನ್ನು ಕೇಳಿ ಬಂದೆ ಎಂದು ಹೇಳುತ್ತಾರೆ. ಜೀ ಕನ್ನಡ ವೇದಿಕೆ ಅವರೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ ಎಂದು ಕೈ ಸನ್ನೆಯ ಮೂಲಕವೇ ತಿಳಿಸಿದ್ದಾರೆ. ಯಾವನೋ ನೋಡು ಕರೆಕ್ಟಾಗಿ ನನ್ನ ತಮ್ಮನನ್ನು ಇಲ್ಲಿಗೆ ಕಳಿಸಿಬಿಟ್ಟಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.