ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನಟ್ ಯಶ್ 50ಕೋಟಿ ದೇಣಿಗೆ, ಸನಾತನ ಧರ್ಮಕ್ಕೆ ಮತ್ತಷ್ಟು ಬೆಂಬಲ
![H](https://powerfullkarunadu.tech/static/c1e/client/98456/uploaded/3fa0518baba402ca8654607e5daf3487.jpg?width=981&height=515&resizemode=4)
ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ವೈಭವದಿಂದ ನಡೆಯಲು ಸಿದ್ಧತೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ ಅಂದಿನ ಎಲ್ಲಾ ಊಟೋಪಚರದ ಖರ್ಚನ್ನು ಟಾಲಿವುಡ್ ನಟ ಪ್ರಭಾಸ್ ವಹಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದಕ್ಕಾಗಿ ಸಲಾರ್ ನಟ ಪ್ರಭಾಸ್ 50 ಕೋಟಿ ರೂಪಾಯಿ ದೇಣಿಗೆ ನೀಡಲಿದ್ದಾರೆ ಎಂದು ವರದಿಗಳು ಹೇಳಿದ್ದವು. ಆದರೆ, ಇದು ನಿಜವಲ್ಲ ಎಂಬ ಸುದ್ದಿ ಇದೀಗ ಬಂದಿದೆ.
ಕಳೆದ ಹಲವು ದಿನಗಳಿಂದ ಪ್ರಭಾಸ್ ಅವರು ಅಯೋಧ್ಯೆ ರಾಮ ಮಂದಿರಕ್ಕೆ 50 ಕೋಟಿ ರೂಪಾಯಿ ದೇಣಿಗೆ ನೀಡುವ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಪ್ರಾಣ ಪ್ರತಿಷ್ಠೆ ದಿನದಂದು ಅಲ್ಲಿ ಎಲ್ಲಾ ಆಹಾರ ಖರ್ಚುಗಳನ್ನು ಇವರೇ ನೋಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಬಹುನಿರೀಕ್ಷಿತ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಹತ್ತಿರದಲ್ಲಿರುವ ಸಮಯದಲ್ಲಿ ವಿವಿಧ ಮಾಧ್ಯಮಗಳು ಈ ಕುರಿತು ನಿಜವೇನೆಂದು ಫ್ಯಾಕ್ಟ್ ಚೆಕ್ ಮಾಡಿವೆ.
ಪ್ರಭಾಸ್ ಅವರು ಸಲಾರ್ ಪಾರ್ಟ್ 1 ಸೀಸ್ಫೈರ್ನ ಸಕ್ಸಸ್ ಮೂಡ್ನಲ್ಲಿದ್ದಾರೆ. ಸಲಾರ್ ಸಿನಿಮಾವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಡಿಸೆಂಬರ್ 22ರಂದು ಬಿಡುಗಡೆಯಾಗಿತ್ತು. ಅಯೋಧ್ಯೆಗೆ ಪ್ರಭಾಸ್ ಅವರು 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸಂಗತಿಯೂ ಈ ಸಮಯದಲ್ಲಿ ಚರ್ಚೆಯಾಗಿತ್ತು. ಆಂಧ್ರಪ್ರದೇಶದ ಎಂಎಲ್ಎ ಚಿರ್ಲಾ ಜಗ್ಗಿರೆಡ್ಡಿ ಅವರು ಇದನ್ನು ಖಚಿತಪಡಿಸಿದ್ದರು. ಪ್ರಭಾಸ್ ಅವರೇ ಅಯೋಧ್ಯೆಯ ಆಹಾರ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದರು.
ಇಂಡಿಯಾಟುಡೇ.ಇನ್ ಪ್ರಕಾರ ಈ ವದಂತಿಗಳು ಸುಳ್ಳು. ಪ್ರಭಾಸ್ ತಂಡದ ಸದಸ್ಯರ ಪ್ರಕಾರ ಈ ರೀತಿ ಯಾವುದೇ ವಿಚಾರಗಳು ಇಲ್ಲ. ಇದು ಸುಳ್ಳು ಸುದ್ದಿ ಎಂದು ಪ್ರಭಾಸ್ ಕಡೆಯುವರು ಹೇಳಿದ್ದಾರೆ. ಪ್ರಭಾಸ್ ಅವರನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆಯೇ? ಈ ವಿಚಾರವೇ ಗೊತ್ತಿಲ್ಲ. ಡಿಸೆಂಬರ್ 22ರಂದು ರಜನಿಕಾಂತ್, ಚಿರಂಜೀವಿ, ರಾಮ್ಚರಣ್, ಧನುಷ್ ಸೇರಿದಂತೆ ಹಲವು ದಕ್ಷಿಣ ಭಾರತದ ಸೆಲೆಬ್ರಿಟಿಗಳಿ ಆಹ್ವಾನ ನೀಡಲಾಗಿದೆ.
ಆದರೆ, ಪ್ರಭಾಸ್ಗೆ ಆಹ್ವಾನ ನೀಡಲಾಗಿದೆಯೇ ಎನ್ನುವುದೇ ಖಚಿತವಾಗಿಲ್ಲ. ಈ ಸಂದರ್ಭದಲ್ಲಿ ಇವರು ದೇಣಿಗೆ ನೀಡಿರುವ ವಿಚಾರದ ಕುರಿತು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದು ಮೂಲಗಳು ತಿಳಿಸಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.