ಕೊಟ್ಟ ಸಾಲವನ್ನು ಕೇಳಲು ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ; ಅಲ್ಲಿದ್ದ ಆಂ.ಟಿ ಮಾಡಿದ್ದೇನು ‌ಗೊ.ತಾ

 | 
Fhj

ನಿಮ್ಮ ಕೈಯಲ್ಲಿ ಹಣವಿದ್ದರೆ ಮಾತ್ರ ಈ ಜಗತ್ತು ಸುಂದರವಾಗಿ ಕಾಣುತ್ತದೆ. ಇಲ್ಲವಾದಲ್ಲಿ ಬದುಕು ಕಟ್ಟಿಕೊಳ್ಳಲು ಮಾಡುವ ಸಾಲಗಳು ಬದುಕನ್ನೇ ಮುಳುಗಿಸಿ ಬಿಡುತ್ತದೆ.ಹೌದು ಕಣ್ರೀ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾಡಿದ ಸಾಲವೇ ಉರುಳಾಗಿ ಬಿಡುತ್ತದೆ. ಇತ್ತೀಚಿಗೆ ಬ್ಯಾಂಕ್ ಗಳಲ್ಲಿ ಸಾಲ ಮಾಡುವವರು ಒಂದೆಡೆ ಆಯಪ್ ಮೂಲಕ ಸಾಲ ಪಡೆಯುವವರು ಇನ್ನೊಂದೆಡೆ.

ಈದೀಗ ಸಾಲದ ಹೊರೆಗೆ ಅಂಜಿ, ಖಾಸಗಿ ಬ್ಯಾಂಕ್‌ ಸಿಬ್ಬಂದಿಯ ತಾಕೀತಿಗೆ ಅಂಜಿ ಇಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬರು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಜೆ‌ಪಿ ನಗರದ ಮೂರನೇ ಹಂತದಲ್ಲಿ ಈ ದುರಂತ ಸಂಭವಿಸಿದ್ದು, ಖಾಸಗಿ ಬ್ಯಾಂಕ್‌ ಸಾಲದ ಹೊರೆಗೆ ಮೂವರೂ ಬಲಿಯಾಗಿದ್ದಾರೆ.ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದವರಾದ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು. 

ಮೃತಪಟ್ಟ ಮಹಿಳೆ ಸುಕನ್ಯ. ನಿಖಿತ್, ನಿಶ್ಚಿತ ಮೃತ ಪಟ್ಟಿರುವ ಅವಳಿ ಮಕ್ಕಳು. ನಿಖಿತ್, ನಿಶ್ಚಿತ  ಕಾಲೇಜಿಗೆ ಹೋಗುತ್ತಿದ್ದರು ಎನ್ನಲಾಗುತ್ತಿದೆ.ಇನ್ನು ಸ್ವಲ್ಪ ದಿನ ಕಾದಿದ್ದರೆ ಮಕ್ಕಳು ದುಡಿದು ಸಾಲದ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದರು. ಆದರೆ ಅದ್ಯಾವುದಕ್ಕೂ ಕಾಯದೇ ಆತುರವಾಗಿ ಸುಕನ್ಯಾ ಈ ನಿರ್ಧಾರ ಕೈಗೊಂಡಿದ್ದಾರೆ.

ನಿನ್ನೆ ಸಂಜೆ ಬ್ಯಾಂಕ್ ಸಿಬ್ಬಂದಿಗಳು ಮನೆಗೆ ಆಗಮಿಸಿ ಸಾಲದ ಹಣ ವಾಪಸು ಕೇಳಿದ್ದರು. ಗಂಡ ಮನೆಯಲ್ಲಿರದ ವೇಳೆ ಬ್ಯಾಂಕ್ ಸಿಬ್ಬಂದಿಗಳು ಬಂದಿದ್ದರು ಎಂದು ಗೊತ್ತಾಗಿದೆ.ಇದರಿಂದ ನೊಂದ ಸುಕನ್ಯ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಜೆ‌ಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.