ಏಕಾಏಕಿ ದುಡ್ಡಿನ ವಿಚಾರವಾಗಿ ಕನ್ನಡಿಗರ ಮುಂದೆ ಕಣ್ಣೀರು ಸುರಿಸಿದ ಜಿಮ್ ರವಿ
Updated: Mar 23, 2025, 12:50 IST
|

ಕಳೆದ ಎರಡೂವರೆ ದಶಕಗಳಿಂದ ಬಾಡಿ ಬಿಲ್ಡರ್ ಜಿಮ್ ರವಿ ಅವರು ಕನ್ನಡ, ತೆಲುಗು, ತಮಿಳು, ಭಾಷೆಗಳ ಸುಮಾರು 130ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 6 ರಿಯಾಲಿಟಿ ಶೋಗೂ ಸ್ಪರ್ಧಿಯಾಗಿ ಹೋಗಿ ಬಂದಿದ್ದರು. ಅವರು ನಾಯಕ ನಟನಾಗಿ ಕೂಡ ಮಿಂಚಿದ್ದಾರೆ. ಆದರೆ ಇದೀಗ ಲೈವ್ ಗೆ ಬಂದು ಬೇಸರದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ನಾಗರಭಾವಿ ಬಳಿ ತಮ್ಮದೇ ಆದ ಜಿಮ್ ಒಂದನ್ನು ಇವರು ಇಟ್ಟುಕೊಂಡಿದ್ದಾರೆ. 'ಪುರುಷೋತ್ತಮ' ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಟನಾಗಿ ಪರಿಚಯವಾಗಿದ್ದಾರೆ .ವಿಶೇಷ ಎಂದರೆ ಅವರೇ ಈ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದಾರೆ.ಈ ಹಿಂದೆ 'ದಿಲ್ದಾರ್', 'ನಾನು ನಮ್ಮುಡ್ಗಿ', 'ಖರ್ಚಿಗೊಂದು ಮಾಫಿಯಾ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಅಮರ್ನಾಥ್ ಚಿತ್ರಕಥೆ -ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಮುಹೂರ್ತ ಆಗಲಿದ್ದು, ಇವರ ಚಿತ್ರಕ್ಕೆ ಸ್ಟಾರ್ ನಟರೊಬ್ಬರು ಚಾಲನೆ ನೀಡಿದ್ದರು.
ಇನ್ನು ಲೈವ್ ಗೆ ಬಂದು ಜಿಮ್ ರವಿ ಮೊದಲೇ ತಾಯಿಯನ್ನು ಕಳೆದುಕೊಂಡಿದ್ದೆ ಇದೀಗ ಕೆಲ ದಿನಗಳ ಹಿಂದಷ್ಟೇ ತಂದೆಯು ಕೂಡ ನಮ್ಮನ್ನೂ ಅಗಲಿ ಹೋದರು. ಅವರಿಗೆ ಕಾಶಿಗೆ ಹೋಗುವ ಮನಸ್ಸಿತ್ತು. ಹಾಗಾಗಿ ಅವರಿಗೆಂದೇ ಕಾಶಿಗೆ ಹೋಗಲು ಹಾಗೂ ಅಲ್ಲಿ ಉಳಿಯಲು ಟಿಕೆಟ್ ಎಲ್ಲಾ ಬುಕ್ ಮಾಡಿಕೊಂಡು ಸಂತೋಷದಲ್ಲಿದ್ದೆ ಮೊದಲು ಹಣವಿರಲಿಲ್ಲ ನಂತರದಲ್ಲಿ ಹಣ ಹೊಂದಿಸಿ ಟಿಕೆಟ್ ಮಾಡಿದ್ದೆ. ಆದರೆ ಹೋಗುವ ದಿನ ಸಂಜೆ ಅವರು ನಮ್ಮನ್ನೂ ಬಿಟ್ಟು ಬಹುದೂರ ಹೋಗಿದ್ದರು.
ನನ್ನ ಅಕ್ಕ ಅವರು ಇನ್ನಿಲ್ಲ ಎಂದು ಹೇಳಿದಾಗ ಮೊದಲು ನಂಬಲೇ ಇಲ್ಲ. ಇನ್ನು ಈ ಕುರಿತಾಗಿ ಯಾರು ತಮಾಷೆ ಮಾಡುವುದು ಇಲ್ಲ. ಹಾಗಾಗಿ ಅವರು ಕೈ ಮುಗಿದು ನಿಮ್ಮ ಪಾಲಕರ ಆಸೆಯನ್ನು ಕೇಳಿ ಅದಷ್ಟು ಬೇಗನೆ ತೀರಿಸಿ. ಇಲ್ಲವಾದರೆ ಅವರ ಆಸೆಗಳ ತೀರಿಸುವ ಮುನ್ನವೇ ಅವರನ್ನು ಕಳೆದುಕೊಳ್ಳಬಹುದು ಎಂದು ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.