'ನಿನ್ನ ಎದೆ ಸಣ್ಣದಿದೆ' ಸರಿಯಾಗಿ ತಿಂದು ದಪ್ಪ ಆಗು ಎಂದದ್ದ ನಿರ್ಮಾಪಕ' ಆದರೆ ಈಕೆ ಮಾಡಿದ ಉಪಾಯ ಏ ನು ಗೊ ತ್ತಾ

ನಟಿ ಸೋನಾಲಿ ಬೇಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಟಿಯರ ಪೈಕಿ ಸೋನಾಲಿ ಬೇಂದ್ರೆ ಕೂಡ ಒಬ್ಬರು. ಬಾಲಿವುಡ್, ಮರಾಠಿ ಸಿನಿಮಾಗಳ ಜತೆಗೆ ದಕ್ಷಿಣದ ದಕ್ಷಿಣದಲ್ಲಿ ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲೂ ಈ ನಟಿ ಮಿಂಚಿದ್ದಾರೆ. 90ರ ದಶಕದಲ್ಲಿ ಬಹುಭಾಷೆಗಳಲ್ಲಿ ನಟಿಸುತ್ತ ಸೈ ಎನಿಸಿಕೊಂಡಿದ್ದ ಸೋನಾಲಿ.
ತಮ್ಮ ನೀಳ ಕಾಯದ ಅಂದ ಚೆಂದದ ಮೂಲಕವೂ ಎಲ್ಲರನ್ನು ಆಕರ್ಷಿಸಿದ್ದರು. ಸ್ಟಾರ್ ಹೀರೋಗಳಿಗೂ ನಾಯಕಿಯಾಗಿಯೂ ನಟಿಸಿದರು.ಅದಾಗಲೇ ಹಿಂದಿ ಮತ್ತು ದಕ್ಷಿಣದ ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ಹೆಸರು ಮಾಡಿದ್ದ ಸೋನಾಲಿ, 2000ರಲ್ಲಿ ಕನ್ನಡಕ್ಕೂ ಆಗಮಿಸಿದರು. ಸೈಕಲಾಜಿಕಲ್ ಥ್ರಿಲ್ಲರ್ ಪ್ರೀತ್ಸೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೂ ಪರಿಚಿತರಾದರು.
ಶಿವರಾಜ್ಕುಮಾರ್ ಮತ್ತು ಉಪೇಂದ್ರ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಿದರೆ, ಈ ಇಬ್ಬರಿಗೂ ನಾಯಕಿಯಾಗಿದ್ದರು ಸೋನಾಲಿ. ಕಿರಣ್ ಎಂಬ ಪಾತ್ರದ ಮೂಲಕವೇ ಗಮನ ಸೆಳೆದು, ಯಾರಿಟ್ಟರಿ ಚುಕ್ಕಿ ಹಾಡಿನಿಂದಲೂ ಈಗಲೂ ಕನ್ನಡಿಗರ ನೆನಪಿನಲ್ಲಿದ್ದಾರೆ.
ಈ ಸಿನಿಮಾಗಳ ಜತೆಗೆ ತೆಲುಗಿನಲ್ಲಿ ಮಹೇಶ್ ಬಾಬು ಜತೆಗೆ ಮುರಾರಿ ಸಿನಿಮಾದಲ್ಲೂ ನಟಿಸಿದರು. ಆ ಚಿತ್ರ ಸೂಪರ್ ಹಿಟ್ ಆಯಿತು. ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿಯೂ ಈ ಸಿನಿಮಾ ಒಂದು ಮೈಲಿಗಲ್ಲಾಯಿತು. ಸೋನಾಲಿ ಬೇಂದ್ರೆ ಈ ಚಿತ್ರದಲ್ಲಿ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು.
ನಂತರ ಇಂದ್ರ ಚಿತ್ರದಲ್ಲಿ ಚಿರಂಜೀವಿ ಎದುರು ಕಾಣಿಸಿಕೊಂಡರು. ಅದಾದ ಬಳಿಕ ಖಡ್ಗಂ ಚಿತ್ರದಲ್ಲೂ ನಟಿಸಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರು. ಆದರೆ, ಕನ್ನಡಕ್ಕೆ ಮಾತ್ರ ಮತ್ತೆ ಮರಳಲಿಲ್ಲ. ಪ್ರೀತ್ಸೆ ಚಿತ್ರವೇ ಕೊನೇ ಎಕೆಂದರೆ 90ರ ಕಾಲಘಟ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿ ಪಟ್ಟ ಪಡೆದಿದ್ದ ಸೋನಾಲಿಗೆ ನಿರ್ಮಾಪಕರು ವಿಶೇಷ ಬೇಡಿಕೆ ಇಟ್ಟಿದ್ದರಂತೆ. ನಮ್ಮ ಸಿನಿಮಾಕ್ಕೆ ತೆಳ್ಳನೆಯ ನಾಯಕಿಗಿಂತ, ಕೊಂಚ ದಪ್ಪ ಇರುವ ನಟಿಯೇ ಸೂಟ್ ಆಗ್ತಾರೆ. ನೀವ್ಯಾಕೆ ದಪ್ಪ ಆಗಬಾರದು? ಎಂದಿದ್ದರಂತೆ, ಅದನ್ನು ಸ್ವತಃ ಸೋನಾಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.