ಕಿಚ್ಚನಿಗೆ ಆವಾಜ್ ಹಾರಿದ ಲಾಯರ್ ಜಗದೀಶ್, ಒದ್ದು ಓಡಿಸಿದ ಕಿಚ್ಚ ಸುದೀಪ್

 | 
ಹ೭
 ವಾದಗಳಿಗಿಂತ ವಿವಾದಗಳಿಂದಲೇ ಫೇಮಸ್ ಆಗಿರುವ ಸಿಟ್ಟಿನ ವ್ಯಕ್ತಿತ್ವ, ಮಾತುಗಾರ. ಏಕವಚನಗಳು ಲಾಯರ್‌ ಜಗದೀಶ್‌ ಅವರಿಗೆ ತೀರಾ ಸಾಮಾನ್ಯ. ‌ ಬಿಗ್‌ ಬಾಸ್‌ ಆರಂಭವಾಗಿ ಒಂದು ವಾರ ಕಳೆಯುವ ಮೊದಲೇ ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಗಲಾಟೆ ಹೆಚ್ಚಾಗಿದೆ.
ಇಲ್ಲ ಸಲ್ಲದ ಮಾತು. ಸಮ್ಮ ಸುಮ್ಮನೆ ಮಾಡುವ ಆರೋಪ ಮಾಡುವ ಲಾಯರ್‌ ಜಗದೀಶ್‌ ಗಲಾಟೆಗೆ ಬಿಗ್‌ ಬಾಸ್‌ ನ ಇಡೀ ಮಂದಿ ಲಾಯರ್‌ ಜಗದೀಶ್‌ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಮನೆ ಮಂದಿಗಳ ಜೊತೆಗೆ ಗಲಾಟೆ ಮಾಡುತ್ತಾ, ಕಿತ್ತಾಟ ಆಡುತ್ತಲೇ ಇಡೀ ಮನೆ ಮಂದಿಯ ನೆಮ್ಮದಿ ಹಾಳುಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸ್ಪರ್ಧಿಗಳು ಮಾಡುತ್ತಿದ್ದಾರೆ.
ಕಳೆದು ಹತ್ತು ಸೀಸನ್‌ ಗೆ ಹೋಲಿಸಿದರೇ ಈ ಬಾರಿಯ ಸೀಸನ್‌ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲಕಾರಿಯಾಗುತ್ತಿದೆ.ಮನೆಯವರ ಕೆಲವರ ವರ್ತನೆಗೆ ಮನೆ ಮಂದಿಯ ನೆಮ್ಮದಿ ಹಾಳಾಗುತ್ತಿದೆ. ಯಾವುದೇ ವಿಚಾರವಾದ್ರೂ ಸಹ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬರುತ್ತಿದ್ದ ಲಾಯರ್‌ ಜಗದೀಶ್‌ ಅವರು ಹೊರಗೆ ಎಷ್ಟು ರೆಬಲ್‌ ಆಗಿದ್ದರೋ ಅಷ್ಟೇ ಆಂಗ್ರಿಮ್ಯಾನ್‌ ಆಗಿ ಬಿಗ್‌ ಬಾಸ್‌ ಮನೆಯಲ್ಲಿ ನಡೆದುಕೊಳ್ಳುತ್ತಿದ್ದಾರೆ.
ಒಟ್ನಾಲಿ ಬಿಗ್‌ ಬಾಸ್‌ ಸೀಸನ್‌ 11 ರ ಕಾರ್ಯಕ್ರಮ ಶುರುವಾಗಿ 5 ದಿನ ಕಳೆಯುತ್ತಾ ಬಂದಿದ್ದು, ಈ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಮತ್ತು ವಕೀಲ ಜಗದೀಶ್‌ ನಡುವೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ ಹೆಚ್ಚಿದೆ. ಲಾಯರ್‌ ಜಗದೀಶ್‌ ಅವರು ಆಡಿದ ಮಾತಿನ ಕುರಿತು ನಟ ಸುದೀಪ್‌ ಅವರು ವಿವರಣೆಯನ್ನ ಕೇಳಲಾಗಿದ್ದಾರೆ. ಅಲ್ಲದೇ ಸುದೀಪ್‌ ಅವರಿಗೆ ಲಾಯರ್‌ ಜಗದೀಶ್‌ ವಿಚಾರವಾಗಿ ತಲೆ ಕೆಟ್ರೆ ಲಾಯರ್‌ ಲಗೇಜ್‌ ಸಮೇತ ಮನೆಗೆ ಹೋಗಬೇಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಲಾಯರ್ ಮನೆಗೆ ವಾಪಸ್ ಹೋಗ್ತಾರಾ ಕಾದು ನೋಡಬೇಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.