ಸೀರಿಯಲ್ ನಟ ಅಶೋಕ್‌ ಹೆಗ್ಡೆ ಮಗು ಮಾಡೋಕೆ ಹಿಂದೇಟು, ಕಾರಣ ಕೊಟ್ಟ ನಟ

 | 
Ja
ನಟ ಅಶೋಕ್‌ ಹೆಗಡೆ ಹಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಸಿಟ್ಟೆಂಟ್‌ ಡೈರೆಕ್ಟರ್‌ ಆಗಿ ಸಿನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟ ಅಶೋಕ್‌ ಹೆಗಡೆ, ತಮ್ಮ ಕರಿಯರ್‌ ಮತ್ತು ಪರ್ಸ್‌ನಲ್‌ ಲೈಫ್‌ನಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡು ಎಲ್ಲವನ್ನೂ ದಾಟಿ ನಿಂತವರು. 1995ರಲ್ಲಿ ಅನ್ಷು ಹೆಗಡೆ ಅವರನ್ನು ಅಶೋಕ್‌ ಅವರು ಮದುವೆಯಾಗಿದ್ದರು. 
ಹಲವು ಅವಕಾಶಗಳ ನಂತರ ಕುಲವಧು ಧಾರಾವಾಹಿಯಲ್ಲಿ ಅಪ್ಪನ ಪಾತ್ರದಲ್ಲಿ ನಟಿಸಿದ್ದ ಅಶೋಕ್‌ ಅವರಿಗೆ ಆ ಪಾತ್ರ ದೊಡ್ಡ ಖ್ಯಾತಿ ತಂದು ಕೊಟ್ಟಿತು. ಸದ್ಯ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಅಶೋಕ್‌ ನಟಿಸುತ್ತಿದ್ದಾರೆ. ಈ ನಡುವೆ ತಮ್ಮ ಜೀವನದ ಕಹಿ ಘಟನೆ ನೆನೆದು ಕಣ್ಣೀರಾಗಿದ್ದಾರೆ.ನಟ ಅಶೋಕ್‌ ಹೆಗಡೆ ಹಾಗೂ ಅಂಶು ಹೆಗಡೆ ಅವರಿಗೆ ಮಕ್ಕಳಿಲ್ವಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿತ್ತು. ಈ ಬಗ್ಗೆ ಮಾತನಾಡಿದ ಅಶೋಕ್‌ ಅವರು, ನಂಗೆ ಎರಡು ಮಕ್ಕಳಿದ್ದರು. 
ಪ್ರೆಗ್ನೆನ್ಸಿ ಸಮಯದಲ್ಲಿ ನನ್ನ ಹೆಂಡತಿಗೆ ಶುಗರ್‌ ಬಂದುಬಿಟ್ಟಿತ್ತು. ಎರಡು ಮಕ್ಕಳು ಹಾಗೆ ಸತ್ತವು. ನನ್ನ ಹೆಂಡತಿಗೆ ಇದ್ದ ಶುಗರ್‌ ಮಗುವಿಗೆ ಅಟ್ಯಾಕ್‌ ಆಗಿ, ತೀರಿಕೊಂಡಿತು. ಇದೇ ಹರಿಶ್ಚಂದ್ರ ಘಾಟಲ್ಲಿ ಮಕ್ಕಳು ಮಲಗಿದ್ದಾರೆ. ಒಂದು ಮಗು ಆಯ್ತು, ಅದು ಹಾಗೆ ಹೋಯ್ತು. ಇನ್ನೊಂದು ಮಗು ಆಯ್ತು ಅದು ಹಾಗೆ ಹೋಯ್ತು. ಮತ್ತೆ ಮಗು ಮಾಡಿಕೊಳ್ಳೋದು ಬೇಡ ಎಂದು ನಾನು ನನ್ನ ಹೆಂಡತಿ ನಿರ್ಧರಿಸಿದ್ದೇವು ಎಂದು ತಮ್ಮ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ ನಟ ಅಶೋಕ್‌ ಹೆಗಡೆ.
ನಾನು ಹೊರಗಡೆ ಶೂಟಿಂಗ್‌ ಹೋದ್ರೆ ಅಲ್ಲಿ ಬ್ಯುಸಿಯಾಗಿ ಬಿಡ್ತೀನಿ. ಅವಳೊಬ್ಬಳೆ ಮನೆಯಲ್ಲಿ ಇರೋದು. ಮಾನಸಿಕ ಆಗಿಬಿಡುತ್ತೆ, ಮತ್ತೊಂದು ಮಗು ಆಗಿ ಹೀಗೆ ಆಗಿಬಿಟ್ರೆ ಅನ್ನೋ ಭಯ. ಅದಕ್ಕೆ ನಾವಿಬ್ಬರೂ ಕೂತುಕೊಂಡು ಮಕ್ಕಳೇ ಬೇಡ ಅನ್ನೋ ನಿರ್ಧಾರಕ್ಕೆ ಬಂದ್ವಿ. ನನಗೆ ನೀನು, ನಿನಗೆ ನಾನು ಅಂತ ನಿರ್ಧರಿಸಿದ್ದೇವು. ಇವತ್ತಿಗೂ ಅವಳು ನನ್ನನ್ನು ದದ್ದ ಅಂತ ಕರೆಯುತ್ತಾಳೆ. 
ನಾನು ಅವಳನ್ನು ದದ್ದ ಅಂತ ಕರೆಯುತ್ತೀನಿ. ಅವಳು ಯಾವುದೇ ನಿರೀಕ್ಷೆಯನ್ನಿಟ್ಟುಕೊಂಡು ನನ್ನನ್ನು ಪ್ರೀತಿಸಿಲ್ಲ. ಪ್ರೀತಿ ಒಂದನ್ನು ಮಾತ್ರ ಇಟ್ಟುಕೊಂಡು ಪ್ರೀತಿಸಿದ್ಲು ಅಷ್ಟೇ. ಅದಕ್ಕೆ ಇವತ್ತಿನವರೆಗೂ ನಾನು ಮತ್ತು ನನ್ನ ಹೆಂಡತಿ ಗಟ್ಟಿಯಾಗಿದ್ದೇವೆ ಎಂದು ತಮ್ಮ ಮಡದಿ ಬಗ್ಗೆ ಅಶೋಕ್‌ ಹೆಗಡೆ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.