ನಿಮ್ಮ ಸಾಲ ತೀರಿಸಲು ಉಪಾಯ ಹೇಳಿಕೊಟ್ಟ ಕೊಡಿಶ್ರೀಗಳು, ಒಂದೇ ತಿಂಗಳಲ್ಲಿ ಸಾಲ‌ ಮುಕ್ತ ಜೀವನ

 | 
Ne
ಈ ಬಾರಿ ಚೈತ್ರ ಹುಣ್ಣಿಮೆ ಅಥವಾ ಚೈತ್ರ ಪೂರ್ಣಿಮೆಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಎ. 12ರಂದು ಆಚರಿಸಲಾಗುತ್ತದೆ. ಈ ದಿನ ವಿಷ್ಣು, ಲಕ್ಷ್ಮೀ ದೇವಿ ಮತ್ತು ಚಂದ್ರ ದೇವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ವ್ರತವನ್ನು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದರೆ ದೇವರ ಆಶೀರ್ವಾದ, ಮನಸ್ಸಿಗೆ ಶಾಂತಿ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ.
ಪಂಚಾಂಗದ ಪ್ರಕಾರ ಇಡೀ ವರ್ಷದಲ್ಲಿ 12 ಹುಣ್ಣಿಮೆಗಳನ್ನು ಆಚರಣೆ ಮಾಡಲಾಗುತ್ತದೆ. ಆದರೆ ಚೈತ್ರ ಮಾಸದ ಹುಣ್ಣಿಮೆಯು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಬಾರಿ ಚೈತ್ರ ಹುಣ್ಣಿಮೆ ಅಥವಾ ಚೈತ್ರ ಪೂರ್ಣಿಮೆಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಎ. 12 ರಂದು ಆಚರಿಸಲಾಗುತ್ತದೆ. ಈ ದಿನ ವಿಷ್ಣು, ಲಕ್ಷ್ಮೀ ದೇವಿ ಮತ್ತು ಚಂದ್ರ ದೇವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ವ್ರತವನ್ನು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದರೆ ದೇವರ ಆಶೀರ್ವಾದ, ಮನಸ್ಸಿಗೆ ಶಾಂತಿ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ.
ಆ ದಿನ ತುಳಸಿ ಗಿಡದ ಬುಡದಲ್ಲಿ ಹಾಲಿನ ಅಭಿಷೇಕ ಮಾತ್ರವಲ್ಲ ಗಂದ, ಚಂದನ ಮುಂತಾದವುಗಳ ತುಳಸಿ ಬುಡಕ್ಕೆ ಹಾಕಿ.ಚೈತ್ರ ಹುಣ್ಣಿಮೆಯಂದು, ದೇವರ ಕೋಣೆಯಲ್ಲಿ ಹಳದಿ ಬಟ್ಟೆಯನ್ನು ಇರಿಸಿ ಅದರ ಮೇಲೆ ವಿಷ್ಣು ಮೂರ್ತಿಯನ್ನು ಇಟ್ಟು ಗಂಗಾ ಜಲದಿಂದ, ಬಳಿಕ ಪಂಚಾಮೃತದಿಂದ ಅಭಿಷೇಕ ಮಾಡಿ.ಶುಭ ಮುಹೂರ್ತದಲ್ಲಿ ವಿಷ್ಣುವಿನ ಮಂತ್ರಗಳನ್ನು ಪಠಿಸಿ, ಆರತಿ ಮಾಡಿ.
-ತುಳಸಿ ಎಲೆ ಮತ್ತು ವಿಷ್ಣುವಿಗೆ ಪ್ರೀಯವಾದ ಹೆಸರುಬೇಳೆ ಪಾಯಸವನ್ನು ದೇವರಿಗೆ ನೈವೇದ್ಯ ಮಾಡಿ.ಸಂಜೆ ಮುಹೂರ್ತದಲ್ಲಿ, ಚಂದ್ರ ದೇವನನ್ನು ಪೂಜೆ ಮಾಡಿ. ಹಸಿ ಹಾಲನ್ನು ಚಂದ್ರನಿಗೆ ಅರ್ಘ್ಯವಾಗಿ ಅರ್ಪಿಸಿ ಬಳಿಕ ನೀವು ಉಪವಾಸ ಮಾಡಿದ್ದರೆ ಅದನ್ನು ಮುಕ್ತಾಯಗೊಳಿಸಿ.ಚೈತ್ರ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ಭಕ್ತರು ದಿನವಿಡೀ ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ. 
ಚೈತ್ರ ಪೂರ್ಣಿಮಾ ಅಥವಾ ಹುಣ್ಣಿಮೆಯಂದು ಉಪವಾಸದ ಸಮಯದಲ್ಲಿ, ಭಕ್ತರು ಧಾನ್ಯಗಳು ಮತ್ತು ತರಕಾರಿಗಳನ್ನು ತಿನ್ನದೆಯೇ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಕೆಲವರು ಹಾಲು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.