ಶ್ರೀರಸ್ತು ಶುಭಮಸ್ತು ಸೀರಿಯಲ್ ಕೊನೆಯ ದಿನದ ಶೂಟಿಂಗ್, ಸುಧರಾಣಿ ಕೂಗು

 | 
Njn
ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ.ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ತನ್ನ ಅಕ್ಕನ ಸಾವಿಗೆ ಮಾಧವ್‌ನೇ ಕಾರಣ ಎನ್ನುವುದು ಶಾರ್ವರಿ ಆರೋಪ. ಆದರೆ ತನ್ನ ಪತಿ ಹೀಗೆ ಮೋಸ ಮಾಡಲು ಸಾಧ್ಯವಿಲ್ಲ, ಅದರಲ್ಲೇನೋ ಆಗಬಾರದ್ದು ಆಗಿದೆ ಎಂದು ನಂಬಿದವಳು ತುಳಸಿ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. 
ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಈಗ ಇದೇ ವಿಷಯದ ಬಗ್ಗೆ ಈ ಇಬ್ಬರ ನಡುವೆ ಮಾತುಕತೆ ಆಗಿದೆ.ಆದರೆ ಈ ಮಾತುಕತೆ ಆಗುತ್ತಿದ್ದಂತೆಯೇ ಒಂದೇ ದಿನದಲ್ಲಿ ಸೀರಿಯಲ್‌ ಮುಗಿಸಿಬಿಡುವ ನಿರ್ದೇಶನ ಮಾಡುತ್ತಿದ್ದಾರೆ ನೆಟ್ಟಿಗರು! ಅಷ್ಟಕ್ಕೂ, ಒಂದೆರಡು ಗಂಟೆಗಳಲ್ಲಿ ಹೇಳುವ ಕಥೆಯನ್ನು ಐದಾರು ವರ್ಷ ಎಳೆಯುವುದಕ್ಕೇ ಧಾರಾವಾಹಿ ಎಂದು ಹೇಳುವುದು ಎನ್ನುವುದು ಹೊಸ ವಿಷಯವೇನಲ್ಲ.
 ಇರುವ ಚಿಕ್ಕಕಥೆಯನ್ನು ಟಿಆರ್‍‌ಪಿ ಹೆಚ್ಚಾಗುತ್ತಿದ್ದಂತೆಯೇ ರಬ್ಬರ್‍‌ನಂತೆ ಎಳೆದೂ ಎಳೆದೂ ಬೇಕಾಗಿರುವ, ಬೇಡದ್ದ ಎಲ್ಲಾ ಸನ್ನಿವೇಶಗಳನ್ನು ಆಕಥೆಯೊಳಗೆ ತುರುಕಿ, ತಮಗೆ ಬೇಕಿರುವ ಪಾತ್ರಗಳನ್ನು ಅಚಾನಕ್‌ ಸೃಷ್ಟಿ ಮಾಡುವ ತಾಕತ್ತು ನಿರ್ದೇಶಕರಿಗೆ ಇರುತ್ತದೆ. ಅದನ್ನು ಬೈಯುತ್ತಲೇ ಪ್ರತಿನಿತ್ಯವೂ ಸೀರಿಯಲ್‌ ನೋಡುವ ದೊಡ್ಡ ವರ್ಗವೇ ಇದೆ ಎನ್ನುವುದೂ ಸುಳ್ಳಲ್ಲ. ಆದರೆ ಕಥೆಗಳು ಹೀಗಿರಬೇಕಿತ್ತು. ಬೇಗನೇ ಮುಗಿಸಬಹುದಿತ್ತು ಎಂದೆಲ್ಲಾ ಕಮೆಂಟ್‌ಗಳೂ ಇದೇ ವೇಳೆ ನಡೆಯುತ್ತಲೇ ಇರುತ್ತವೆ.
ಇದೊಂದೇ ಸೀರಿಯಲ್‌ ಅಲ್ಲ, ಸಾಮಾನ್ಯವಾಗಿ ಎಲ್ಲಾ ಸೀರಿಯಲ್‌ಗಳಲ್ಲಿಯೂ ಹೀಗೆ ಅಲ್ವಾ? ವಿಲನ್‌ ಮತ್ತು ನಾಯಕಿ ನಡುವೆ ಸಂಭಾಷಣೆ ನಡೆಯುತ್ತದೆ. ಇಬ್ಬರ ಕೈಯಲ್ಲಿಯೂ ಮೊಬೈಲ್‌ ಫೋನ್‌ ಇರುತ್ತದೆ. ಮುಂದೆ ಇರುವವರ ಅರಿವಿಗೆ ಬಾರದೇ ರೆಕಾರ್ಡ್ ಮಾಡುವುದು ಈಗೇನೂ ಕಷ್ಟವೇ ಅಲ್ಲ. ಹಾಗಿದ್ದ ಮೇಲೆ ರೆಕಾರ್ಡ್ ಮಾಡದೇ ಯಾಕೆ ಸೀರಿಯಲ್‌ ಎಳೆಯುತ್ತೀರಾ ಎಂಬ ಪ್ರಶ್ನೆ ಮಾಡುವುದು ಕಾಮನ್‌ ಆಗಿದೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿಯೂ ಹಾಗೆಯೇ ಮಾಡಿ ಒಂದೆರಡು ದಿನಗಳಲ್ಲಿ ಸೀರಿಯಲ್‌ ಮುಗಿಸಿ ಎನ್ನುತ್ತಿದ್ದಾರೆ ನೆಟ್ಟಿಗರು! ಆದರೆ ಅದು ಹಾಗಾಗಲ್ಲ ಎನ್ನುವುದು ಅವರಿಗೂ ಗೊತ್ತು, ನಿರ್ದೇಶಕರಿಗೂ ಗೊತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.