ಕರ್ನಾಟಕದ ಮೇಸ್ತ್ರಿಗೆ ಸಿಕ್ತು ಕೇರಳದ ಲಾಟರಿ, ಸಿ ಕ್ಕಿದು ಎಷ್ಟು ಕೋಟಿ ಗೊ.ತ್ತಾ

 | 
Hgg

ಯಾರ ಸಮಯ ಯಾವಾಗ ಬದಲಾಗುತ್ತದೆಯೋ ಯಾರು ಕೂಡ ಬಲ್ಲವರಿಲ್ಲ. ಹೌದು ಉಪ್ಪಿನಂಗಡಿಯ ಮೇಸ್ತ್ರಿ ಗೆ ಕೇರಳದ ಲಾಟರಿ ಒಲಿದಿದೆ. ಓಣಂ ಬಂಪರ್ ಲಾಟರಿಯನ್ನು ಇಳಂತಿಲ ನಿವಾಸಿ ಚಂದ್ರಯ್ಯ ಅವರು ಗೆದ್ದಿದ್ದಾರೆ. ಸ್ಥಳೀಯವಾಗಿ ಚಂದ್ರಯ್ಯ ಮೇಸ್ತ್ರಿ ಎಂದೇ ಜನಜನಿತರಾಗಿರುವ ಅವರು ಕೇರಳ ಅದೃಷ್ಟ ಲಾಟರಿಯ 50 ಲಕ್ಷ ರೂ ಬಹುಮಾನವನ್ನು ಗೆದ್ದಿದ್ದಾರೆ.

ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅವರು ಲಾಟರಿ ಟಿಕೆಟ್ ಖರೀದಿಸಿದ್ದರು. ಸೆ.20ರಂದು ಓಣಂ ಲಾಟರಿ ಡ್ರಾ ಬಂಪರ್ ಬಹುಮಾನ ಬಂದಿತ್ತು. ಅದು ಚಂದ್ರಯ್ಯ ಅವರಿಗೆ ಒಲಿದಿದೆ. ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಟಿಕೆಟ್ ಖರೀದಿಸಿದ್ದ ಚಂದ್ರಯ್ಯ ಇದೀಗ ಅರ್ಧ ಕೋಟಿಯ ಒಡೆಯರಾಗಿದ್ದಾರೆ. 

500 ರೂಪಾಯಿ ಟಿಕೆಟ್ ಖರೀದಿಸಿದ್ದ ಚಂದ್ರಯ್ಯಗೆ ಬಂಪರ್ 50 ಲಕ್ಷ ಬಹುಮಾನ ಲಭಿಸಿದೆ. ಈ ಹಿಂದೆ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಉಪ್ಪಿನಂಗಡಿಯ ಕೆಂಪಿಮಜಲು ನಿವಾಸಿಗೆ 80 ಲಕ್ಷ ಬಹುಮಾನ ಬಂದಿತ್ತು ಆನಂದ ಟೈಲರ್ ಎಂಬವರು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಈ ಹಿಂದೆ ಬಹುಮಾನ ಗೆದ್ದಿದ್ದರು. 

ಇದರಿಂದಾಗಿ ಬಂದ ಹಣದಲ್ಲಿ ಚಂದದ ಮನೆಯನ್ನು ಕೂಡ ಕಟ್ಟಿಸಿಕೊಂಡಿದ್ದರು. ಇದೀಗ ಇದೀಗ ಎರಡನೇ ಬಾರಿಗೆ ಉಪ್ಪಿನಂಗಡಿಯ ಚಂದ್ರಯ್ಯ ಅವರಿಗೆ ಒಲಿದ ಅದೃಷ್ಟ ಎಂದು ಜನರು ಚಂದ್ರಯ್ಯ ಅವರನ್ನು ಅಭಿನಂದಿಸುತ್ತಿದ್ದಾರೆ. ಒಟ್ಟಿನಲ್ಲಿ ಅಂದುಕೊಳ್ಳದೆ ಇಷ್ಟು ದೊಡ್ಡ ಮೊತ್ತದ ಹಣ ದೊರಕಿರುವುದರಿಂದ ಅವರ ಕುಟುಂಬಸ್ಥರು ಬಹಳ ಆನಂದ ಹೊಂದಿದ್ದಾರೆ.