ಬಿಗ್ಬಾಸ್ ಗೆ ವಾನಿ೯ಂಗ್ ಕೊಟ್ಟ ರೂಪೇಶ್ ರಾಜಣ್ಣ, ಅವಮಾನ ತಾಳಲಾರದೆ ಹೊರಬಂದ ಕಿಚ್ಚ ಸುದೀಪ
Oct 15, 2024, 10:10 IST
|

ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದ 2ನೇ ಸೂಪರ್ ಸಂಡೆ ವಿತ್ ಸುದೀಪ ಸಂಚಿಕೆ ಪ್ರಸಾರವಾಗುತ್ತಿರುವಾಗಲೇ ತಮ್ಮೆಲ್ಲಾ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಬೇಸರದ ಸುದ್ದಿ ನೀಡಿದರು. ‘’ಬಿಗ್ ಬಾಸ್’ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್’’ ಎಂದು ಸುದೀಪ್ ಘೋಷಿಸಿಬಿಟ್ಟರು. ದಿಢೀರ್ ಅಂತ ಸುದೀಪ್ ಈ ನಿರ್ಧಾರ ಕೈಗೊಂಡಿದ್ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ.
ಹೀಗಿರುವಾಗಲೇ, ದಿಢೀರ್ ಅಂತ ಫೇಸ್ಬುಕ್ ಲೈವ್ಗೆ ಬಂದ ರೂಪೇಶ್ ರಾಜಣ್ಣ.. ಸುದೀಪ್ ನಿರ್ಧಾರದ ಹಿಂದಿನ ಅಸಲಿ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.ಸುದೀಪ್ ಸರ್ ನಿನ್ನೆ ಟ್ವೀಟ್ ಮಾಡಿದ್ದರು. ಅದಾದ್ಮೇಲೆ ಚಕ್ರವರ್ತಿ ಚಂದ್ರಚೂಡ್ ಅವರು ಒಂದು ಪೋಸ್ಟ್ ಹಾಕಿದ್ದರು. ಅದನ್ನ ನೋಡಿ ನಾನು ಅವರಿಗೆ ಕಾಲ್ ಮಾಡಿದೆ. ಆಗ ಒಂದಷ್ಟು ಬೆಳವಣಿಗೆಗಳ ಬಗ್ಗೆ ಅವರು ನನಗೆ ತಿಳಿಸಿದ್ದಾರೆ.
ವಿಷಯ ಇಷ್ಟೇ - ಶೋನಲ್ಲಿ ಕನ್ನಡ ಬಳಕೆ ಹೆಚ್ಚು ಆಗ್ತಿಲ್ಲ. ಹಿಂದೆ ನಾವು ಇದ್ದಾಗ ಇಂಗ್ಲೀಷ್ನಲ್ಲಿ ಮಾತನಾಡಿದರೆ, ಕನ್ನಡ ಹಾಡು ಹಾಕುತ್ತಿದ್ದರು. ಆದರೆ, ಕಳೆದ ಸೀಸನ್ನಿಂದ ಅದು ಆಗ್ತಿಲ್ಲ. ಕಳೆದ ವಾರದ ವೀಕೆಂಡ್ನಲ್ಲಿ ನರಕವಾಸಿಗಳು ನಿಂತಿರುತ್ತಾರೆ. ನಿಲ್ಲಿಸಬೇಡಿ, ಚೆನ್ನಾಗಿ ಕಾಣಿಸಲ್ಲ ಅಂತ ಹೇಳಿರ್ತಾರೆ.
ನರಕ-ಸ್ವರ್ಗ ಕಾನ್ಸೆಪ್ಟ್ ಬಗ್ಗೆ ಸ್ವಲ್ಪ ಮಟ್ಟಿನ ಅಸಮಾಧಾನ ಇರುತ್ತದೆ. ಪದೇ ಪದೇ ಲೀಗಲ್ ನೋಟೀಸ್ ಬಂತು. ಇದಕ್ಕೆ ಸಮರ್ಪಕವಾಗಿ ಉತ್ತರ ಕೊಡೋಕೆ ಆಗ್ತಿಲ್ಲ. ಇವೆಲ್ಲಾ ಹೇಗಾಯ್ತು ಅಂತ ಅಸಮಾಧಾನಗೊಂಡಿದ್ದಾರೆ.
ಪ್ರೆಸ್ಮೀಟ್ ವೇಳೆ ಆನ್ಲೈನ್ ಗೇಮಿಂಗ್ ಅವರು ಸ್ಪಾನ್ಸರ್ ಆಗಿರುವ ಬಗ್ಗೆ ಪ್ರಶ್ನೆ ಬರುತ್ತದೆ. ಅದನ್ನ ಪ್ರಮೋಟ್ ಮಾಡೋದಕ್ಕೆ ಅವರಿಗೆ ಆಸಕ್ತಿ ಇರೋದಿಲ್ಲ. ಅದನ್ನ ಅವಾಯ್ಡ್ ಮಾಡೋದಕ್ಕೆ ಜನಪರ ಕಾಳಜಿಯಿಂದ ಹೇಳಿರುತ್ತಾರೆ. ಅದಕ್ಕೆ ಅಷ್ಟಾಗಿ ಸ್ಪಂದನೆ ಸಿಗೋದಿಲ್ಲ.
ಈ ಬಾರಿಯ ಸ್ಪರ್ಧಿಗಳಿಗೆ ತುಂಬಾ ಕನ್ಫ್ಯೂಶನ್ ಆಗುತ್ತಿದೆ. ಬರೆದಿರುವ ಪಾಯಿಂಟ್ಸ್ ಸರಿಯಾಗಿ ಇಲ್ಲ. ಸರಿಯಾಗಿ ಕಮ್ಯೂನಿಕೇಟ್ ಮಾಡದೆ ಗೊಂದಲ ಆಗುತ್ತಿದೆ. ಈ ತರಹದ ಬೆಳವಣಿಗೆಯಿಂದ ಅಸಮಾಧಾನಗೊಂಡು ಬಿಡಲು ನಿರ್ಧಾರ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.