'ಸುದೀಪ್ ಸರ್ ನಂದು ತಪ್ಪಾಯ್ತು ದಯವಿಟ್ಟು ಕ್ಷಮಿಸಿ' ಕೈಮುಗಿದು ಬೇಡಿಕೊಂಡ ರಕ್ಷಕ್ ಬುಲೆಟ್

 | 
Hd

ಕಿಚ್ಚ ಸುದೀಪ್​ ಅವರು ಮೊದಲ ಸೀಸನ್​ನಿಂದ 10ನೇ ಸೀಸನ್​ನ ತನಕ ಬಿಗ್​ ಬಾಸ್​  ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಅನೇಕ ಬಗೆಯ ಸ್ಪರ್ಧಿಗಳನ್ನು ಅವರು ನೋಡಿದ್ದಾರೆ. ಕೆಲವರು ಬಿಗ್​ ಬಾಸ್​ ಮನೆ ಒಳಗೆ ಇದ್ದಾಗ ಬಹಳ ವಿನಮ್ರವಾಗಿ ನಡೆದುಕೊಳ್ಳುತ್ತಾರೆ. ದೊಡ್ಮನೆಯಿಂದ ಹೊರಗೆ ಹೋದ ಬಳಿಕ ಬಿಗ್​ ಬಾಸ್​ ಶೋ ವಿರುದ್ಧವೇ ಮಾತನಾಡುತ್ತಾರೆ. ಅಂಥ ವರ್ತನೆಯನ್ನು ಸುದೀಪ್​ ಅವರು ಎಂದಿಗೂ ಸಹಿಸುವುದಿಲ್ಲ.

ಈಗ ಅವರು ರಕ್ಷಕ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್ 10 ಶೋನಲ್ಲಿ ಸ್ಪರ್ಧಿಯಾಗಿದ್ದು, ನಂತರ ಎಲಿಮಿನೇಟ್​ ಆದ ರಕ್ಷಕ್​  ಅವರು ಆಡಿದ ಕೆಲವು ಮಾತುಗಳನ್ನು ಸುದೀಪ್​  ಅವರು ತೀವ್ರವಾಗಿ ಖಂಡಿಸಿದ್ದಾರೆ. ಜನವರಿ 20ರ ಸಂಚಿಕೆಯಲ್ಲಿ ಅವರು ಒಂದು ಎಚ್ಚರಿಕೆ ನೀಡಿದ್ದಾರೆ.

ರಕ್ಷಕ್​ ಅವರು ಬುಲೆಟ್​ ಪ್ರಕಾಶ್​ ಮಗ ತಾನೇ? ಅವರಿಗೆ ವಯಸ್ಸು ಎಷ್ಟಿರಬಹುದು? 11 ಅಥವಾ 12? ಇಪ್ಪತ್ತೆರಡಾ? ನಿಮ್ಮ ತಂದೆ ಬಹಳ ಹೆಸರು ಮಾಡಿದ್ದ ಕಲಾವಿದ. ಅವರ ಮಗನಾಗಿದ್ದಕ್ಕೆ ಸಮಾಜ ನಿಮಗೆ ಕೊಡುವ ಗೌರವವನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಬಿಗ್​ ಬಾಸ್ ಮನೆಯಿಂದ ಹೊರಗೆ ಹೋದ ಬಳಿಕ ನಿಮ್ಮ ಸಂದರ್ಶನ, ಬಿಗ್​ ಬಾಸ್​ ಬಗ್ಗೆ ನೀವು ಕೊಟ್ಟ ಹೇಳಿಕೆ.. ಎಲ್ಲವೂ ತಿಳಿದಿದೆ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಎಂದು ಕಿಚ್ಚ ಸುದೀಪ್​ ಅವರು ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಿಂದ ರಕ್ಷಕ್​ ಬುಲೆಟ್​ ಅವರು ಹೊರಬಂದ ಬಳಿಕ ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದರು. ಆಗ ಅವರು ಸುದೀಪ್​ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆಗಳನ್ನು ನೀಡಿದ್ದರು. ಅದಕ್ಕೆ ಸುದೀಪ್​ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಯ್ತು. ಬಳಿಕ ರಕ್ಷಕ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಕ್ಷಮೆಯನ್ನೂ ಕೇಳಿದರು. ಅಷ್ಟಕ್ಕೇ ರಕ್ಷಕ್​ ಸುಮ್ಮನಾಗಲಿಲ್ಲ. 

ಅತಿಥಿಯಾಗಿ ಬಿಗ್​ ಬಾಸ್​ ಮನೆಯೊಳಗೆ ಬಂದಾಗ ಡ್ರೋನ್​ ಪ್ರತಾಪ್​ರನ್ನು ಟಾರ್ಗೆಟ್​ ಮಾಡಿ ಇಲ್ಲಸಲ್ಲದ ಮಾತನಾಡಿದರು. ಅದು ಸುದೀಪ್​ ಅವರಿಗೆ ಸರಿ ಎನಿಸಿಲ್ಲ. ಹಾಗಾಗಿ ಸುದೀಪ್​ ಅವರು ಖಡಕ್​ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.