ಅಂಶುಮಾನ್ ಸಿಂಗ್ ಕುಟುಂಬದಲ್ಲಿ ಒಡಕು; ಸರ್ಕಾರ ಕೊಟ್ಟ ಆಸ್ತಿಯನ್ನು ಅತ್ತೆಗೆ ನೀಡದೆ ತನ್ನ ಬಳಿಯೇ ಇರಿಸಿಕೊಂಡ ಸೊಸೆ

ನಿನ್ನೆ ಅಷ್ಟೇ ಯೋಧನ ಪತ್ನಿ ಸ್ಮೃತಿ ಸಿಂಗ್ ಮಾತು ವೈರಲ್ ಅಗಿ ಎಲ್ಲರ ಕಣ್ಣು ಒದ್ದೆಯಾಗಿಸಿತ್ತು. 2023ರ ಜುಲೈನಲ್ಲಿ ಸಿಯಾಚಿನ್ ಗ್ಲೇಸಿಯರ್ನಲ್ಲಿನ ಭಾರತೀಯ ಸೇನೆಯ ಶಿಬಿರದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಸೈನಿಕರನ್ನು ರಕ್ಷಿಸಿ ತಮ್ಮ ಪ್ರಾಣ ತ್ಯಾಗ ಮಾಡಿದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು, ಸೊಸೆ ಸ್ಮೃತಿ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹುತಾತ್ಮ ಪತಿಗೆ ಪ್ರದಾನ ಮಾಡಲಾದ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ಸ್ವೀಕರಿಸಿದ್ದ ಸ್ಮೃತಿ, ಆ ಪ್ರಶಸ್ತಿಯ ಜತೆಗೆ ಮಗನ ಫೋಟೋ ಆಲ್ಬಮ್, ಬಟ್ಟೆಗಳು ಹಾಗೂ ಇತರೆ ಸ್ಮರಣಿಕೆಗಳನ್ನು ಗುರುದಾಸ್ಪುರದಲ್ಲಿನ ತನ್ನ ಮನೆಗೆ ಸಾಗಿಸಿದ್ದಾರೆ ಎಂದು ಅಂಶುಮಾನ್ ಪೋಷಕರು ಹೇಳಿದ್ದಾರೆ.
ಸೊಸೆ ಸ್ಮೃತಿ ಸಿಂಗ್, ತಮ್ಮ ಮಗನ ಅಧಿಕೃತ ದಾಖಲೆಗಳಲ್ಲಿ ನಮೂದಾಗಿರುವ ಕಾಯಂ ವಿಳಾಸವನ್ನು ಲಖನೌದಿಂದ ಗುರುದಾಸಪುರಕ್ಕೆ ಬದಲಿಸಿದ್ದಾರೆ. ಈ ಮೂಲಕ ತಮ್ಮ ಮಗನಿಗೆ ಸಂಬಂಧಿಸಿದ ಎಲ್ಲ ಪತ್ರ ವ್ಯವಹಾರಗಳೂ ತನ್ನ ವಿಳಾಸಕ್ಕೇ ಬರುವಂತೆ ಮಾಡಿಕೊಂಡಿದ್ದಾರೆ ಎಂದು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಂದೆ ರವಿ ಪ್ರತಾಪ್ ಸಿಂಗ್ ದೂರಿದ್ದಾರೆ.
ಸರ್ಕಾರ ಒದಗಿಸುವ ನೆರವಿನ ಮೊತ್ತ ಹಾಗೂ ಇತರೆ ಸವಲತ್ತುಗಳು, ಹುತಾತ್ಮನ ಪತ್ನಿ ಜತೆಗೆ ಪೋಷಕರೂ ಕೂಡ ಅರ್ಹರಾಗುವಂತೆ ನಿಯಮಾವಳಿಗಳಲ್ಲಿ ತಿದ್ದುಪಡಿ ತರಬೇಕು. ಅದರ ಮಾನದಂಡ ಸಮರ್ಪಕವಾಗಿಲ್ಲ. ಅಂಶುಮಾನ್ನ ಪತ್ನಿ ನಮ್ಮ ಜತೆ ವಾಸಿಸುತ್ತಿಲ್ಲ. ಅವರ ಮದುವೆಯಾಗಿ ಐದು ತಿಂಗಳಾಗಿತ್ತಷ್ಟೆ, ಅವರಿಗೆ ಮಕ್ಕಳೂ ಇಲ್ಲ ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.