ಅಜಿತ್ ಹನುಮಕ್ಕರ್ ಗೆ ಬೆವರಿಳಿಸಿದ ವಕೀಲ್ ಸಾಬ್, ಫಿದಾ ಆದ ಕನ್ನಡಿಗರು
| Aug 4, 2025, 18:25 IST
ಸುವರ್ಣ ನ್ಯೂಸ್ ಆಂಕರ್ ಹನಮಕ್ಕನವರ್ ಅವರು ಇತ್ತಿಚೆಗೆ ಸೌಜನ್ಯ ಕೇಸ್ ವಿಚಾರವಾಗಿ ಹಿಂದೂ ಧರ್ಮದ ಬಗ್ಗೆ ಅಪಹಾಸ್ಯ ಹಿಂದೂ ಧಾರ್ಮಿಕ ಕ್ಷೇತದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಅಂತ ನ್ಯೂಸ್ ಚಾನಲ್ ಮೂಲಕ ಡಿಬೆಟ್ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ವಕೀಲರ ಜೊತೆ ಡಿಬೆಟ್ ಮೂಲಕ ಸಾಕಷ್ಟು ಗೊಂದಲ ಕೂಡ ಉಂಟು ಮಾಡಿದ್ದಾರೆ.
ಹೌದು, ಸೌಜನ್ಯಗೆ ನ್ಯಾಯ ಸಿಗಬೇಕು ಅಂತ ಅಜಿತ್ ಅವರು ಎಲ್ಲೂ ಮಾತಾಡುಲ್ಲ. ಆ ಅರೋಪಿಗೆ ಶಿಕ್ಷೆ ಆಗಬೇಕು ಅಂತನೂ ಅಜಿತ್ ಅವರು ಮಾತಾಡಿಲ್ಲ, ಕೇವಲ ಹಿಂದೂ ಧರ್ಮ, ಧಾರ್ಮಿಕ ಕ್ಷೇತ್ರ ಅಂತ ಡಿಬೆಟ್ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಲಾಯರೊಬ್ಬರು ಅಜಿತ್ ಅವರಿಗೆ ಸಾಕಷ್ಟು ಪ್ರಶ್ನೆ ಮಾಡಿದ್ದಾರೆ. ಲಾಯರ್ ಪ್ರಶ್ನೆಗೆ ಅಜಿತ್ ಅವರು ಕಕ್ಕಾಬಿಕ್ಕಿಯಾಗಿರುವ ವಿಡಿಯೋವನ್ನು ನಾವು ಗಮನಿಸಬಹುದು.
ಇನ್ನು ಅಜಿತ್ ಅವರು ಇತ್ತಿಚೆಗೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರನ್ನು ಡಿಬೆಟ್ ಗೆ ಕರೆದಿದ್ದರು. ಆದರೆ ಇವರಾರು ಬಂದಿಲ್ಲ. ಈ ಡಿಬೆಟ್ ಗೆ ಬಂದಿದ್ದು ಕಬ್ಜ ಶರಣ್ ಎಂಬ ಯುವಕ, ಈತನ ಅಜಿತ್ ಅವರ ಬಳಿ ನಿಮ್ಮ ಧರ್ಮ ಯಾವುದು ಅಂತ ಪ್ರಶ್ನೆ ಮಾಡಿದ್ದಾಗ ಅಜಿತ್ ಅವರು ನನ್ನ ಧರ್ಮ ಪಬ್ಲಿಕ್ ಮುಂದೆ ಹೇಳುವ ಅವಶ್ಯಕತೆ ಇಲ್ಲ ಅಂದಿದ್ದಾರೆ.