ಮೈಸೂರು ಒಡೆಯನ ಎದುರಲ್ಲೇ ರೊ.ಚ್ಚಿಗೆದ್ದ ಪ್ರತಾಪ್ ಸಿಂಹ; ಮಹಾರಾಜರ ಮುಖ ಕೆಂಡಮಂಡಲ

 | 
Uu

ಮೈಸೂರು ಮಹಾರಾಜರಿಗೆ ಸಾಮಾನ್ಯ ಜನರೊಂದಿಗೆ ಕುಳಿತುಕೊಳ್ಳಲು ಸಾಧ್ಯವಾ?” ಅಂತ ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. ಇದೀಗ ಯದುವೀರ್ ಒಡೆಯರ್ ಖುದ್ದು ಪ್ರತಾಪ್ ಸಿಂಹ ಜೊತೆಯೇ ಕುಳಿತು ಟೀ ಕುಡಿದಿದ್ದಾರೆ.ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲೋಕಸಭಾ ಪ್ರಚಾರದ ಕಣ ರಂಗೇರಿದೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್  ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

 ವಿಶೇಷ ಅಂದ್ರೆ ಮೈಸೂರು ಟಿಕೆಟ್ ವಂಚಿತ, ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಜೊತೆಯೇ ಯದುವೀರ್ ಮತಬೇಟೆಗೆ ಇಳಿದಿದ್ದಾರೆ. ಯದುವೀರ್‌ಗೆ ಟಿಕೆಟ್ ಸಿಗುತ್ತದೆ ಎನ್ನುತ್ತಿರುವಾಗಲೇ ಅವರಿಗೆ ಸ್ವಾಗತ ಕೋರಿದ್ದ ಪ್ರತಾಪ್ ಸಿಂಹ, ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಮೈಸೂರು ಮಹಾರಾಜರಿಗೆ ಸಾಮಾನ್ಯ ಜನರೊಂದಿಗೆ ಕುಳಿತುಕೊಳ್ಳಲು ಸಾಧ್ಯವಾ ಅಂತ ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. ಇದೀಗ ಮಹಾರಾಜರು ಪ್ರತಾಪ್ ಸಿಂಹ ಅವರ ಜೊತೆಯೇ ಕುಳಿತು ಚಹಾ ಕುಡಿದು ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ.

ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಭರ್ಜರಿ ಪ್ರಚಾರಕ್ಕೆ ಇಳಿದಿದ್ದಾರೆ. ಮೈಸೂರು ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಜೊತೆ ಪ್ರಚಾರಕ್ಕೆ ಧುಮುಕಿದ್ದಾರೆ.ಮೈಸೂರು ಕೊಡಗು ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ವೇಳೆ ಯದುವೀರ್ ಒಡೆಯರ್‌ ಸ್ವಾಗತಿಸುತ್ತಲೇ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದರು. ಸಾಲು ಸಾಲು ಪ್ರಶ್ನೆ ಕೇಳಿದ್ದರು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಯದುವೀರ್ ತಮ್ಮ ಕೃತಿಯ ಮೂಲಕವೇ ಉತ್ತರಿಸುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡುತ್ತಿದೆ.

ಜನ ಸಾಮಾನ್ಯರ ಜೊತೆ ಬೆರೆಯಲು ಸಾಧ್ಯವಾ ಅಂತ ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. ಇದೀಗ ಪ್ರತಾಪ್ ಸಿಂಹ ಜೊತೆಯೇ ಟೀ ಕುಡಿದು ಮೈಸೂರು ಮಹಾರಾಜ ಸಂದೇಶ ರವಾನಿಸಿದ್ದಾರೆ. ಹೋಟೆಲ್ ಒಂದರ ಹೊರ ಭಾಗದಲ್ಲಿ ಕುಳಿತು ಇಬ್ಬರೂ ಟೀ ಕುಡಿದಿದ್ದಾರೆ. ಇನ್ನು ಪ್ರತಾಪ್ ಸಿಂಹ ಹಾಗೂ ಯದುವೀರ್ ಒಡೆಯರ್ ಜಂಟಿಯಾಗಿ ಮಾಧ್ಯಮ ಸಂವಾದದಲ್ಲಿ ಭಾಗಿಯಾದ್ರು. ನಾನು ಸಾಮಾನ್ಯನಾಗಿಯೇ ಇದ್ದುಕೊಂಡು ಕ್ಷೇತ್ರದ ಜನರಿಗಾಗಿ ದುಡಿಯುವೆ ಎಂದರು. ನೀವು ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರಗೆ ಬರುತ್ತೇನೆ ಅಂತ ಜನರಲ್ಲಿ ನಂಬಿಕೆ ಮೂಡಿಸೋ ಯತ್ನ ಮಾಡಿದ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.