ಅಭಿಮಾನಿಗಳ ಬಳಿ ಕೈಮುಗಿದು ತಪಾಯ್ತು ಎಂದ ವೈಷ್ಣವಿ ಗೌಡ; ಇನ್ನು ಮುಂದೆ ಆ ಕೆಲಸ ಮಾಡಲ್ಲ
ಇಂದು ಸೀರಿಯಲ್ಗಳು ಬರೀ ಸೀರಿಯಲ್ ಆಗಿ ಉಳಿದಿಲ್ಲ ಬದಲಾಗಿ ಫ್ಯಾಶನ್ ಬಟ್ಟೆಗಳ ಬಗ್ಗೆ ಮಾಹಿತಿ ನೀಡುವ ಸಂಪೂರ್ಣ ಮನರಂಜನೆಯ ಮೂಲವಾಗಿದೆ. ಜನಮಿಡಿತವೂ ಆಗಿಬಿಟ್ಟಿದೆ. ನಮ್ಮ ನೆಚ್ಚಿನ ತಾರೆಯರು ಹೀಗೆಯೇ ಇರಬೇಕು ಎಂದು ದೊಡ್ಡ ಪ್ರೇಕ್ಷಕ ವರ್ಗವೇ ಬಯಸುತ್ತದೆ. ಅವರು ತೊಡುವ ಉಡುಗೆ ತೊಡುಗೆಗಳಿಂದ ಎಲ್ಲವೂ ಹೀಗೆಯೇ ಇರಬೇಕು ಎಂದು ಅಭಿಮಾನಿಗಳು ಬಯಸುವುದು ಸಹಜ.
ಇದೇ ಕಾರಣಕ್ಕೆ ಹೀರೋ- ಹೀರೋಯಿನ್ಗಳಿಗೆ ಹೊರಗಡೆ ಹೋದರೂ ಅಷ್ಟೇ ಬೆಲೆ ಸಿಗುತ್ತದೆ, ವಿಲನ್ಗಳಿಗೆ ಹೊರಗಡೆ ಕೂಡ ಛೀಮಾರಿ ಹಾಕುವುದು ಇದೆ. ಅಷ್ಟರ ಮಟ್ಟಿಗೆ ಸೀರಿಯಗಳು ದೊಡ್ಡ ಪ್ರಮಾಣದ ವೀಕ್ಷಕರನ್ನು ಹಿಡಿದುಕೊಂಡಿದ್ದು, ಅದರಲ್ಲಿಯೂ ಮಹಿಳಾ ವರ್ಗವನ್ನು ಆವರಿಸಿಕೊಂಡು ಬಿಟ್ಟಿದೆ. ಸೀರಿಯಲ್ಗಳಲ್ಲಿ ಚಿಕ್ಕ ಪ್ರಮಾದವಾದರೂ ಅದನ್ನು ಸಹಿಸದ ಮಟ್ಟಿಗೆ ಪ್ರೇಕ್ಷಕರು ಹೋಗುತ್ತಾರೆ. ಹಿಂದೆಲ್ಲಾ ತಮ್ಮೊಳಗೇ ಈ ವಿಷಯಗಳನ್ನು ಚರ್ಚೆ ಮಾಡಿಕೊಳ್ಳುತ್ತಿದ್ದರು.
ಆದರೆ ಇದೀಗ ಸೋಷಿಯಲ್ ಮೀಡಿಯಾ ಸಕತ್ ಆ್ಯಕ್ಟೀವ್ ಆಗಿರುವ ಕಾಲದಲ್ಲಿ ಸೀರಿಯಲ್ಗಳನ್ನು ಎಷ್ಟರಮಟ್ಟಿಗೆ ಹೊಗಳುತ್ತಾರೋ ಅದಕ್ಕಿಂತಲೂ ಹೆಚ್ಚಿನಾದ ಬಾಯಿಗೆ ಬಂದಂತೆ ಬೈಯುವುದೂ ನಡೆಯುತ್ತದೆ.ಇದೀಗ ಬಹು ಪ್ರೇಕ್ಷಕ ವರ್ಗದ ಮನಗೆದ್ದಿರುವ ಸೀತಾರಾಮ ಸೀರಿಯಲ್ ಕಥೆ ಕೇಳಿ. ಇದೀಗ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸೀತಾ-ರಾಮ ಕಲ್ಯಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಅದ್ಧೂರಿಯಾಗಿ ನಿಶ್ಚಿತಾರ್ಥವೂ ನೆರವೇರುತ್ತಿದೆ. ಇನ್ನೇನು ಯಾವುದೇ ವಿಘ್ನ ಬಾರದಂತೆ ಸೀತಾ-ರಾಮ ಒಂದಾದರೆ ಸಾಕಪ್ಪ ಎನ್ನುವುದು ಅಭಿಮಾನಿಗಳ ಅಭಿಮತ.
ಇದರ ನಡುವೆಯೇ ಎಲ್ಲರ ಕಣ್ಣು ಕುಕ್ಕಿದ್ದು, ಸೀತೆ ಉಟ್ಟ ಸೀರೆಯ ಬಗ್ಗೆ. ಸೀತಾಳನ್ನು ನೋಡಲು ರಾಮ್ನ ಮನೆಯವರು ಬಂದಾಗ ಸೀತಾ ಉಟ್ಟ ಸೀರೆಯನ್ನು ನೋಡಿ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಟ್ರೋಲ್ ಮಾಡಲಾಗಿತ್ತು.ಕಡುನೀಲಿ ಅಂದರೆ ಇಂಕ್ ಬಣ್ಣದ ಮೇಲೆ ಬೆಳ್ಳಿ ಬಣ್ಣದ ದೊಡ್ಡ ಹೂಗಳ ಡಿಸೈನ್ ಇರುವ ಸೀರೆಯನ್ನು ಸೀತಾ ಉಟ್ಟಿದ್ದಳು. ಇದಕ್ಕೆ ಕಾಂಬಿನೇಶನ್ ಆಗಿ ಸ್ಯಾಂಡಲ್ ವುಡ್ ಕಲರ್ ಬ್ಲೌಸ್ ತೊಟ್ಟಿದ್ದಳು.
ಇದನ್ನು ವೀಕ್ಷಕರು ಸ್ವಲ್ಪವೂ ಇಷ್ಟಪಟ್ಟಿರಲಿಲ್ಲ. ಥೂ ಮಿಸ್ ಮ್ಯಾಚ್, ಅಷ್ಟೂ ಗೊತ್ತಾಗಲ್ವಾ? ಡ್ರೆಸ್ ಸೆನ್ಸ್ ಇಲ್ವಾ? ವಯಸ್ಸಾದವರ ರೀತಿ ಕಾಣಿಸ್ತಾ ಇದ್ದಾಳೆ ಸೀತಾ... ಹೀಗೆ ಏನೇನೋ ಕಮೆಂಟ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದೂ ಆಯ್ತು. ಸೀತಾ ಸೀರೆ ಸೆಲೆಕ್ಷನ್ನೇ ಸರಿಯಾಗಿಲ್ಲ, ಬ್ಲೌಸ್ ಖರಾಬಾಗಿದೆ. ಸೀತಾ ಈ ಲುಕ್ನಲ್ಲಿ ಅಜ್ಜಿ ಥರ ಕಾಣ್ತಿದ್ದಾಳೆ. ಸೀತಾಗೆ ಸ್ವಲ್ಪನೂ ಡೆಸ್ ಸೆನ್ಸ್ ಇಲ್ಲ ಎಂದೆಲ್ಲಾ ಹೇಳಿ ಕಾಮೆಂಟ್ ಮಾಡಿದ್ದರು.ಇದೀಗ ಸೀತಾ ಪಾತ್ರದಾರಿ ವೈಷ್ಣವಿ ಗೌಡ ನೂರಾರು ಕಮೆಂಟ್ಗಳನ್ನು ಓದಿ ಬೇಸರ ವ್ಯಕ್ತಪಡಿಸಿದ್ದಾರೆ. ಅಂದ ಮಾತ್ರಕ್ಕೆ ಅವರೇನೂ ಕಮೆಂಟ್ ಮಾಡಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಲಿಲ್ಲ.
ಬದಲಿಗೆ ತಾವು ಅಂದು ಉಟ್ಟುಕೊಂಡಿದ್ದ ಸೀರೆ-ಬ್ಲೌಸ್ ನೋಡಿ ವೀಕ್ಷಕರಿಗೆ ತುಂಬಾ ಬೇಸರವಾಗಿರುವ ಬಗ್ಗೆ ವೈಷ್ಣವಿ ಅವರು ಬೇಸರಿಸಿಕೊಂಡಿದ್ದಾರೆ. ಸಾರಿ. ನಿಮ್ಮ ರಾಶಿ ರಾಶಿ ಕಮೆಂಟ್ಗಳನ್ನು ನೋಡಿದೆ. ಅದು ಅರ್ಜೆಂಟ್ನಲ್ಲಿ ಆಗಿ ಹೋಯ್ತು. ನಾನೂ ಸರಿಯಾಗಿ ಗಮನಿಸಲಿಲ್ಲ. ನಿಮಗೆಲ್ಲಾ ಬೇಸರವಾಗಿದೆ ಎನ್ನುವುದು ಕಮೆಂಟ್ ನೋಡಿದರೆ ತಿಳಿಯುತ್ತದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಮುಂದೆಂದೂ ಹೀಗೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.